ಆ್ಯಪ್ನಗರ

ವಿಸ್ತರಿಸಿದ ಮಾರ್ಗದಲ್ಲಿ ಅತಿ ಶೀಘ್ರದಲ್ಲೇ ಮೆಟ್ರೋ ಸಂಚಾರ

ಯಲಚೇನಹಳ್ಳಿಯಿಂದ ಅಂಜನಾಪುರ ನಿಲ್ದಾಣಗಳ ನಡುವೆ ಈಗಾಗಲೇ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಸೆ.27 ಮತ್ತು ಸೆ.28ರಂದು ಹೈ ಸ್ಪೀಡ್‌ ಟೆಸ್ಟ್‌ ಸೇರಿದಂತೆ ಇನ್ನಿತರ ಪ್ರಮುಖ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ.

Vijaya Karnataka Web 23 Sep 2020, 11:26 pm
ಬೆಂಗಳೂರು: ಮೆಟ್ರೋ ರೈಲು ಹಸಿರು ಮಾರ್ಗದಲ್ಲಿನಾಗಸಂದ್ರ-ಯಲಚೇನಹಳ್ಳಿಯಿಂದ ಮುಂದಕ್ಕೆ ಅಂಜನಾಪುರದವರೆಗೆ ರೈಲು ಸಂಚರಿಸುವ ದಿನಗಳು ಮತ್ತಷ್ಟು ಹತ್ತಿರವಾಗಿವೆ.
Vijaya Karnataka Web ಮೆಟ್ರೋ ರೈಲು
ಮೆಟ್ರೋ ರೈಲು


ಸೆ.27 ಮತ್ತು ಸೆ.28ರಂದು ಪರೀಕ್ಷಾರ್ಥ ಹೈಸ್ಪೀಡ್‌ ಟೆಸ್ಟ್‌ ಸೇರಿದಂತೆ ಇನ್ನಿತರ ಪ್ರಮುಖ ಟೆಸ್ಟ್‌ಗಳನ್ನು ಮಾಡಬೇಕಿರುವ ಕಾರಣ ಆರ್‌.ವಿ.ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ.

ನಾಗಸಂದ್ರದಿಂದ ಆರ್‌.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಸಂಚರಿಸಲಿವೆ. ಸೆ.29ರಿಂದ ಎಂದಿನಂತೆ ಯಲಚೇನಹಳ್ಳಿವರೆಗೆ ರೈಲು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಯಲಚೇನಹಳ್ಳಿಯಿಂದ ಅಂಜನಾಪುರ ನಿಲ್ದಾಣಗಳ ನಡುವೆ ಈಗಾಗಲೇ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಸೆ.27 ಮತ್ತು ಸೆ.28ರಂದು ಹೈ ಸ್ಪೀಡ್‌ ಟೆಸ್ಟ್‌ ಸೇರಿದಂತೆ ಇನ್ನಿತರ ಪ್ರಮುಖ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದ್ದಾರೆ.

ಟೆಸ್ಟ್‌ಗಳು ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ಒಪ್ಪಿಗೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭದ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ