ಆ್ಯಪ್ನಗರ

ಕೆಜಿ ಹಳ್ಳಿ ಗಲಭೆಯಲ್ಲಿ ಕಾಣದ ಕೈಗಳ ಪಿತೂರಿ ಇರುವುದು ಗೊತ್ತಾಗುತ್ತದೆ: ಸಚಿವ ಸುಧಾಕರ್‌

ಸಾಮಾಜಿಕ ಜಾಲ ತಾಣದಲ್ಲಿ ಯಾವುದೋ ಒಂದು ಪೋಸ್ಟ್ ಹರಿದಾಡಿದ ಬಗ್ಗೆ ಪಿತೂರಿ ನಡೆಸಿ, ಈ ದಾಂಧಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ಹಿಂದೆ ಯಾರು ಇದ್ದಾರೆ ಎಂದು ಹೇಳಲು ನಾನು ಪೊಲೀಸ್ ಅಧಿಕಾರಿನೂ ಅಲ್ಲ, ಗೃಹ ಸಚಿವನೂ ಅಲ್ಲ. ತನಿಖೆ ಬಳಿಕ ಯಾರೆಂಬುದು ಗೊತ್ತಾಗಲಿದೆ ಸಚಿವ ಸುಧಾಕರ್‌ ಹೇಳಿದ್ದಾರೆ.

Vijaya Karnataka Web 12 Aug 2020, 3:29 pm
ಚಿಕ್ಕಬಳ್ಳಾಪುರ: ಬೆಂಗಳೂರಿನ ಡಿಜೆ ಹಳ್ಳಿ ದಾಂಧಲೆ ಪ್ರಕರಣದ ಹಿಂದೆ ಕಾಣದ ಕೈಗಳ ಪಿತೂರಿ ಇದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು. ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಸರಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಒತ್ತಾಯಿಸಿದ್ದಾರೆ.
Vijaya Karnataka Web jpg - 2020-08-12T152419.337


ಚಿಕ್ಕಬಳ್ಳಾಪುರ ತಾಲೂಕಿನ ಸೂಲಿಕುಂಟೆ ಗ್ರ‍್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣದಲ್ಲಿ ಯಾವುದೋ ಒಂದು ಪೋಸ್ಟ್ ಹರಿದಾಡಿದ ಬಗ್ಗೆ ಪಿತೂರಿ ನಡೆಸಿ, ಈ ದಾಂಧಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ಹಿಂದೆ ಯಾರು ಇದ್ದಾರೆ ಎಂದು ಹೇಳಲು ನಾನು ಪೊಲೀಸ್ ಅಧಿಕಾರಿನೂ ಅಲ್ಲ, ಗೃಹ ಸಚಿವನೂ ಅಲ್ಲ. ತನಿಖೆ ಬಳಿಕ ಯಾರೆಂಬುದು ಗೊತ್ತಾಗಲಿದೆ.

ಆದರೆ, ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ಕಾನೂನನ್ನೇ ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಡಿಜೆ ಹಳ್ಳಿಯಲ್ಲಿ ನಡೆದಂತ ಈ ದುರ್ಘಟನೆ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಯಾವತ್ತೂ ನಾನು ನೋಡಿಲ್ಲ. ರಾತ್ರಿ ಸಮಯದಲ್ಲಿ ದೊಡ್ಡ ದೊಡ್ಡ ಲಾರಿಗಳು, ಟೆಂಪೋ, ಆಟೋಗಳಲ್ಲಿ ಕಲ್ಲು, ಬಾಟಲ್‌ಗಳನ್ನು ಇಟ್ಟುಕೊಂಡು ಎರಡು, ಮೂರು ಸಾವಿರ ಜನ ಬಂದು ದಾಳಿ ಮಾಡುವುದು ಕಾಶ್ಮೀರ ಸೇರಿದಂತೆ ಬೇರೆ ಬೇರೆ ಅಂತರಾಷ್ಟ್ರೀಯ ನಗರ, ದೇಶಗಳಲ್ಲಿ ನೋಡಿದ್ದೇನೆ.

ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ರಣಾಂಗಣ! ಘಟನೆಯ ಹಿಂದೆ ಯಾರ ಕೈವಾಡವಿದೆ, ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಮ್ಮ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿಯುತ ನಗರ ಎಂದು ಹೇಳಬಹುದು. ಇಲ್ಲಿ ಇಂತಹ ದುಷ್ಕೃತ್ಯಗಳು ನಡೆದರೆ ಅದನ್ನು ಸರಕಾರ ನೋಡಿಕೊಂಡು ಸುಮ್ಮನಿರಲ್ಲ ಎಂದು ಅವರು ಹೇಳಿದರು. ದಾಂಧಲೆ ಹಿಂದೆ ಎಸ್‌ಡಿಪಿಐ ಕೈವಾಡ ಇದ್ದು, ಅದನ್ನು ನಿಷೇಧಿಸಬೇಕು ಎಂಬ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಒಬ್ಬ ಜವಾಬ್ಧಾರಿಯುತ ಸ್ಥಾನದಲ್ಲಿರುವವರು ಕೇವಲ ಹೇಳಿಕೆಗೋಸ್ಕರ ಘಟನೆ ಬಗ್ಗೆ ದಾರಿ ತಪ್ಪಿಸುವ ಹೇಳಿಕೆ ಕೊಡಬಾರದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ