ಮೊಬೈಲ್ನಲ್ಲಿ ಮೆಸೇಜ್ ಚೆಕ್ ಮಾಡಿದ್ದಕ್ಕೆ ಗಂಡನ ಬೆರಳಿಗೆ ಕುತ್ತು
ಕೈಗೊಂಡನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ಮೊಬೈಲ್ ನಲ್ಲಿ ಮೆಸೇಜ್ ಚೆಕ್ ಮಾಡಿದ್ದಕ್ಕೆ ಸಿಟ್ಟಿಗೆದ್ದು ಗಂಡನ ಮೂರು ಬೆರಳನ್ನು ಕತ್ತರಿಸಿದ್ದಾರೆ.
ವಿಕ ಸುದ್ದಿಲೋಕ 15 May 2016, 2:37 pm
ಸರ್ಜಾಪುರ: ಕೈಗೊಂಡನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ಮೊಬೈಲ್ ನಲ್ಲಿ ಮೆಸೇಜ್ ಚೆಕ್ ಮಾಡಿದ್ದಕ್ಕೆ ಸಿಟ್ಟಿಗೆದ್ದು ಗಂಡನ ಮೂರು ಬೆರಳನ್ನು ಕತ್ತರಿಸಿದ್ದಾರೆ.
ಚಂದ್ರಕಾಂತ್ ಹೆಂಡತಿಯಿಂದ ಬೆರಳು ಕತ್ತರಿಸಿಕೊಂಡ ವ್ಯಕ್ತಿಯಾಗಿದ್ದು, ಎಂಎನ್ಸಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸುನೀತಾ ಸಿಂಗ್ ಯಾವಾಗಲೂ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಿದ್ದು, ಇದನ್ನು ಅನುಮಾನಿಸಿದ ಚಂದ್ರಕಾಂತ್ ಹೆಂಡತಿಯ ಮೊಬೈಲ್ ತೆಗೆದುಕೊಂಡು ಮೆಸೇಜ್ ಚೆಕ್ ಮಾಡಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ಮೆಸೇಜ್ ಗಳನ್ನು ನೋಡಿ ಪತ್ನಿಯೊಂದಿಗೆ ಜಗಳ ತೆಗೆದಿದ್ದು, ಕೋಪಗೊಂಡ ಪತ್ನಿ ಚಾಕುವಿನಿಂದ ಗಂಡನ 3 ಬೆರಳನ್ನು ಕತ್ತರಿಸಿ ಹಾಕಿದ್ದಾರೆ.
ಸದ್ಯ ಬೆರಳು ಕಳೆದುಕೊಂಡಿರುವ ಚಂದ್ರಕಾಂತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪತಿ-ಪತ್ನಿ ಇಬ್ಬರು ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಂದ್ರಕಾಂತ್ ಹೆಂಡತಿಯಿಂದ ಬೆರಳು ಕತ್ತರಿಸಿಕೊಂಡ ವ್ಯಕ್ತಿಯಾಗಿದ್ದು, ಎಂಎನ್ಸಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸುನೀತಾ ಸಿಂಗ್ ಯಾವಾಗಲೂ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಿದ್ದು, ಇದನ್ನು ಅನುಮಾನಿಸಿದ ಚಂದ್ರಕಾಂತ್ ಹೆಂಡತಿಯ ಮೊಬೈಲ್ ತೆಗೆದುಕೊಂಡು ಮೆಸೇಜ್ ಚೆಕ್ ಮಾಡಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ಮೆಸೇಜ್ ಗಳನ್ನು ನೋಡಿ ಪತ್ನಿಯೊಂದಿಗೆ ಜಗಳ ತೆಗೆದಿದ್ದು, ಕೋಪಗೊಂಡ ಪತ್ನಿ ಚಾಕುವಿನಿಂದ ಗಂಡನ 3 ಬೆರಳನ್ನು ಕತ್ತರಿಸಿ ಹಾಕಿದ್ದಾರೆ.
ಸದ್ಯ ಬೆರಳು ಕಳೆದುಕೊಂಡಿರುವ ಚಂದ್ರಕಾಂತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪತಿ-ಪತ್ನಿ ಇಬ್ಬರು ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.