ಆ್ಯಪ್ನಗರ

ಮೊದಲ ಪ್ರಧಾನಿ ಮಾಡಿದ ಎಡವಟ್ಟು ಸರಿಪಡಿಸಿದ ನರೇಂದ್ರ ಮೋದಿ: ಬಿಎಲ್‌ ಸಂತೋಷ್‌

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ ಬಿಎಲ್‌ ಸಂತೋಷ್‌

Vijaya Karnataka Web 23 Aug 2019, 8:44 pm
ಬೆಂಗಳೂರು: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡುವ ಮೂಲಕ ನರೇಂದ್ರ ಮೋದಿ ಇತಿಹಾಸ ಅತಿ ದೊಡ್ಡ ಪ್ರಮಾದವೊಂದನ್ನು ಸರಿಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ತಿಳಿಸಿದ್ದಾರೆ.
Vijaya Karnataka Web ಬಿಎಲ್‌ ಸಂತೋಷ್‌
ಬಿಎಲ್‌ ಸಂತೋಷ್‌


ಬೆಂಗಳೂರಿನ ಗಾಂಧಿಭವನದಲ್ಲಿ ಏರ್ಪಡಿಸಲಾದ ಭಾರತಾಂಬೆಯ ಕಿರೀಟ ಕಾಶ್ಮೀರ - 370ನೇ ವಿಧಿ ರದ್ದತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಾರತೀಯ ಜನತಾ ಪಕ್ಷವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಉದ್ದೇಶದಿಂದಲೇ ಹುಟ್ಟಿದ್ದುಘಿ, ರಾಮ ಮಂದಿರ ನಿರ್ಮಿಸುವ ಉದ್ದೇಶದೊಂದಿಗೇ ಬೆಳೆದಿದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

‘‘ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನೆಹರು ಅವರ ಅರ್ಥಹೀನ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್ ಬಿಟ್ಟು ಹೊರಬಂದು ಜನಸಂಘ ಸ್ಥಾಪಿಸಿದರು. ನಂತರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗದುಹಾಕುವ ಹೋರಾಟವನ್ನು ಆರಂಭಿಸಿದ್ದರು. ಕರ್ನಾಟಕ, ಗುಜರಾತ್, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಅಥವಾ ದೇಶಕ್ಕೆ ಪ್ರಧಾನಿಯನ್ನು ನೀಡಬೇಕೆಂಬ ಕಾರಣಕ್ಕೆ ಬಿಜೆಪಿ ಜನಿಸಿರಲಿಲ್ಲ. ಈ ಉದ್ದೇಶವಿಟ್ಟುಕೊಂಡೇ ಪಕ್ಷ ಹುಟ್ಟಿತ್ತು. ಹಾಗೆಯೇ ರಾಮಮಂದಿರ ನಿರ್ಮಿಸಬೇಕೆಂಬ ಗುರಿಯೊಂದಿಗೆ ಬೆಳೆದಿದೆ’’ ಎಂದರು.

‘‘ಮೊದಲ ಪ್ರಧಾನಿ ನೆಹರು ಮಾಡಿದ ಐತಿಹಾಸಿಕ ಪ್ರಮಾದ ಸರಿಪಡಿಸಲು 15 ನೇ ಪ್ರಧಾನಿ ಬರಬೇಕಾಯಿತು. ವಿಶೇಷ ಸ್ಥಾನಮಾನ ರದ್ದು ಮಾಡುವ ಕ್ರಮವನ್ನು ದಿಢೀರನೆ ಕೈಗೊಂಡಿಲ್ಲಘಿ. ಕಳೆದ ಐದು ವರ್ಷಗಳಿಂದ ಇದಕ್ಕಾಗಿ ಸಿದ್ಧತೆ ನಡೆದಿತ್ತು. ಹಾಗೆಯೇ ಪಕ್ಷದ ಕಳೆದ 73 ಅಧಿವೇಶನಗಳಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆ ಕೈ ಜೋಡಿಸಿದಾಗ ಪಕ್ಷದೊಳಗಿದ್ದವರೂ ಟೀಕಿಸಿದ್ದರು. ಆದರೆ ಅದು ಕೂಡ ಈ ಉದ್ದೇಶದ ಒಂದು ತಂತ್ರವಾಗಿತ್ತು’’ ಎಂದರು.

ದೇಶದ ಮೊದಲ ಪ್ರಧಾನಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರು. ಆ ಎಡವಟ್ಟಿನಿಂದ ಹಲವಾರು ದಶಕಗಳ ಕಾಲ ಅಲ್ಲಿನ ಜನ ಹಲವು ಯೋಜನೆಗಳಿಂದ ವಂಚಿತರಾದರು. ಇದನ್ನು ಮನಗಂಡ ನರೇಂದ್ರ ಮೋದಿ ಸಂವಿಧಾನದ 370ನೇ ವಿಧಿ ರದ್ದುಪಡಿಸಿದರು ಎಂದರು.

ಜಮ್ಮು ಕಾಶ್ಮೀರಕ್ಕೆ ನಮ್ಮ ಇಡೀ ದೇಶದ ಜನತ ತೆರಿಗೆ ಹಣ ಕಳುಹಿಸಿಕೊಡಲಾಗುತ್ತಿತ್ತು. ಇದಕ್ಕೆ ಲೆಕ್ಕವೇ ಇರುತ್ತಿರಲಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ಕಾಯಿದೆ ಜಮ್ಮು ಕಾಶ್ಮೀರಕ್ಕೆ ಅನ್ವಯವೇ ಆಗುತ್ತಿರಲಿಲ್ಲ. ಅಂಬೇಡ್ಕರ್‌ ಸಂವಿಧಾನ ಇಲ್ಲಿ ಚಾಲ್ತಿಯಲ್ಲಿರಲಿಲ್ಲ ಎಂದು ಸಂತೋಷ್‌ ವಿವರಿಸಿದರು.

ಜಮ್ಮು ಕಾಶ್ಮೀರದಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯ ಆ ಭಾಗದಲ್ಲಿರುವ ಕಾಶ್ಮೀರವೂ ನಮ್ಮದಾಗಲಿದೆ ಎಂದರು.

ಜಮ್ಮು ಕಾಶ್ಮೀರದ ಜನರಿಗೆ ಈಗ ಹಲವಾರು ಯೋಜನೆಗಳು ಲಭ್ಯವಾಗಲಿವೆ. ಲೇಹ್‌ ಮತ್ತು ಲಡಾಕ್‌ನ ಜನರೂ ಈಗಾಗಲೇ ಸಂವಿಧಾನ 370ನೇ ವಿಧಿ ರದ್ದಾಗಿರುವುದು ಸಂತೋಷವಾಗಿದೆ ಎಂದು ಬಿಎಲ್‌ ಸಂತೋಷ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ