ಆ್ಯಪ್ನಗರ

ಯಾವುದೇ ಆತಂಕ ಬೇಡ, ಎಲ್ಲವೂ ಒಳ್ಳೆಯದಾಗುತ್ತೆ ಅಂತಾ ಬಿಎಸ್‌ವೈ ಹೇಳಿದ್ದಾರೆ; ಎಂಟಿಬಿ ನಾಗರಾಜ್

ಯಡಿಯೂರಪ್ಪ ರಾಜೀನಾಮೆಯಿಂದ ನಮಗೆ ಯಾವುದೇ ಆತಂಕ ಇಲ್ಲ, ಯಾರೇ ಸಿಎಂ ಆದರೂ ನಮಗೆ ಆತಂಕ ಇಲ್ಲ ಎಂದರು. ರಾಜ್ಯದಲ್ಲಿ ಒಳ್ಳೆಯ ರೀತಿಯ ಆಡಳಿತ ಕೊಡುವವರು ಸಿಎಂ ಆಗಲಿ, ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಇವೆಲ್ಲವೂ ಈಗ ಆದ ನಿರ್ಧಾರ ಎಂದು ಎಂಟಿಬಿ ನಾಗರಾಜ್ ಹೇಳಿದರು.

Vijaya Karnataka Web 27 Jul 2021, 12:03 pm
ಬೆಂಗಳೂರು: ಯಾವುದೇ ಆತಂಕ ಬೇಡ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಅವರು ಅಭಯ ನೀಡಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.‌
Vijaya Karnataka Web mtb nagaraj.


ಯಡಿಯೂರಪ್ಪ ಅವರನ್ನು ಭೇಟಿ ಆದ ಬಳಿಕ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ನಮಗೆ ಯಾವುದೇ ಆತಂಕ ಇಲ್ಲ, ಯಾರೇ ಸಿಎಂ ಆದರೂ ನಮಗೆ ಆತಂಕ ಇಲ್ಲ ಎಂದರು. ರಾಜ್ಯದಲ್ಲಿ ಒಳ್ಳೆಯ ರೀತಿಯ ಆಡಳಿತ ಕೊಡುವವರು ಸಿಎಂ ಆಗಲಿ, ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಇವೆಲ್ಲವೂ ಈಗ ಆದ ನಿರ್ಧಾರ ಎಂದರು.
ರಿಲ್ಯಾಕ್ಸ್‌ ಮೂಡ್‌ನಲ್ಲಿ ಬಿಎಸ್‌ವೈ; ಕಾವೇರಿ ನಿವಾಸದಲ್ಲಿ ಗೋವುಗಳ ಆರೈಕೆ
ಇನ್ನು ಯಡಿಯೂರಪ್ಪ ರಾಜೀನಾಮೆ ನೀಡುವಾಗ ಅವರ ರಾಜಕೀಯ ಏಳು ಬೀಳು ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿದ್ದಾರೆ ಎಂದ ಅವರು, ವಿಜಯೇಂದ್ರ ವಿರುದ್ಧದ ವಿಶ್ವನಾಥ್ ಆರೋಪ ವೈಯುಕ್ತಿಕವಾಗಿದೆ. ನಾನು ಅಧಿಕಾರದ ಆಸೆಯಿಂದ ರಾಜಕೀಯ ಮಾಡಿಲ್ಲ, ಸಚಿವ ಸ್ಥಾನದ ಸಿಗುವ ಕೈತಪ್ಪುವ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ ಎಂದರು.

ಇನ್ನು ಮಿತ್ರಮಂಡಳಿ ಒಗ್ಗಟ್ಟಾಗಿದ್ದೇವೆ, ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಾವು ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನು ನಂಬಿ ಬಂದಿಲ್ಲ, ಮೋದಿ ಅವರ ಪಾರದರ್ಶಕ ಆಡಳಿತ ನೋಡಿ ಬಂದಿದ್ದೇವೆ. ವರಿಷ್ಠರು ಯಾರನ್ನಾದರೂ ಮಾಡಲಿ, ಆದರೆ ಉತ್ತಮ ಆಡಳಿತ ನೀಡುವ ಪ್ರಾಮಾಣಿಕರು ಆಗಲಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ