ಆ್ಯಪ್ನಗರ

ಶೂನ್ಯ ಫಲಿತಾಂಶ ಪಡೆಯುವ ಶಾಲೆಗಳನ್ನು 'ಶೂನ್ಯ'ಗೊಳಿಸುವ ಕಾರ್ಯ ಮಾತ್ರ ಆಗಿಲ್ಲ

ಶೂನ್ಯ ಫಲಿತಾಂಶ ಪಡೆದಿರುವ ಶಾಲೆಗಳಲ್ಲಿಅಗತ್ಯ ಮೂಲ ಸೌಕರ್ಯ ಇಲ್ಲ. ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೈಕ್ಷಣಿಕ ವಾತಾವರಣ ಇಲ್ಲದಿರುವುದರಿಂದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾರೆ.

Vijaya Karnataka Web 24 May 2022, 7:49 am
ದೇವರಾಜ್‌ ಕನಕಪುರ, ಬೆಂಗಳೂರು
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಶೂನ್ಯ ಫಲಿತಾಂಶ ಪಡೆಯುವ ಶಾಲೆಗಳನ್ನು 'ಶೂನ್ಯ'ಗೊಳಿಸುವ ಕಾರ್ಯ ಮಾತ್ರ ಸಾಧ್ಯವಾಗುತ್ತಿಲ್ಲ.

ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ20 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಈ ಪೈಕಿ ಸರಕಾರಿ 2, ಅನುದಾನಿತ 3 ಮತ್ತು 15 ಖಾಸಗಿ ಶಾಲೆಗಳಿವೆ. ಅದರಲ್ಲೂ ಬೆಂಗಳೂರಿನಲ್ಲೇ 9 ಶಾಲೆಗಳಿವೆ. ಎರಡೂ ಸರಕಾರಿ ಶಾಲೆಗಳು ಬೆಂಗಳೂರು ನಗರದಲ್ಲೇ ಇವೆ ಎಂಬುದು ಗಮನಾರ್ಹ ಸಂಗತಿ.

ಶಾಲಾ ಪಠ್ಯಕ್ಕೆ ಚಕ್ರವರ್ತಿ ಸೂಲಿಬೆಲೆ ಪುಸ್ತಕದ ಗದ್ಯ! ಹೊಸ ವಿವಾದಕ್ಕೆ ನಾಂದಿ

20 ಶಾಲೆಗಳಲ್ಲಿಒಟ್ಟು 145 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖುಷಿಯ ವಿಚಾರ ಎಂದರೆ, ಪ್ರತಿ ವರ್ಷ ಶೂನ್ಯ ಫಲಿತಾಂಶ ಪಡೆಯುವ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. 2018 ರಲ್ಲಿ 43 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. 2022ಕ್ಕೆ ಈ ಶಾಲೆಗU ಸಂಖ್ಯೆ 20 ತಲುಪಿವೆ.

ಅದೇ ರೀತಿ 2018 ರಲ್ಲಿ 1,342 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಪ್ರಸಕ್ತ ವರ್ಷ ಅದು 3,920ಕ್ಕೆ ಏರಿಕೆಯಾಗಿದೆ.

5 ಕ್ಕಿಂತ ಕಮ್ಮಿ ವಿದ್ಯಾರ್ಥಿಗಳು

ಶೂನ್ಯ ಫಲಿತಾಂಶ ಪಡೆದಿರುವ 20 ಶಾಲೆಗಳ ಪೈಕಿ 10 ಶಾಲೆಗಳಲ್ಲಿ 5 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇರುವ ಒಂದೆರಡು ವಿದ್ಯಾರ್ಥಿಗಳಿಗೂ ಶಾಲೆಗಳು ಶಿಕ್ಷಕರನ್ನು ನೇಮಕ ಮಾಡಿ ಬೋಧನೆ ಮಾಡಿಸಿದೆ.

ಅಗತ್ಯ ಮೂಲ ಸೌಕರ್ಯ ಕೊರತೆ

ಶೂನ್ಯ ಫಲಿತಾಂಶ ಪಡೆದಿರುವ ಶಾಲೆಗಳಲ್ಲಿಅಗತ್ಯ ಮೂಲ ಸೌಕರ್ಯ ಇಲ್ಲ. ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೈಕ್ಷಣಿಕ ವಾತಾವರಣ ಇಲ್ಲದಿರುವುದರಿಂದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಶಾಲೆ ನಡೆಸುವ ಉದ್ದೇಶದಿಂದ ಶಿಕ್ಷಕರು ಶಾಲೆ ಬಿಟ್ಟ ಮಕ್ಕಳನ್ನು ಕರೆ ತಂದು ಮಕ್ಕಳಿಗೆ ಅತಿಥಿ ಉಪನ್ಯಾಸಕರಿಂದ ಶಿಕ್ಷಣ ಕೊಡಿಸುತ್ತಿದ್ದಾರೆ. ಇಂತಹ ಮಕ್ಕಳಿಂದ ಹೆಚ್ಚಿನ ಫಲಿತಾಂಶ ನಿರೀಕ್ಷಿಸುವುದು ಶಾಲಾ ಮುಖ್ಯೋಪಾಧ್ಯಾಯರಿಗೆ ಕಷ್ಟವಾಗಿದೆ.

ಆರೆಸ್ಸೆಸ್‌ ಅಜೆಂಡಾ ಬಿತ್ತುವ ಪಠ್ಯ ಪುಸ್ತಕ ಹಿಂಪಡೆಯಿರಿ: ಮೇ 31 ಕ್ಕೆ ರಾಜ್ಯಾದ್ಯಂತ ಚಿಂತಕರ ಒಕ್ಕೂಟದಿಂದ ಪ್ರತಿಭಟನೆ!

ಎಲ್ಲಿಎಷ್ಟು ಶಾಲೆ?ಶೂನ್ಯ ಫಲಿತಾಂಶ ಪಡೆದ 20 ಶಾಲೆಗಳ ಪೈಕಿ ಬೆಂಗಳೂರು ಉತ್ತರ-3, ಬೆಂಗಳೂರು ದಕ್ಷಿಣ- 6, ಯಾದಗಿರಿ-4, ಧಾರವಾಡ-2, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಂದು ಶಾಲೆಗಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ