ಆ್ಯಪ್ನಗರ

ಆರ್‌ಟಿಐ ಕಾರ್ಯಕರ್ತನ ಕೊಲೆ ಕೇಸ್; ಮಾಜಿ ಕಾರ್ಪೋರೇಟರ್ ಸೇರಿ 12 ಮಂದಿಗೆ ಶಿಕ್ಷೆ

ಕಾರ್ಪೋರೇಟರ್‌ ಆಗಿದ್ದ ಗೌರಮ್ಮ ಅವರ ಕ್ಷೇತ್ರದ ವ್ಯಾಪ್ತಿಯ ಕಾಮಗಾರಿಗಳ ಕುರಿತು ಮಾಹಿತಿ ಸಂಗ್ರಹಿಸಿ ಪತ್ರಿಕೆಯಲ್ಲಿ ಬರೆದಿದ್ದಕ್ಕೆ ದ್ವೇಷ ಸಾಧಿಸಿ ಲಿಂಗರಾಜು ಅವರನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಚಾಮರಾಜಪೇಟೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

Vijaya Karnataka Web 29 Oct 2020, 7:15 am
ಬೆಂಗಳೂರು: ಚಾಮರಾಜಪೇಟೆಯ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಜಿ ಕಾರ್ಪೊರೇಟರ್‌ ಗೌರಮ್ಮ ಸೇರಿದಂತೆ 12 ಮಂದಿ ಅಪರಾಧಿಗಳು ಎಂದು ಸೆಷನ್ಸ್‌ ನ್ಯಾಯಾಲಯ ಬುಧವಾರ ಆದೇಶ ನೀಡಿದೆ. ಶಿಕ್ಷೆ ಕುರಿತು ಗುರುವಾರ ಆದೇಶ ಹೊರಡಿಸಲಾಗುತ್ತದೆ.
Vijaya Karnataka Web court
Representative image


ನವರಾತ್ರಿ ವೇಳೆ ಬನಶಂಕರಿ ದೇಗುಲದ ಹುಂಡಿಯಲ್ಲಿ ಬರೋಬ್ಬರಿ 28.38 ಲಕ್ಷಕ್ಕೂ ಅಧಿಕ ಹಣ ಸಂಗ್ರಹ

ಮಾಜಿ ಕಾರ್ಪೊರೇಟರ್‌ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಆರ್‌.ಶಂಕರ್‌, ರಾಘವೇಂದ್ರ, ಚಂದ್ರ, ಶಂಕರ್‌, ಉಮಾಶಂಕರ್‌, ವೇಲು, ಲೋಕನಾಥ, ಜಹೀರ್‌ ಮತ್ತು ಸುರೇಶ್‌ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥತರು ಎಂದು ನ್ಯಾಯಾಲಯ ಆದೇಶ ನೀಡಿದೆ. ಆರ್‌ಟಿಐ ಕಾರ್ಯಕರ್ತ ಹಾಗೂ ಟ್ಯಾಬ್ಲಾಯ್ಡ್‌ ಪತ್ರಿಕೆ ನಡೆಸುತ್ತಿದ್ದ ಲಿಂಗರಾಜು ಅವರನ್ನು 2012ರ ನ.20ರಂದು ಮನೆ ಮುಂದೆ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು.

ಗುರುಗಳ ಮತ ಹಾಕಿಸಲು ಶಿಷ್ಯಂದಿರ ದುಂಬಾಲು; ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಪಾಲಿಕೆ ಸದಸ್ಯರಾಗಿದ್ದ ಗೌರಮ್ಮ ಅವರ ಕ್ಷೇತ್ರದ ವ್ಯಾಪ್ತಿಯ ಕಾಮಗಾರಿಗಳ ಕುರಿತು ಮಾಹಿತಿ ಸಂಗ್ರಹಿಸಿ ಪತ್ರಿಕೆಯಲ್ಲಿ ಬರೆದಿದ್ದಕ್ಕೆ ದ್ವೇಷ ಸಾಧಿಸಿ ಲಿಂಗರಾಜು ಅವರನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಚಾಮರಾಜಪೇಟೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ