ಆ್ಯಪ್ನಗರ

ಕೆಸರು ಗದ್ದೆಯಲ್ಲಿ ಮಿಂದೆದ್ದ ಸಚಿವ ಖಾದರ್‌

ಸಚಿವ ಯು.ಟಿ. ಖಾದರ್‌ ಗುರುವಾರ ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆಯ ಗದ್ದೆಯ ಕೆಸರಿನಲ್ಲಿ ಮಿಂದೆದ್ದರಲ್ಲದೆ, ವಿದೇಶಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟರು.

Vijaya Karnataka Web 29 Sep 2017, 10:34 am
ಮಂಗಳೂರು: ಸಚಿವ ಯು.ಟಿ. ಖಾದರ್‌ ಗುರುವಾರ ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆಯ ಗದ್ದೆಯ ಕೆಸರಿನಲ್ಲಿ ಮಿಂದೆದ್ದರಲ್ಲದೆ, ವಿದೇಶಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟರು.
Vijaya Karnataka Web minister khader ploughing in mangaluru
ಕೆಸರು ಗದ್ದೆಯಲ್ಲಿ ಮಿಂದೆದ್ದ ಸಚಿವ ಖಾದರ್‌


ಕಾಲೇಜೊಂದು ಏರ್ಪಡಿಸಿದ್ದ ‘ವಿದ್ಯಾರ್ಥಿಗಳ ನಡಿಗೆ ರೈತರ ಹಡಿಲು ಭೂಮಿಯ ಕಡೆಗೆ’ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಸಚಿವ ಖಾದರ್‌ ಒಂದೂವರೆ ಎಕರೆ ವಿಶಾಲವಾದ ಗದ್ದೆಯಲ್ಲಿಳಿದು, ಟಿಲ್ಲರ್‌ನಿಂದ ಕೆಲವು ಸುತ್ತು ಉಳುಮೆ ಮಾಡಿದರು.

ಬೃಹತ್‌ ಗದ್ದೆಯಲ್ಲಿ ಕೇವಲ ಮುಕ್ಕಾಲು ಗಂಟೆಯಲ್ಲಿ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದರು. ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳ ಜತೆಗೆ ಓಟಕ್ಕೆ ನಿಂತ ಸಚಿವರು ವಿದ್ಯಾರ್ಥಿಗಳನ್ನು ಓಟದಲ್ಲಿ ಮೀರಿಸಿದರು. ಓಡುವ ರಭಸದಲ್ಲಿ ಗದ್ದೆಯಲ್ಲಿ ಉರುಳಿಬಿದ್ದ ಸಚಿವರ ಮೇಲೆ ವಿದ್ಯಾರ್ಥಿಗಳು ಬಿದ್ದರು. ಆಗ ಸಚಿವರ ಗುರುತು ಸಿಗದಂತಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ