ಆ್ಯಪ್ನಗರ

33 ಲಕ್ಷಕ್ಕೂ ಅಧಿಕ ಜನರಿಂದ ಹಿಜಾಬ್‌ ವಿಚಾರಣೆ ವೀಕ್ಷಣೆ

​​ನ್ಯಾಯಪೀಠ ಫೆ.10 ರಿಂದ 25ರ ನಡುವೆ 11 ದಿನ ವಿಚಾರಣೆ ನಡೆಸಿದ್ದು, ದಿನಕ್ಕೆ ಸರಾಸರಿ ಎರಡು ತಾಸಿನಂತೆ ಒಟ್ಟಾರೆ 23.5 ತಾಸು ವಿಚಾರಣೆ ಪ್ರಕ್ರಿಯೆ ನಡೆದಿದೆ. ಕಳೆದ ಶುಕ್ರವಾರ ಪೀಠವು ತೀರ್ಪು ಕಾಯ್ದಿರಿಸಿದೆ.

Vijaya Karnataka Web 1 Mar 2022, 11:57 pm
ಬೆಂಗಳೂರು: ಹಿಜಾಬ್‌ ಪ್ರಕರಣದ ಬಗ್ಗೆ ಹೈಕೋರ್ಟ್‌ ಪೂರ್ಣಪೀಠ ನಡೆಸಿದ 11 ವಿಚಾರಣೆಗಳನ್ನು ಯೂಟ್ಯೂಬ್‌ ಮೂಲಕ 33 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆ ಮೂಲಕ ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿಯೇ ಅಧಿಕ ಮಂದಿ ಯೂಟ್ಯೂಬ್‌ನಲ್ಲಿ ನೇರ ಕಲಾಪವನ್ನು ವೀಕ್ಷಿಸಿದಂತಾಗಿದೆ.
Vijaya Karnataka Web ಹೈಕೋರ್ಟ್‌
ಹೈಕೋರ್ಟ್‌


Hijab Row: ಹಿಜಾಬ್ ವಿವಾದದ ವಾದ ಮಂಡನೆ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಈ ಪೇಜ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರೂ ಆಗಿದ್ದಾರೆ. ಚಂದಾದಾರ ಸಂಖ್ಯೆ ಒಂದು ಲಕ್ಷ ದಾಟಿದೆ. ತರಗತಿಯಲ್ಲಿ ಹಿಜಾಬ್‌ ನಿಷೇಧಿಸಿರುವ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್‌ ವಿಚಾರಣೆ ನಡೆಸಿತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಾಲೇಜುಗಳಲ್ಲಿ ಹಿಜಾಬ್‌ ವಿವಾದ ಭುಗಿಲೆದ್ದಿತ್ತು.

ನ್ಯಾಯಪೀಠ ಫೆ.10 ರಿಂದ 25ರ ನಡುವೆ 11 ದಿನ ವಿಚಾರಣೆ ನಡೆಸಿದ್ದು, ದಿನಕ್ಕೆ ಸರಾಸರಿ ಎರಡು ತಾಸಿನಂತೆ ಒಟ್ಟಾರೆ 23.5 ತಾಸು ವಿಚಾರಣೆ ಪ್ರಕ್ರಿಯೆ ನಡೆದಿದೆ. ಕಳೆದ ಶುಕ್ರವಾರ ಪೀಠವು ತೀರ್ಪು ಕಾಯ್ದಿರಿಸಿದೆ. ಇಡೀ ಕಲಾಪವನ್ನು ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಯೂ ಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲು ಪೀಠವು ನಿರ್ಧರಿಸಿತು.

ಜನವಿರೋಧಿ ನೀತಿಗೆ ಖಂಡನೆ

ಹರಪನಹಳ್ಳಿ: ಹಿಜಾಬ್‌, ಕೇಸರಿ ಶಾಲು, ಕೇಸರಿ ಧ್ವಜಗಳ ಸಮಸ್ಯೆಗಳನ್ನು ವೈಭವೀಕರಿಸಿ ಸದನದ ಕಲಾಪವನ್ನು ಹಾಳು ಮಾಡಿ ಆಹೋರಾತ್ರಿ ಧರಣಿ ನಡೆಸಿ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಚರ್ಚಿಸಲು ಅವಕಾಶ ನೀಡದ ಕಾಂಗ್ರೆಸ್‌ ಪಕ್ಷದ ಜನವಿರೋಧಿ ನೀತಿಯನ್ನು ಖಂಡಿಸುತ್ತೇನೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿಸೋಮವಾರ ಭಾರತೀಯ ಜನತಾ ಪಾರ್ಟಿ ಹರಪನಹಳ್ಳಿ ಮಂಡಳ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌ ಮಾತನಾಡಿದರು.

‘ಕಾಲೇಜಿನಿಂದ ಹೊರಹೋಗದಿದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ತೀನಿ’; ಹಿಜಾಬ್ ಧರಿಸಿದವರಿಗೆ ಪ್ರಿನ್ಸಿಪಾಲ್ ಎಚ್ಚರಿಕೆ!

ಪ್ರತಿಭಟನಾ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್‌ ಇಜಂತ್‌ಕರ್‌, ಉಪಾಧ್ಯಕ್ಷೆ ಭೀಮವ್ವ ಸಣ್ಣ ಹಾಲಪ್ಪ, ಕೆಡಿಪಿ ವಿಜಯನಗರ ಜಿಲ್ಲಾಸದಸ್ಯ ಕಣಿವಿ ಹಳ್ಳಿ ಮಂಜುನಾಥ್‌, ಮಾಜಿ ಜಿಲ್ಲಾಉಪಾಧ್ಯಕ್ಷ ಎಂ.ಪಿ.ನಾಯ್‌್ಕ, ರೈತ ಮೋರ್ಚಾ ಜಿಲ್ಲಾಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಜಿಲ್ಲಾಎಸ್‌ಟಿ ಮೋರ್ಚಾ ಕಾರ್ಯದರ್ಶಿ ಲೋಕೇಶ್‌, ಎಂ.ಮಲ್ಲೇಶ್‌, ಮಜ್ಜಿಗೇರಿ ಬೀಮಪ್ಪ, ನಾಗರಾಜಪ್ಪ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ