ವಿಕ ಸುದ್ದಿಲೋಕ ಬೆಂಗಳೂರು
ಭಾನುವಾರ ಮೆಟ್ರೊದ ಸಿಗ್ನಲಿಂಗ್ ವ್ಯವಸ್ಥೆಯಲ್ಲಿದೋಷ ಕಾಣಿಸಿಕೊಂಡಿದ್ದರಿಂದ ಹಸಿರು ಮಾರ್ಗದ ಆರ್.ವಿ.ರಸ್ತೆ-ಯಲಚೇನಹಳ್ಳಿ ನಡುವೆ 1.46 ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಮೆಟ್ರೊ ಬದಲು ಬಸ್, ಆಟೊ ರಿಕ್ಷಾ ಹತ್ತಬೇಕಾಯಿತು.
ಈ ಹಿಂದೆಯೂ ಭಾನುವಾರಗಳಂದು ಮೆಟ್ರೊದಲ್ಲಿತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಾರಿಯೂ ಭಾನುವಾರವೇ ಹಸಿರು ಮಾರ್ಗದಲ್ಲಿಸಮಸ್ಯೆ ಕಾಣಿಸಿಕೊಂಡಿದೆ. ಹಸಿರು ಮಾರ್ಗದ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿಯಲಚೇನಹಳ್ಳಿ ನಿಲ್ದಾಣದಲ್ಲಿಸಿಗ್ನಲಿಂಗ್ನಲ್ಲಿದೋಷ ಕಾಣಿಸಿಕೊಂಡಿತು. ಇದರಿಂದಾಗಿ ಅನಿವಾರ್ಯವಾಗಿ ಆ ಭಾಗಕ್ಕೆ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಯಿತು. ನಾಗಸಂದ್ರದಿಂದ ಹೊರಟ ರೈಲುಗಳು ಆರ್.ವಿ.ರಸ್ತೆ ನಿಲ್ದಾಣವರೆಗೆ ಮಾತ್ರ ಬರಲು ಸಾಧ್ಯವಾಯಿತು. ಇಲ್ಲಿಂದ ಮುಂದಕ್ಕೆ ಬನಶಂಕರಿ, ಜೆ.ಪಿ.ನಗರ ಹಾಗೂ ಕೊನೆಯ ಯಲಚೇನಹಳ್ಳಿ ನಿಲ್ದಾಣಕ್ಕೆ ರೈಲು ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಮಧ್ಯಾಹ್ನ 12.06ರಿಂದ 1.52 ಗಂಟೆವರೆಗೆ ರೈಲು ಕಾರ್ಯಾಚರಣೆ ಸ್ಥಗಿತವಾಗಿತ್ತು.
ಭಾನುವಾರವಾಗಿದ್ದರಿಂದ ವಾರದ ದಿನಗಳಷ್ಟು ದಟ್ಟಣೆ ಮೆಟ್ರೊದಲ್ಲಿಇರಲಿಲ್ಲ. ಆದರೂ ಒಂದೂ ಮುಕ್ಕಾಲು ಗಂಟೆಯ ದೀರ್ಘ ಕಾಲ ರೈಲು ಸೇವೆ ಇಲ್ಲದ್ದರಿಂದ ಸಾವಿರಾರು ಜನರಿಗೆ ತೊಂದರೆಯಾಯಿತು. ಯಲಚೇನಹಳ್ಳಿ ಕಡೆಯಿಂದ ನಗರದ ಕೇಂದ್ರ ಭಾಗಗಳಿಗೆ ಹೊರಟಿದ್ದವರು ಮೆಟ್ರೊ ಇಲ್ಲದೆ ಬಸ್, ಆಟೊ ಅವಲಂಬಿಸಬೇಕಾಯಿತು. ನಿಲ್ದಾಣಗಳಿಗೆ ಬಂದ ಪ್ರಯಾಣಿಕರಿಗೆ ರೈಲು ಸೇವೆ ಇಲ್ಲದಿರುವ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು.
ಈ ವೇಳೆ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಆರ್.ವಿ.ರಸ್ತೆ-ನಾಗಸಂದ್ರ ನಡುವೆ ಲೂಪ್ ಸೇವೆ ನೀಡಲಾಯಿತು.
ಹಸಿರು ಮಾರ್ಗದಲ್ಲಿರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಕಾಯುವಂತಾಯಿತು.
ಭಾನುವಾರ ಮೆಟ್ರೊದ ಸಿಗ್ನಲಿಂಗ್ ವ್ಯವಸ್ಥೆಯಲ್ಲಿದೋಷ ಕಾಣಿಸಿಕೊಂಡಿದ್ದರಿಂದ ಹಸಿರು ಮಾರ್ಗದ ಆರ್.ವಿ.ರಸ್ತೆ-ಯಲಚೇನಹಳ್ಳಿ ನಡುವೆ 1.46 ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಮೆಟ್ರೊ ಬದಲು ಬಸ್, ಆಟೊ ರಿಕ್ಷಾ ಹತ್ತಬೇಕಾಯಿತು.
ಈ ಹಿಂದೆಯೂ ಭಾನುವಾರಗಳಂದು ಮೆಟ್ರೊದಲ್ಲಿತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಾರಿಯೂ ಭಾನುವಾರವೇ ಹಸಿರು ಮಾರ್ಗದಲ್ಲಿಸಮಸ್ಯೆ ಕಾಣಿಸಿಕೊಂಡಿದೆ. ಹಸಿರು ಮಾರ್ಗದ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿಯಲಚೇನಹಳ್ಳಿ ನಿಲ್ದಾಣದಲ್ಲಿಸಿಗ್ನಲಿಂಗ್ನಲ್ಲಿದೋಷ ಕಾಣಿಸಿಕೊಂಡಿತು. ಇದರಿಂದಾಗಿ ಅನಿವಾರ್ಯವಾಗಿ ಆ ಭಾಗಕ್ಕೆ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಯಿತು. ನಾಗಸಂದ್ರದಿಂದ ಹೊರಟ ರೈಲುಗಳು ಆರ್.ವಿ.ರಸ್ತೆ ನಿಲ್ದಾಣವರೆಗೆ ಮಾತ್ರ ಬರಲು ಸಾಧ್ಯವಾಯಿತು. ಇಲ್ಲಿಂದ ಮುಂದಕ್ಕೆ ಬನಶಂಕರಿ, ಜೆ.ಪಿ.ನಗರ ಹಾಗೂ ಕೊನೆಯ ಯಲಚೇನಹಳ್ಳಿ ನಿಲ್ದಾಣಕ್ಕೆ ರೈಲು ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಮಧ್ಯಾಹ್ನ 12.06ರಿಂದ 1.52 ಗಂಟೆವರೆಗೆ ರೈಲು ಕಾರ್ಯಾಚರಣೆ ಸ್ಥಗಿತವಾಗಿತ್ತು.
ಭಾನುವಾರವಾಗಿದ್ದರಿಂದ ವಾರದ ದಿನಗಳಷ್ಟು ದಟ್ಟಣೆ ಮೆಟ್ರೊದಲ್ಲಿಇರಲಿಲ್ಲ. ಆದರೂ ಒಂದೂ ಮುಕ್ಕಾಲು ಗಂಟೆಯ ದೀರ್ಘ ಕಾಲ ರೈಲು ಸೇವೆ ಇಲ್ಲದ್ದರಿಂದ ಸಾವಿರಾರು ಜನರಿಗೆ ತೊಂದರೆಯಾಯಿತು. ಯಲಚೇನಹಳ್ಳಿ ಕಡೆಯಿಂದ ನಗರದ ಕೇಂದ್ರ ಭಾಗಗಳಿಗೆ ಹೊರಟಿದ್ದವರು ಮೆಟ್ರೊ ಇಲ್ಲದೆ ಬಸ್, ಆಟೊ ಅವಲಂಬಿಸಬೇಕಾಯಿತು. ನಿಲ್ದಾಣಗಳಿಗೆ ಬಂದ ಪ್ರಯಾಣಿಕರಿಗೆ ರೈಲು ಸೇವೆ ಇಲ್ಲದಿರುವ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು.
ಈ ವೇಳೆ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಆರ್.ವಿ.ರಸ್ತೆ-ನಾಗಸಂದ್ರ ನಡುವೆ ಲೂಪ್ ಸೇವೆ ನೀಡಲಾಯಿತು.
ಹಸಿರು ಮಾರ್ಗದಲ್ಲಿರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಕಾಯುವಂತಾಯಿತು.