ಆ್ಯಪ್ನಗರ

ಜಯನಗರ ಜನರಲ್ ಆಸ್ಪತ್ರೆಗೆ ಶಾಸಕರ ನಿಧಿಯಿಂದ ₹1 ಕೋಟಿ ರೂಪಾಯಿ ನೀಡಲು ಸೌಮ್ಯಾ ರೆಡ್ಡಿ ನಿರ್ಧಾರ

ಈ ಮಧ್ಯೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಜಯನಗರದ ಜನರಲ್‌ ಆಸ್ಪತ್ರೆಗೆ ತನ್ನ ಶಾಸಕರ ನಿಧಿಯಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಾಸಕಿ ಸೌಮ್ಯಾ ರೆಡ್ಡಿ ಅವರು ಇತ್ತೀಚೆಗೆ ಕೊರೊನಾ ರೋಗಿಯೊಬ್ಬರಿಗೆ ವಾಟ್ಸಾಪ್‌ ಮೆಸೇಜ್ ಮೂಲಕ ಸ್ಪಂದಿಸಿ ಸುದ್ದಿಯಾಗಿದ್ದರು. ಇದೀಗ ಜಯನಗರದ ಜನರಲ್ ಆಸ್ಪತ್ರೆಗೆ ಸೂಕ್ತ ಸಲಕರಣೆಗಳನ್ನು ಖರೀದಿಸಲು ತನ್ನ ನಿಧಿಯಿಂದ ಹಣವನ್ನು ನೀಡಲು ಮುಂದಾಗಿದ್ದಾರೆ.

Vijaya Karnataka Web 7 Aug 2020, 5:23 pm
ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದಿಂದ ಕರ್ನಾಟಕ ರಾಜ್ಯ ತತ್ತರಿಸಿ ಹೋಗಿದೆ. ಸರ್ಕಾರ ಈ ರೋಗವನ್ನು ತಡೆಗಟ್ಟಲು ಇನ್ನಿಲ್ಲದ ಶ್ರಮ ಪಡುತ್ತಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅನೇಕ ಕಡೆ ಆಸ್ಪತ್ರೆಗಳಲ್ಲೂ ಕೂಡ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡ್ತಿದ್ದಾರೆ.
Vijaya Karnataka Web Sowmya reddy


'ಸರ್.. ಬೇಕಾ ಇದೆಲ್ಲ ನಿಮಗೀಗ?' : ಸಚಿವ ಸುಧಾಕರ್‌ಗೆ ಸೌಮ್ಯಾರೆಡ್ಡಿ ಖಾರ ಪ್ರಶ್ನೆ..!

ಈ ಮಧ್ಯೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಜಯನಗರದ ಜನರಲ್‌ ಆಸ್ಪತ್ರೆಗೆ ತನ್ನ ಶಾಸಕರ ನಿಧಿಯಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಾಸಕಿ ಸೌಮ್ಯಾ ರೆಡ್ಡಿ ಅವರು ಇತ್ತೀಚೆಗೆ ಕೊರೊನಾ ರೋಗಿಯೊಬ್ಬರಿಗೆ ವಾಟ್ಸಾಪ್‌ ಮೆಸೇಜ್ ಮೂಲಕ ಸ್ಪಂದಿಸಿ ಸುದ್ದಿಯಾಗಿದ್ದರು. ಇದೀಗ ಜಯನಗರದ ಜನರಲ್ ಆಸ್ಪತ್ರೆಗೆ ಸೂಕ್ತ ಸಲಕರಣೆಗಳನ್ನು ಖರೀದಿಸಲು ತನ್ನ ನಿಧಿಯಿಂದ ಹಣವನ್ನು ನೀಡಲು ಮುಂದಾಗಿದ್ದಾರೆ.

'ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ'

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಶಾಸಕಿ ಸೌಮ್ಯಾ ರೆಡ್ಡಿ, ಇತ್ತೀಚೆಗೆ ಜಯನಗರದ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆಯಲ್ಲಿ ಇರುವಂತಹ ಸಮಸ್ಯೆಗಳು ಮತ್ತು ಕೆಲವು ಅಗತ್ಯಗಳ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಶಾಸಕರ ನಿಧಿಯಿಂದ ಒಟ್ಟು ₹1 ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದೇನೆ. ಈ ಸಂಬಂಧ ನಾನು ಬೆಂಗಳೂರು ಜಿಲ್ಲಾಧಿಕಾರಿ ಶ್ರೀ ಜಿ.ಎನ್. ಶಿವಮೂರ್ತಿರವರನ್ನು ಹಾಗೂ ಬಿಬಿಎಂಪಿ ಆಯುಕ್ತರು ಶ್ರೀ ಮಂಜುನಾಥ್ ಪ್ರಸಾದ್‌ರವರನ್ನು ಭೇಟಿ ಮಾಡಿ ಪ್ರಸ್ತಾಪ ಸಲ್ಲಿಸಿದೆ. ಅಗತ್ಯವಿರುವುದನ್ನು ತ್ವರಿತವಾಗಿ ಮಾಡಲು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕೋವಿಡ್‌ ಸೋಂಕಿತರಿಗೆ ಪ್ರವೇಶ ನಕಾರ; ಜಯನಗರದ ಅಪೊಲೊ, ವಿಕ್ರಮ್‌ ಆಸ್ಪತ್ರೆ ಹೊರ ರೋಗಿ

ಆಸ್ಪತ್ರೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಉಪಕರಣಗಳನ್ನು ಖರೀದಿಸಲು ಸೌಮ್ಯಾ ರೆಡ್ಡಿಯವರು ನೀಡಿರುವ ಅನುದಾನವನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆ ಪೈಕಿ 10 ಐಸಿಯು ಹಾಸಿಗೆಗಳು, 10 ಹಾಸಿಗೆ ಪಕ್ಕ ಇಡುವ ಮಾನಿಟರ್‌ಗಳು, 4 ಇಸಿಜಿ ಯಂತ್ರಗಳು, 2 ಪೋರ್ಟಬಲ್ ಎಕ್ಸರೆ ಯಂತ್ರಗಳು ಮತ್ತು 2 ಪೋರ್ಟಬಲ್ ಅಲ್ಟ್ರಾಸೌಂಡ್ ಯಂತ್ರಗಳನ್ನು ಖರೀದಿಸಿ ಜಯನಗರದ ಆಸ್ಪತ್ರೆಗೆ ನೀಡಲು ಅವರು ನಿರ್ಧರಿಸಿದ್ದಾರೆ.


ತೆರೆಮರೆಯಲ್ಲಿ ತಂತ್ರ, ಬಿಬಿಎಂಪಿ ಚುನಾವಣೆಗೆ ಸದ್ಯಕ್ಕಿಲ್ಲ ಮುಹೂರ್ತ!

ಇತ್ತೀಚೆಗೆ ಸೌಮ್ಯಾ ರೆಡ್ಡಿಯವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆರೋಗ್ಯ ಹಸ್ತ ಎನ್ನುವ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಕೊರೊನಾ ಆರಂಭವಾದ ಸಮಯದಿಂದಲೂ ಜನರ ಜೊತೆ ಸಂಪರ್ಕದಲ್ಲಿರುವ ಸೌಮ್ಯಾ ರೆಡ್ಡಿಯವರು ಇದೀಗ ಜಯನಗರದ ಆಸ್ಪತ್ರೆಯ ಅಗತ್ಯತೆಯನ್ನು ಗಮನಿಸಿ ತುರ್ತಾಗಿ ಒಂದು ಕೋಟಿ ರೂಪಾಯಿ ನೆರವು ನೀಡಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ