ಆ್ಯಪ್ನಗರ

ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳು ತಳಮಟ್ಟದ ಪ್ರಜೆಗೆ ತಲುಪುವಂತಾಗಲಿ: ತೇಜಸ್ವಿ ಸೂರ್ಯ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ತೇಜಸ್ವಿ ಸೂರ್ಯ “ನನ್ನ ಮೇಲೆ ವಿಶ್ವಾಸವಿಟ್ಟು, ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಿದ ಪಕ್ಷದ ವರಿಷ್ಠರಿಗೆ ಮತ್ತು ಈ ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸುತ್ತಿರುವ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ಎಲ್ಲ ಪದಾಧಿಕಾರಿಗಳೂ ಹಾಗೂ ಸದಸ್ಯರಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದರು.

Vijaya Karnataka Web 11 Oct 2020, 8:35 am
ಬೆಂಗಳೂರು: ಯುವ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಪದವಿ ಅಲಂಕರಿಸಿದ ಹಿನ್ನೆಲೆ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ ವತಿಯಿಂದ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು.
Vijaya Karnataka Web nzMvhMgb


ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದ ವೇಳೆ ರಾಷ್ಟ್ರೀಯ ಪದಾಧಿಕಾರಿಗಳು ಹಾಜರಿದ್ದರು. ಸನ್ಮಾನ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ “ನನ್ನ ಮೇಲೆ ವಿಶ್ವಾಸವಿಟ್ಟು, ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಿದ ಪಕ್ಷದ ವರಿಷ್ಠರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ ನನ್ನನ್ನು ಸನ್ಮಾನಿಸುತ್ತಿರುವ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ಎಲ್ಲ ಪದಾಧಿಕಾರಿಗಳೂ ಹಾಗೂ ಸದಸ್ಯರಿಗೆ ಧನ್ಯವಾದ ತಿಳಿಸುತ್ತಿದ್ದೇನೆ ಎಂದರು.

ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮಾಜದ ತಳಮಟ್ಟದ ಪ್ರಜೆಯ ವರೆಗೆ ಮುಟ್ಟಿಸುವ ಅದಮ್ಯ ಜವಾಬ್ದಾರಿ 'ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ ಹೆಗಲ ಮೇಲಿದೆ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಎಂದು ಸಮಿತಿಗೆ ಶುಭ ಕೋರಿದರು.

ಬೆಂಗಳೂರಲ್ಲಿ‘ಮಾಸ್ಕ್‌ ಅಪ್‌’ ಕಾರ್ಯಕ್ರಮಕ್ಕೆ ಚಾಲನೆ: ಕೊರೊನಾ ವಿರುದ್ಧ ಜಾಗೃತಿ

ಬಳಿಕ ಮಾತನಾಡಿದ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಅಮಿತಾ ಪಾಂಡೆ, “ತೇಜಸ್ವಿ ಸೂರ್ಯರವರನ್ನು ನೋಡಿದಾಗ ನನ್ನ ಮಾತೃತ್ವ ಉಕ್ಕಿ ಬರುತ್ತೆ, ಇಂಥ ಮಗನನ್ನು ಪಡೆದ ತೇಜಸ್ವಿಯವರ ತಾಯಿ ನಿಜಕ್ಕೂ ಪುಣ್ಯವಂತರು, ಇವರ ಉತ್ಸಾಹ ನೇರನುಡಿ ಮತ್ತು ನಾಯಕತ್ವದ ಗುಣಗಳನ್ನು ನೋಡುತ್ತಿದ್ದಾರೆ, ಭವಿಷ್ಯದಲ್ಲಿ ಇವರನ್ನು ಇನ್ನೂ ಅತಿದೊಡ್ಡ ಸ್ಥಾನದಲ್ಲಿ ನೋಡಬೇಕೆನ್ನುವ ಆಶಯ ಮೂಡುತ್ತಿದೆ.

ಭಾರತಾಂಬೆಯ ಎಲ್ಲ ಕೃಪಾಶೀರ್ವಾದ ತೇಜಸ್ವಿ ಸೂರ್ಯರವರ ಮೇಲಿರಲಿ ಮತ್ತು ಅವರು ರಾಷ್ಟ್ರಮಟ್ಟದಲ್ಲಿ ಇನ್ನೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ ತಮ್ಮ ಕ್ಷೇತ್ರ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ಒತ್ತಾಸೆಯಾಗಲಿ ಎಂದು ಹಾರೈಸುತ್ತೇನೆ” ಎಂದರು. ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷರಾದಂತಹ ಪುಶೇಷ್ ಆತ್ರೇಯ, ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಶಶಾಂಕ್ ಚೋಪಡ, ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಸದಸ್ಯರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದರು.

ರಾಜ್ಯದ ಸಂಘಟನಾ ಕಾರ್ಯದರ್ಶಿ ದಿನೇಶ್ ಹಾರ್ದಿಕ್ ಪಟೇಲ್, ಕಾರ್ಯದಶಿಗಳಾದ ಭರತ್‌ಕುಮಾರ್, ಯುವಾಧ್ಯಕ್ಷರಾದ ಕೌಶಲ್ ಜೈನ್, ಐ.ಟಿ. ಸೆಲ್ ಮುಖ್ಯಸ್ಥರಾದ ಲಲಿತ್ ಡಾಖಾಲಿಯಾ, ಮಾದ್ಯಮ ಸದಸ್ಯರಾದ ಮುರಳಿ. ಬಿ.ಆರ್, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶೋಭಾ ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾದ ರಘುಪತಿ ನಾಯ್ಡು ಮತ್ತು ಬೆಂಗಳೂರು ಗ್ರಾಮಾಂತರದ ಸದಸ್ಯರಾದ ವಿವೇಕ್ ಸಿಂಗ್ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು: ತಡರಾತ್ರಿ ಮಳೆ ಅಬ್ಬರ, ಮನೆಗಳಿಗೆ ನುಗ್ಗಿದ ನೀರು, ನಿವಾಸಿಗಳ ಜಾಗರಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ