ಆ್ಯಪ್ನಗರ

ಮಂಜು: 51 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಕನಿಷ್ಠ ತಾಪಮಾನ 14 ರಿಂದ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದರಿಂದ ಭಾನುವಾರ ಮುಂಜಾನೆ ದಟ್ಟ ಮಂಜು ಕವಿದಿತ್ತು. ಇದರ ಪರಿಣಾಮ 51 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು.

Vijaya Karnataka 14 Jan 2019, 5:00 am
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 14 ರಿಂದ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದರಿಂದ ಭಾನುವಾರ ಮುಂಜಾನೆ ದಟ್ಟ ಮಂಜು ಕವಿದಿತ್ತು. ಇದರ ಪರಿಣಾಮ 51 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು.
Vijaya Karnataka Web KIAL2


ಹಿಂದಿನ ದಿನ ತಾಪಮಾನ 14.7 ಡಿಗ್ರಿ ಇತ್ತು. ಭಾನುವಾರ ತಾಪಮಾನ ಇಳಿದು 13 ಡಿಗ್ರಿಗೆ ಮುಟ್ಟಿತು. ಚಳಿ ಹೆಚ್ಚಾಗುವುದರ ಜತೆಗೆ ಹಿಂದಿನ ದಿನಗಳಂತೆಯೇ ದಟ್ಟ ಮಂಜು ಕವಿದಿತ್ತು. ಮುಂಜಾನೆ 4.45 ಗಂಟೆಗೆ ಗೋಚರತೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ವಿಮಾನಗಳ ಹಾರಾಟಕ್ಕೆ ತಡೆ ನೀಡಲಾಯಿತು. ಬೆಳಗ್ಗೆ 9.04 ಗಂಟೆಗೆ ಮಂಜು ಕಡಿಮೆಯಾಗಿ ವಿಮಾನಗಳ ಹಾರಾಟ ಮತ್ತೆ ಆರಂಭವಾಯಿತು. ಈ ನಡುವೆ ಒಟ್ಟು 51 ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯವಾಯಿತು.

ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 16 ವಿಮಾನಗಳು ಬಹಳ ತಡವಾಗಿ ಆಗಮಿಸಿದವು. ನಿಲ್ದಾಣದಿಂದ ಹೊರಡಬೇಕಿದ್ದ 35 ವಿಮಾನಗಳು ಗೋಚರತೆ ಸಿಕ್ಕ ಬಳಿಕ ತಡವಾಗಿ ಹಾರಾಟ ನಡೆಸಿದವು. ಬೆಂಗಳೂರಿಗೆ ಬರಬೇಕಿದ್ದ ಒಂದು ವಿಮಾನವನ್ನು ಮಾರ್ಗ ಬದಲಿಸಿ ಹೈದರಾಬಾದ್‌ಗೆ ಕಳುಹಿಸಲಾಯಿತು.

ನಗರದಲ್ಲೂ ತಾಪಮಾನ ಇಳಿಕೆ: ಈ ನಡುವೆ, ನಗರದ ಕೇಂದ್ರಭಾಗದಲ್ಲೂ ಮತ್ತೆ ತಾಪಮಾನ ಕುಸಿತವಾಗಿದೆ. ಹಿಂದಿನ ದಿನ 15.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನವಿತ್ತು. ಭಾನುವಾರ 14.3 ಡಿಗ್ರಿ ದಾಖಲಾಗಿದೆ. ಶೀತಮಾರುತ ಇಲ್ಲದಿದ್ದರೂ ತಂಪಾದ ಗಾಳಿ ಬೀಸುತ್ತಿರುವುದರಿಂದ ಸ್ವಲ್ಪಮಟ್ಟಿಗೆ ಚಳಿ ಇದೆ. ಎಚ್‌ಎಎಲ್‌ನಲ್ಲಿ ಹಿಂದಿನ ದಿನ 14.4 ಡಿಗ್ರಿ ಇದ್ದು, ಭಾನುವಾರ 12.9 ಡಿಗ್ರಿ ದಾಖಲಾಗಿದೆ.

ಹಲವು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಳಿಕೆ ಕಂಡು ಬರುತ್ತಲೇ ಇದೆ. ಜನವರಿ ಅಂತ್ಯದವರೆಗೆ ಇದೇ ರೀತಿ ಏರಿಳಿಕೆಯಾಗುತ್ತಿರುತ್ತದೆ. ಮುಂದಿನ ಮೂರು ದಿನ ಕನಿಷ್ಠ ತಾಪಮಾನ 15 ಡಿಗ್ರಿಗೆ ಏರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ