ಆ್ಯಪ್ನಗರ

ಪಟಾಕಿ ಅನಾಹುತ: ಮಿಂಟೊ ಸಜ್ಜು

ಈ ಬಾರಿಯ ದೀಪಾವಳಿ ವೇಳೆಯಲ್ಲಿ ಉಂಟಾಗುವ ಪಟಾಕಿ ಅನಾಹುತ ತಡೆಯಲು ಮಿಂಟೊ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

Vijaya Karnataka 28 Oct 2018, 5:00 am
ಬೆಂಗಳೂರು : ಈ ಬಾರಿಯ ದೀಪಾವಳಿ ವೇಳೆಯಲ್ಲಿ ಉಂಟಾಗುವ ಪಟಾಕಿ ಅನಾಹುತ ತಡೆಯಲು ಮಿಂಟೊ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
Vijaya Karnataka Web minto hospital is set to ready to treat crackers accidents
ಪಟಾಕಿ ಅನಾಹುತ: ಮಿಂಟೊ ಸಜ್ಜು


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ ಮಾಹಿತಿ ನೀಡಿದರು.

'ಪಟಾಕಿ ಸಿಡಿತದ ಗಾಯಾಳುಗಳಿಗೆ ತುರ್ತು ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಪ್ರತಿ ವರ್ಷ 50ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋಗೆ ಚಿಕಿತ್ಸೆಗೆ ಬರುತ್ತಾರೆ. ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಸಹಾಯವಾಣಿ 080-26707176 ಹಾಗೂ ಮೊ. 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದು,'' ಎಂದು ಹೇಳಿದರು.

ಮಿಂಟೊ ಆಸ್ಪತ್ರೆಯ ಆಪ್ತಮಾಲಜಿ ತಜ್ಞೆ ಡಾ. ದಾಕ್ಷಾಯಿಣಿ ಮಾತನಾಡಿ ''ಅಪಾಯಕಾರಿ ಪಟಾಕಿಗಳು ಮಕ್ಕಳ ಕೈಸೇರಿ, ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೀಪಾವಳಿ ಪಟಾಕಿಯಿಂದ 10ರಲ್ಲಿ 4 ಜನ ಸಣ್ಣಪುಟ್ಟ ಉಸಿರಾಟದ ಸಮಸ್ಯೆಗಳಿಗೆ ಸಿಲುಕುತ್ತಾರೆ. ಆದ್ದರಿಂದ ರಾಜ್ಯ ಸರಕಾರ ಅಪಾಯಕಾರಿ ಪಟಾಕಿಗಳಿಗಳು ತಯಾರಿಕೆಯಾಗದಂತೆ ನಿಷೇಧಿಸಬೇಕು,'' ಎಂದರು.

ಸುರಕ್ಷಿತ ದೀಪಾವಳಿ

ಮಿಂಟೊ ಆಸ್ಪತ್ರೆ ವತಿಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ 'ಸುರಕ್ಷಿತ ದೀಪಾವಳಿ - ನನ್ನ ದೃಷ್ಟಿಕೋನ' ಪ್ರಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಬಂಧ ಮಂಡಿಸಿ ಪ್ರಥಮ ಸ್ಥಾನಗಳಿಸಿದ ವಿಸ್ಡಮ್‌ ಶಾಲೆಯ ವಿದ್ಯಾರ್ಥಿನಿ ಇಂಚರಾ ಅವರನ್ನು ಅಭಿನಂದಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ