ಗುರು ರಾಘವೇಂದ್ರ ಬ್ಯಾಂಕ್ನ ಎಲ್ಲ ಶಾಖೆಗಳ ವಿಲೀನ..! ಜ.1 ರಿಂದ ಬಸವನಗುಡಿ ಶಾಖೆಯಲ್ಲೇ ವ್ಯವಹಾರ
ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಎಲ್ಲ ಆರು ಶಾಖೆಗಳನ್ನು ಬಸವನಗುಡಿ ಶಾಖೆಯೊಂದಿಗೆ ವಿಲೀನಗೊಳಿಸಲಾಗಿದೆ. 2021ರ ಜನವರಿ 1 ರಿಂದ ಬ್ಯಾಂಕ್ನ ಎಲ್ಲ ಗ್ರಾಹಕರು ಎಲ್ಲ ಸೇವೆಗಳನ್ನು ಬಸವನಗುಡಿ ಶಾಖೆಯಲ್ಲಿಯೇ ಪಡೆಯಬೇಕಾಗಿದೆ.
Vijaya Karnataka Web 29 Nov 2020, 8:46 pm
ಬೆಂಗಳೂರು: ಅವ್ಯವಹಾರ, ಅಕ್ರಮಗಳಿಂದಾಗಿ ಭಾರಿ ನಷ್ಟದಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಆರು ಶಾಖೆಗಳನ್ನು ಬಸವನಗುಡಿ ಶಾಖೆಯೊಂದಿಗೆ ವಿಲೀನ ಮಾಡಲಾಗಿದೆ.
ಕನಕಪುರ ರಸ್ತೆ, ಕೆಂಗೇರಿ ಸ್ಯಾಟಲೈಟ್ ಟೌನ್, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ, ರಾಜಾಜಿನಗರ, ಬಿಟಿಎಂ ಲೇಔಟ್ ಶಾಖೆಗಳನ್ನು ನೆಟ್ಟಕಲ್ಲಪ್ಪ ವೃತ್ತದ ಬಳಿಯ ಶಾಖೆಯೊಂದಿಗೆ ವಿಲೀನ ಮಾಡಲಾಗಿದೆ. ಈ ಆರು ಶಾಖೆಗಳಲ್ಲಿ ವ್ಯವಹಾರ ನಡೆಸುತ್ತಿದ್ದವರು 2021ರ ಜ.1ರಿಂದ ಬಸವನಗುಡಿ ಶಾಖೆಗೆ ತೆರಳಿ ಸೇವೆ ಪಡೆಯಬೇಕು ಎಂದು ನೋಟಿಸ್ ಮೂಲಕ ಬ್ಯಾಂಕಿನ ಆಡಳಿತಾಧಿಕಾರಿ ಆರ್.ಅಶೋಕನ್ ತಿಳಿಸಿದ್ದಾರೆ.
ಬ್ಯಾಂಕ್ ಉಳಿವಿಗೆ ಯತ್ನ:
ಬ್ಯಾಂಕ್ ಪುನರುಜ್ಜೀವನಗೊಳಿಸುವ ಪ್ರಯತ್ನ ಮುಂದುವರಿದಿದೆ. ಬ್ಯಾಂಕ್ ಈ ಪರಿಸ್ಥಿತಿಗೆ ಬರುತ್ತಿರುವುದನ್ನು ಕಣ್ಣಾರೆ ಕಂಡವರು ಇನ್ನು ಕೂಡ ಪ್ರಧಾನ ಕಚೇರಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಖರ್ಚು, ಕಡಿತಗಳನ್ನು ಮಾಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಹಿಂದೆ ಕೆಲಸ ಮಾಡುತ್ತಿದ್ದವರಿಂದ ಅಂತರ ಕಾಯ್ದುಕೊಂಡು ಬೇರೆ ವಿಭಾಗಗಳಿಗೆ ಕಳುಹಿಸಲಾಗಿದೆ. ಬೇರೆ ಬೇರೆ ತಂಡಗಳನ್ನು ರಚಿಸಿ ಬ್ಯಾಂಕಿನ ಸ್ವತ್ತುಗಳು ಮತ್ತು ಋುಣಭಾರದ ಕುರಿತು ಪರಿಶೀಲನೆ ಮಾಡಿದ್ದೇನೆ ಎಂದರು.
ಗುರು ರಾಘವೇಂದ್ರ ಬ್ಯಾಂಕ್ ಹಗರಣ: 45.32 ಕೋಟಿ ರೂ. ಸ್ಥಿರಾಸ್ತಿ, ಚರಾಸ್ತಿ ಜಪ್ತಿ
ಕಷ್ಟ ಪಟ್ಟು ದುಡಿದ, ನಿವೃತ್ತಿ ಹಣ ಠೇವಣಿಯಿಟ್ಟವರ ಕಷ್ಟ ಅರ್ಥ ಮಾಡಿಕೊಂಡು ಹಣ ಮರಳಿಸಲು ಆಗಬೇಕಾದ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬರುವ ದಿನಗಳಲ್ಲಿ ಠೇವಣಿದಾರರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಸಂಸದರು ಮತ್ತು ಶಾಸಕರ ಸಹಕಾರ ಇದೆ. ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕಾಲ ಕಾಲಕ್ಕೆ ಸಾರ್ವಜನಿಕರ ಮುಂದೆ ಇರಿಸುತ್ತೇನೆ ಎಂದು ಅಶೋಕನ್ ತಿಳಿಸಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ಹಗರಣ ಕೇಸ್; ಆಡಳಿತಾಧಿಕಾರಿ ನೇಮಿಸುವಂತೆ ಹೈಕೋರ್ಟ್ ಸೂಚನೆ
ಕನಕಪುರ ರಸ್ತೆ, ಕೆಂಗೇರಿ ಸ್ಯಾಟಲೈಟ್ ಟೌನ್, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ, ರಾಜಾಜಿನಗರ, ಬಿಟಿಎಂ ಲೇಔಟ್ ಶಾಖೆಗಳನ್ನು ನೆಟ್ಟಕಲ್ಲಪ್ಪ ವೃತ್ತದ ಬಳಿಯ ಶಾಖೆಯೊಂದಿಗೆ ವಿಲೀನ ಮಾಡಲಾಗಿದೆ. ಈ ಆರು ಶಾಖೆಗಳಲ್ಲಿ ವ್ಯವಹಾರ ನಡೆಸುತ್ತಿದ್ದವರು 2021ರ ಜ.1ರಿಂದ ಬಸವನಗುಡಿ ಶಾಖೆಗೆ ತೆರಳಿ ಸೇವೆ ಪಡೆಯಬೇಕು ಎಂದು ನೋಟಿಸ್ ಮೂಲಕ ಬ್ಯಾಂಕಿನ ಆಡಳಿತಾಧಿಕಾರಿ ಆರ್.ಅಶೋಕನ್ ತಿಳಿಸಿದ್ದಾರೆ.
ಬ್ಯಾಂಕ್ ಉಳಿವಿಗೆ ಯತ್ನ:
ಬ್ಯಾಂಕ್ ಪುನರುಜ್ಜೀವನಗೊಳಿಸುವ ಪ್ರಯತ್ನ ಮುಂದುವರಿದಿದೆ. ಬ್ಯಾಂಕ್ ಈ ಪರಿಸ್ಥಿತಿಗೆ ಬರುತ್ತಿರುವುದನ್ನು ಕಣ್ಣಾರೆ ಕಂಡವರು ಇನ್ನು ಕೂಡ ಪ್ರಧಾನ ಕಚೇರಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಖರ್ಚು, ಕಡಿತಗಳನ್ನು ಮಾಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಹಿಂದೆ ಕೆಲಸ ಮಾಡುತ್ತಿದ್ದವರಿಂದ ಅಂತರ ಕಾಯ್ದುಕೊಂಡು ಬೇರೆ ವಿಭಾಗಗಳಿಗೆ ಕಳುಹಿಸಲಾಗಿದೆ. ಬೇರೆ ಬೇರೆ ತಂಡಗಳನ್ನು ರಚಿಸಿ ಬ್ಯಾಂಕಿನ ಸ್ವತ್ತುಗಳು ಮತ್ತು ಋುಣಭಾರದ ಕುರಿತು ಪರಿಶೀಲನೆ ಮಾಡಿದ್ದೇನೆ ಎಂದರು.
ಗುರು ರಾಘವೇಂದ್ರ ಬ್ಯಾಂಕ್ ಹಗರಣ: 45.32 ಕೋಟಿ ರೂ. ಸ್ಥಿರಾಸ್ತಿ, ಚರಾಸ್ತಿ ಜಪ್ತಿ
ಕಷ್ಟ ಪಟ್ಟು ದುಡಿದ, ನಿವೃತ್ತಿ ಹಣ ಠೇವಣಿಯಿಟ್ಟವರ ಕಷ್ಟ ಅರ್ಥ ಮಾಡಿಕೊಂಡು ಹಣ ಮರಳಿಸಲು ಆಗಬೇಕಾದ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬರುವ ದಿನಗಳಲ್ಲಿ ಠೇವಣಿದಾರರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಸಂಸದರು ಮತ್ತು ಶಾಸಕರ ಸಹಕಾರ ಇದೆ. ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕಾಲ ಕಾಲಕ್ಕೆ ಸಾರ್ವಜನಿಕರ ಮುಂದೆ ಇರಿಸುತ್ತೇನೆ ಎಂದು ಅಶೋಕನ್ ತಿಳಿಸಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ಹಗರಣ ಕೇಸ್; ಆಡಳಿತಾಧಿಕಾರಿ ನೇಮಿಸುವಂತೆ ಹೈಕೋರ್ಟ್ ಸೂಚನೆ