ವಿಕ ಸುದ್ದಿಲೋಕ ಬೆಂಗಳೂರು
ಗೊಟ್ಟಿಗೆರೆ-ನಾಗವಾರ ಮೆಟ್ರೊ ಯೋಜನೆಯಲ್ಲಿ ವೆಲ್ಲಾರ ಜಂಕ್ಷನ್ನ ಆಲ್ ಸೇಂಟ್ಸ್ ಚರ್ಚ್ನ ಜಾಗ ಹಾಗೂ 80 ಮರಗಳನ್ನು ಉಳಿಸಲು, ಎರಡು ನಿಲ್ದಾಣ ಬದಲು ಒಂದೇ ನಿಲ್ದಾಣ ನಿರ್ಮಿಸಬೇಕೆಂದು ಚರ್ಚ್ ಮಾಡಿದ್ದ ಮನವಿಯನ್ನು ಬಿಎಂಆರ್ಸಿಎಲ್ ತಿರಸ್ಕರಿಸಿದೆ.
ಈ ಯೋಜನೆಯಲ್ಲಿ 877 ಮೀಟರ್ ಅಂತರದಲ್ಲಿ ವೆಲ್ಲಾರ ಜಂಕ್ಷನ್ ಹಾಗೂ ಲ್ಯಾಂಗ್ಫೋರ್ಡ್ ನಿಲ್ದಾಣಗಳು ನಿರ್ಮಾಣವಾಗಲಿವೆ. ವೆಲ್ಲಾರ್ ಜಂಕ್ಷನ್ ನಿಲ್ದಾಣ ಹಾಗೂ ಮಾರ್ಗ ನಿರ್ಮಾಣಕ್ಕೆ ಚರ್ಚ್ನ 80 ಮರಗಳನ್ನು ಕಡಿಯಲಾಗುತ್ತದೆ. ಹೀಗಾಗಿ ಈ ನಿಲ್ದಾಣವನ್ನು ಕೈಬಿಟ್ಟು ಲ್ಯಾಂಗ್ಫೋರ್ಡ್ ನಿಲ್ದಾಣ ಮಾತ್ರ ನಿರ್ಮಿಸಬೇಕೆಂದು ಚರ್ಚ್ನ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಯುನೈಟೆಡ್ ಕನ್ಸರ್ವೇಶನ್ ಮೂವ್ಮೆಂಟ್ ಪ್ರತಿನಿಧಿಗಳು ಕೂಡ ಕೋರಿಕೆ ಸಲ್ಲಿಸಿದ್ದರು.
ಚರ್ಚ್ನ ಈಶಾನ್ಯ ಭಾಗದ ಸ್ವಲ್ಪ ಭೂಮಿಯನ್ನು ಕ್ರೇನ್ ಮೊದಲಾದ ಯಂತ್ರೋಪಕರಣಗಳನ್ನು ಇರಿಸಲು ಹಾಗೂ ಸುರಂಗ ಕಾಮಗಾರಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆವರಣದಲ್ಲಿ 50ಕ್ಕಿಂತಲೂ ಕಡಿಮೆ ಮರಗಳಿದ್ದು, ಹಲವು ಮರಗಳನ್ನು ಸ್ಥಳಾಂತರಿಸಿ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ನಿಲ್ದಾಣದ ನಿರ್ಮಾಣವನ್ನು ಕೈಬಿಡುವುದು ಸಾಧ್ಯವಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಲ್ಯಾಂಗ್ಫೋರ್ಡ್ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ನಿಲ್ದಾಣ ನಡುವೆ ವೆಲ್ಲಾರ ಜಂಕ್ಷನ್ ನಿಲ್ದಾಣ ನಿರ್ಮಾಣವಾಗಲಿದೆ. ಲ್ಯಾಂಗ್ಫೋರ್ಡ್-ವೆಲ್ಲಾರ ನಡುವೆ 877 ಮೀಟರ್, ವೆಲ್ಲಾರ-ಎಂ.ಜಿ.ರಸ್ತೆ ನಡುವೆ 1,266 ಮೀಟರ್ ಅಂತರವಿದೆ. ವೆಲ್ಲಾರ ಜಂಕ್ಷನ್ ನಿಲ್ದಾಣ ನಿರ್ಮಿಸದಿದ್ದರೆ ಲ್ಯಾಂಗ್ಫೋರ್ಡ್-ಎಂ.ಜಿ.ರಸ್ತೆ ನಡುವಿನ ಅಂತರ 2,144 ಮೀಟರ್ ಆಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ವೆಲ್ಲಾರ ಜಂಕ್ಷನ್ ನಿಲ್ದಾಣವಿಲ್ಲದ್ದಿದ್ದರೆ ಫುಟ್ಬಾಲ್ ಸ್ಟೇಡಿಯಂ, ಗರುಡಾ ಮಾಲ್, ಕೆಥಾಡ್ರೆಲ್ ಹೈಸ್ಕೂಲ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಫಿಲೊಮಿನ ಚರ್ಚ್ ಮೊದಲಾದ ಕಡೆ ಬರುವವರು ಮೆಟ್ರೊ ಬಳಸಲು ಸಾಧ್ಯವಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಇದು ಸುರಂಗ ಮಾರ್ಗವಾಗಿರುವುದರಿಂದ ನಿಲ್ದಾಣಗಳ ನಡುವಿನ ಅಂತರ 1,500 ಮೀಟರ್ಗಿಂತ ಹೆಚ್ಚಿದ್ದರೆ ನಡುವೆ ಒಂದು ಶಾಫ್ಟ್ ನಿರ್ಮಿಸಬೇಕಾಗುತ್ತದೆ. ಅಂದರೆ, ಮಾರ್ಗದ ನಡುವೆ ಮತ್ತೊಂದು ಸುರಂಗ ಕೊರೆದು ಅಲ್ಲಿಂದ ಗಾಳಿ, ಬೆಳಕು ಹೋಗುವಂತೆ ಮಾಡಬೇಕಾಗುತ್ತದೆ. ಈ ಶಾಫ್ಟ್ನಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದರ ಜತೆಗೆ ಗಾಳಿ, ಬೆಳಕು ಹೋಗುವ ವ್ಯವಸ್ಥೆಯ ಮೇಲೆ ಸದಾ ನಿಗಾ ಇರಿಸಲು ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ನಿಗಮಕ್ಕೆ ವೆಚ್ಚದಾಯಕವಾಗಿ ಪರಿಣಮಿಸುತ್ತದೆ ಎಂದು ನಿಗಮ ತಿಳಿಸಿದೆ.
ಲ್ಯಾಂಗ್ಫೋರ್ಡ್ ನಿಲ್ದಾಣದ ಬಳಿ ಬಾಲ್ಡ್ವಿನ್ ಶಾಲೆ, ಮೆಥಾಡಿಸ್ಟ್ ಕಾಲೇಜು ಮೊದಲಾದ ಶಿಕ್ಷಣ ಸಂಸ್ಥೆಗಳಿದ್ದು, ಹೆಚ್ಚು ಪ್ರಯಾಣಿಕರು ಬಳಸಲ್ಲಿದ್ದಾರೆ. ಆಡುಗೋಡಿ, ಕೋರಮಂಗಲ, ಆನೆಪಾಳ್ಯದ ನಿವಾಸಿಗಳಿಗೆ ಈ ನಿಲ್ದಾಣ ಸಮೀಪದಲ್ಲಿದೆ. ಆದ್ದರಿಂದ ಈ ನಿಲ್ದಾಣವನ್ನು ಕೈಬಿಡುವುದು ಸೂಕ್ತವಲ್ಲ ಎಂದು ನಿಗಮ ತಿಳಿಸಿದೆ.
ಗೊಟ್ಟಿಗೆರೆ-ನಾಗವಾರ ಮೆಟ್ರೊ ಯೋಜನೆಯಲ್ಲಿ ವೆಲ್ಲಾರ ಜಂಕ್ಷನ್ನ ಆಲ್ ಸೇಂಟ್ಸ್ ಚರ್ಚ್ನ ಜಾಗ ಹಾಗೂ 80 ಮರಗಳನ್ನು ಉಳಿಸಲು, ಎರಡು ನಿಲ್ದಾಣ ಬದಲು ಒಂದೇ ನಿಲ್ದಾಣ ನಿರ್ಮಿಸಬೇಕೆಂದು ಚರ್ಚ್ ಮಾಡಿದ್ದ ಮನವಿಯನ್ನು ಬಿಎಂಆರ್ಸಿಎಲ್ ತಿರಸ್ಕರಿಸಿದೆ.
ಈ ಯೋಜನೆಯಲ್ಲಿ 877 ಮೀಟರ್ ಅಂತರದಲ್ಲಿ ವೆಲ್ಲಾರ ಜಂಕ್ಷನ್ ಹಾಗೂ ಲ್ಯಾಂಗ್ಫೋರ್ಡ್ ನಿಲ್ದಾಣಗಳು ನಿರ್ಮಾಣವಾಗಲಿವೆ. ವೆಲ್ಲಾರ್ ಜಂಕ್ಷನ್ ನಿಲ್ದಾಣ ಹಾಗೂ ಮಾರ್ಗ ನಿರ್ಮಾಣಕ್ಕೆ ಚರ್ಚ್ನ 80 ಮರಗಳನ್ನು ಕಡಿಯಲಾಗುತ್ತದೆ. ಹೀಗಾಗಿ ಈ ನಿಲ್ದಾಣವನ್ನು ಕೈಬಿಟ್ಟು ಲ್ಯಾಂಗ್ಫೋರ್ಡ್ ನಿಲ್ದಾಣ ಮಾತ್ರ ನಿರ್ಮಿಸಬೇಕೆಂದು ಚರ್ಚ್ನ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಯುನೈಟೆಡ್ ಕನ್ಸರ್ವೇಶನ್ ಮೂವ್ಮೆಂಟ್ ಪ್ರತಿನಿಧಿಗಳು ಕೂಡ ಕೋರಿಕೆ ಸಲ್ಲಿಸಿದ್ದರು.
ಚರ್ಚ್ನ ಈಶಾನ್ಯ ಭಾಗದ ಸ್ವಲ್ಪ ಭೂಮಿಯನ್ನು ಕ್ರೇನ್ ಮೊದಲಾದ ಯಂತ್ರೋಪಕರಣಗಳನ್ನು ಇರಿಸಲು ಹಾಗೂ ಸುರಂಗ ಕಾಮಗಾರಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆವರಣದಲ್ಲಿ 50ಕ್ಕಿಂತಲೂ ಕಡಿಮೆ ಮರಗಳಿದ್ದು, ಹಲವು ಮರಗಳನ್ನು ಸ್ಥಳಾಂತರಿಸಿ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ನಿಲ್ದಾಣದ ನಿರ್ಮಾಣವನ್ನು ಕೈಬಿಡುವುದು ಸಾಧ್ಯವಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಲ್ಯಾಂಗ್ಫೋರ್ಡ್ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ನಿಲ್ದಾಣ ನಡುವೆ ವೆಲ್ಲಾರ ಜಂಕ್ಷನ್ ನಿಲ್ದಾಣ ನಿರ್ಮಾಣವಾಗಲಿದೆ. ಲ್ಯಾಂಗ್ಫೋರ್ಡ್-ವೆಲ್ಲಾರ ನಡುವೆ 877 ಮೀಟರ್, ವೆಲ್ಲಾರ-ಎಂ.ಜಿ.ರಸ್ತೆ ನಡುವೆ 1,266 ಮೀಟರ್ ಅಂತರವಿದೆ. ವೆಲ್ಲಾರ ಜಂಕ್ಷನ್ ನಿಲ್ದಾಣ ನಿರ್ಮಿಸದಿದ್ದರೆ ಲ್ಯಾಂಗ್ಫೋರ್ಡ್-ಎಂ.ಜಿ.ರಸ್ತೆ ನಡುವಿನ ಅಂತರ 2,144 ಮೀಟರ್ ಆಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ವೆಲ್ಲಾರ ಜಂಕ್ಷನ್ ನಿಲ್ದಾಣವಿಲ್ಲದ್ದಿದ್ದರೆ ಫುಟ್ಬಾಲ್ ಸ್ಟೇಡಿಯಂ, ಗರುಡಾ ಮಾಲ್, ಕೆಥಾಡ್ರೆಲ್ ಹೈಸ್ಕೂಲ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಫಿಲೊಮಿನ ಚರ್ಚ್ ಮೊದಲಾದ ಕಡೆ ಬರುವವರು ಮೆಟ್ರೊ ಬಳಸಲು ಸಾಧ್ಯವಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಇದು ಸುರಂಗ ಮಾರ್ಗವಾಗಿರುವುದರಿಂದ ನಿಲ್ದಾಣಗಳ ನಡುವಿನ ಅಂತರ 1,500 ಮೀಟರ್ಗಿಂತ ಹೆಚ್ಚಿದ್ದರೆ ನಡುವೆ ಒಂದು ಶಾಫ್ಟ್ ನಿರ್ಮಿಸಬೇಕಾಗುತ್ತದೆ. ಅಂದರೆ, ಮಾರ್ಗದ ನಡುವೆ ಮತ್ತೊಂದು ಸುರಂಗ ಕೊರೆದು ಅಲ್ಲಿಂದ ಗಾಳಿ, ಬೆಳಕು ಹೋಗುವಂತೆ ಮಾಡಬೇಕಾಗುತ್ತದೆ. ಈ ಶಾಫ್ಟ್ನಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದರ ಜತೆಗೆ ಗಾಳಿ, ಬೆಳಕು ಹೋಗುವ ವ್ಯವಸ್ಥೆಯ ಮೇಲೆ ಸದಾ ನಿಗಾ ಇರಿಸಲು ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ನಿಗಮಕ್ಕೆ ವೆಚ್ಚದಾಯಕವಾಗಿ ಪರಿಣಮಿಸುತ್ತದೆ ಎಂದು ನಿಗಮ ತಿಳಿಸಿದೆ.
ಲ್ಯಾಂಗ್ಫೋರ್ಡ್ ನಿಲ್ದಾಣದ ಬಳಿ ಬಾಲ್ಡ್ವಿನ್ ಶಾಲೆ, ಮೆಥಾಡಿಸ್ಟ್ ಕಾಲೇಜು ಮೊದಲಾದ ಶಿಕ್ಷಣ ಸಂಸ್ಥೆಗಳಿದ್ದು, ಹೆಚ್ಚು ಪ್ರಯಾಣಿಕರು ಬಳಸಲ್ಲಿದ್ದಾರೆ. ಆಡುಗೋಡಿ, ಕೋರಮಂಗಲ, ಆನೆಪಾಳ್ಯದ ನಿವಾಸಿಗಳಿಗೆ ಈ ನಿಲ್ದಾಣ ಸಮೀಪದಲ್ಲಿದೆ. ಆದ್ದರಿಂದ ಈ ನಿಲ್ದಾಣವನ್ನು ಕೈಬಿಡುವುದು ಸೂಕ್ತವಲ್ಲ ಎಂದು ನಿಗಮ ತಿಳಿಸಿದೆ.