ಆ್ಯಪ್ನಗರ

ಪಬ್‌ನಲ್ಲಿ ಸಿಬ್ಬಂದಿ ಮಾರಾಮಾರಿ: ಗ್ರಾಹಕರಿಗೆ ಗಾಯ

ದೀಪಕ್ ಹಾಗೂ ಆನಂದ್ ಹಲ್ಲೆಗೊಳಗಾದ ಸ್ನೇಹಿತರಾಗಿದ್ದು, ಅವರಲ್ಲಿ ಆನಂದ ಸ್ಥಿತಿ ಗಂಭೀರವಾಗಿದೆ.

Vijaya Karnataka Web 6 May 2019, 12:56 pm
ಬೆಂಗಳೂರು: ಕೋರಮಂಗಲದ ಪ್ರತಿಷ್ಟಿತ ಬಾರ್ಲೀಸ್ ಬ್ರೂ ಪಬ್ನಲ್ಲಿ ಭಾನುವಾರ ತಡರಾತ್ರಿ ಸಿಬ್ಬಂದಿ ನಡುವೆ ನಡೆದ ಮಾರಾಮಾರಿಯಲ್ಲಿ ಗ್ರಾಹಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web Police Hat


ದೀಪಕ್ ಹಾಗೂ ಆನಂದ್ ಹಲ್ಲೆಗೊಳಗಾದ ಸ್ನೇಹಿತರಾಗಿದ್ದು, ಅವರಲ್ಲಿ ಆನಂದ ಸ್ಥಿತಿ ಗಂಭೀರವಾಗಿದೆ.

ತಡರಾತ್ರಿ 12 ಗಂಟೆಗೆ ಪಾರ್ಟಿ ಇದ್ದ ಕಾರಣ ದೀಪಕ್ ಹಾಗೂ ಆನಂದ್ ಪಬ್‌ಗೆ ತೆರಳಿದ್ದರು. ಈ ವೇಳೆ,ಸಿಬ್ಬಂದಿಗಳ ನಡುವೆ ಜಗಳ ಶುರುವಾಗಿದೆ.

ಪಬ್‌ನಲ್ಲಿದ್ದ ಕುರ್ಚಿಗಳನ್ನ ಎಸೆದಾಡಿ ಜಗಳವಾಡುತ್ತಿದ್ದ ಸಿಬ್ಬಂದಿಗಳನ್ನು ಸಮಾಧಾನ ಪಡಿಸಲು ದೀಪಕ್ ಹಾಗೂ ಆನಂದ್ ಪ್ರಯತ್ನಿಸಿದಾಗ, ಅವರ ಮೇಲೆ ಮೆಟಲ್ ಚೇರ್ ನಿಂದ ಹಲ್ಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ,ಪಾರ್ಟಿಯಲ್ಲಿದ್ದ ಇತರ ಕೆಲವರ ಮೇಲೆ ಸಹ ಪಬ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೌನ್ಸರ್ಸ್‌ಗಳನ್ನ ಕರೆದರೂ ಸಹ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಾಗಲಿಲ್ಲ.

ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ,ರಕ್ತಸ್ರಾವವಾಗಿ ಆನಂದ್ ಅಲ್ಲಿಯೇ ಕುಸಿದು ಬಿದ್ದ. ತಕ್ಷಣ ದೀಪಕ್ ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ಬರುವಷ್ಟರಲ್ಲಿ ಕೆಲ ಸಿಬ್ಬಂದಿಗಳು ಪರಾರಿಯಾಗಿದ್ದು, ಸದ್ಯ ಮೂವರು ಮಾತ್ರ ಕೋರ ಮಂಗಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಸಿಬ್ಬಂದಿಗಳು ಕ್ಲುಲ್ಲಕ ಕಾರಣಕ್ಕೆ‌ ಜಗಳವಾಡಿ ರಂಪಾಟ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆನಂದ್ ಹಾಗೂ ದೀಪಕ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆನಂದ್‌ಗೆ 8 ಸ್ಟಿಚಸ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ