ಆ್ಯಪ್ನಗರ

ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಸಂಚಿನ ಮಾಸ್ಟರ್ ಮೈಂಡ್ ಯಾರು? ಕೆದಕಿದಷ್ಟೂ ಸಿಗ್ತಿವೆ ಆತಂಕಕಾರಿ ಮಾಹಿತಿ..!

ಈ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ತೆರೆಮರೆಯಲ್ಲೇ ಇದ್ದಾನೆ. ಈವರೆಗೆ ಇರ್ಫಾನ್‌ನನ್ನೇ ಮಾಸ್ಟರ್ ಮೈಂಡ್ ಎಂದುಕೊಂಡಿದ್ದ ಪೊಲೀಸರಿಗೆ, ಇದೀಗ ಆತ ಹಲವರ ಆದೇಶ ಮೇರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Vijaya Karnataka Web 19 Jan 2020, 2:35 pm

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಹಾಗೂ ಯುವ ಬ್ರಿಗೇಡ್ ನೇತಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ನಡೆಸಿದ್ದ ಸಂಚಿನ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ. ಈ ಬೃಹತ್ ಸಂಚಿನ ಹಿಂದೆ ಹಲವರ ಕೈವಾಡ ಇರೋದು ಬೆಳಕಿಗೆ ಬರುತ್ತಿದೆ.
Vijaya Karnataka Web chakravarthi soolibele and tejasvi soorya
ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಸಂಚಿನ ಮಾಸ್ಟರ್ ಮೈಂಡ್ ಯಾರು? ಕೆದಕಿದಷ್ಟೂ ಸಿಗ್ತಿವೆ ಆತಂಕಕಾರಿ ಮಾಹಿತಿ..!


ಮಾಸ್ಟರ್ ಮೈಂಡ್ ಇರ್ಫಾನ್ ಅಲ್ಲ..!

ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ನಡೆಸಿದ್ದ ಸಂಚಿನ ಮಾಸ್ಟರ್‌ ಮೈಂಡ್‌ ಇರ್ಫಾನ್ ಎಂದೇ ಭಾವಿಸಲಾಗಿತ್ತು. ಆದ್ರೆ, ಇರ್ಫಾನ್ ಕೇವಲ ‘ಆಜ್ಞಾಪಾಲಕ’ ಅಷ್ಟೇ ಆಗಿದ್ದ ಅನ್ನೋದು ಸಾಬೀತಾಗಿದೆ. ಕೃತ್ಯಕ್ಕೂ ಮೊದಲು ಎಲ್ಲಾ ಆರೋಪಿಗಳೂ 3 ಬಾರಿ ಸಭೆ ನಡೆಸಿದ್ದರು. ಒಂದೇ ವಾರದ ಅವಧಿಯಲ್ಲಿ 3 ಸಭೆಗಳು ನಡೆದಿದ್ದವು. ಟ್ಯಾನರಿ ರಸ್ತೆಯ ಪಾರ್ಕ್‌ನಲ್ಲಿ ಈ ಮೀಟಿಂಗ್ ನಡೆದಿತ್ತು ಎಂದು ತಿಳಿದುಬಂದಿದೆ.

ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕ್ರಮದ ಮಾಹಿತಿಯನ್ನು ಈ ಸಭೆಯಲ್ಲಿ ಪರಸ್ಪರ ಹಂಚಿಕೊಳ್ಳಲಾಗಿತ್ತು. ಅದ್ರಲ್ಲೂ ಸಿಎಎ ಪರ ಜಾಗೃತಿ ಕಾರ್ಯಕ್ರಮ ನಡೆಯೋದು ಇವರಿಗೆಲ್ಲಾ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ಹಿಂದೂ ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಒಂದೆಡೆ ಸೇರೋದು ಕೂಡಾ ಇವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಎಲ್ಲರಿಗೂ ಭಯ ಹುಟ್ಟಿಸೋ ಉದ್ದೇಶದಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಹೇಗಿತ್ತು ಸಂಚು..? ಕಡೇ ಕ್ಷಣದಲ್ಲಿ ವರುಣ್ ಟಾರ್ಗೆಟ್ ಆಗಿದ್ದು ಏಕೆ..?
ಪಿಎಫ್‌ಐ, ಎಸ್‌ಡಿಪಿಐ ಸಕ್ರಿಯ ಕಾರ್ಯಕರ್ತರು..!

7 ವರ್ಷದಿಂದ ಪಿಎಫ್‌ಐ ಸಂಘಟನೆಯಲ್ಲಿ ಈ ಆರೋಪಿಗಳು ಗುರ್ತಿಸಿಕೊಂಡಿದ್ದರು. ಕಳೆದ 3 ವರ್ಷದಿಂದ ಎಸ್‌ಡಿಪಿಐ ಸಂಘಟನೆಯ ಎಲ್ಲಾ ಕಾರ್ಯಕ್ರಮದಲ್ಲೂ ಆರೋಪಿಗಳು ಭಾಗಿಯಾಗಿದ್ರು. ಈ ಮಾಹಿತಿಯ ಆಧಾರದ ಮೇಲೆ ನೋಡೋದಾದ್ರೆ, ಈ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ತೆರೆಮರೆಯಲ್ಲೇ ಇದ್ದಾನೆ. ಈವರೆಗೆ ಇರ್ಫಾನ್‌ನನ್ನೇ ಮಾಸ್ಟರ್ ಮೈಂಡ್ ಎಂದುಕೊಂಡಿದ್ದ ಪೊಲೀಸರಿಗೆ, ಇದೀಗ ಆತ ಹಲವರ ಆದೇಶ ಮೇರೆಗೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಂತಾಗಿದೆ.

ತೇಜಸ್ವಿ, ಸೂಲಿಬೆಲೆಗೆ ಸ್ಕೆಚ್‌ ಹಾಕಿದ್ದವರು ಎಂಥವರು..? ಅವರ ಹಿನ್ನೆಲೆ ಏನು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ