ಆ್ಯಪ್ನಗರ

ಪ್ರಿಯಕರನ ಜತೆ ಸೇರಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ

ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದವಳು ಸೇರಿದಂತೆ ಮೂವರಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ದೇವನಹಳ್ಳಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 19 Jan 2019, 5:00 am
ಬೆಂಗಳೂÃು: ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದವಳು ಸೇರಿದಂತೆ ಮೂವರಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ದೇವನಹಳ್ಳಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web jail


ಶಾಂಪೂರದ ಚಿಕ್ಕಣ್ಣ ಲೇಔಟ್‌ನ ಅಸ್ಮಾ ರಿಜ್ವಾನಾ(36), ಪ್ರಿಯಕರ ಟ್ಯಾನರಿ ರಸ್ತೆ ನಿವಾಸಿ ಫಾಹಿದ್‌ (38) ಮತ್ತು ಡಿ.ಜೆ ಹಳ್ಳಿಯ ಇಮ್ರಾನ್‌ ಪಾಷಾ (31) ಶಿಕ್ಷೆಗೊಳಗಾದವರು.

2015ರ ಅ.12ರಂದು ಆಟೊ ಚಾಲಕ ಖಾಜಾ ಮಹಮದ್‌ ಅಮೀದು ಖುರೇಷಿ (42) ಎಂಬುವರನ್ನು ಮೂವರು ಸೇರಿ ಕೊಂದಿದ್ದರು.

ಶಾಂಪೂರ ರಸ್ತೆ ಚಿಕ್ಕಣ್ಣ ಲೇಔಟ್‌ನಲ್ಲಿ ಖುರೇಷಿ, ತನ್ನ ಪತ್ನಿ ಆಸ್ಮಾ ಮತ್ತು ನಾಲ್ವರು ಮಕ್ಕಳ ಜತೆ ನೆಲೆಸಿದ್ದರು. ಮನೆಯ ಎದುರು ನೆಲೆಸಿದ್ದ ಗುಜರಿ ವ್ಯಾಪಾರಿ ಫಾಹಿದ್‌ ಮತ್ತು ಅಸ್ಮಾಳ ನಡುವೆ ಅಕ್ರಮ ಸಂಬಂಧವಿತ್ತು. ವಿಚಾರ ತಿಳಿದ ಖುರೇಷಿ, ಪತ್ನಿಗೆ ಬುದ್ಧಿ ಹೇಳಿದ್ದರು. ಕುಪಿತಗೊಂಡ ಅಸ್ಮಾ, ಪ್ರಿಯಕರನ ಜತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಕೊಲೆಗೆ ನೆರವಾಗಲು, ಪ್ರಿಯಕರನ ಸಹೋದರ ಇಮ್ರಾನ್‌ ಪಾಷಾಗೆ 20 ಸಾವಿರ ರೂ. ನೀಡಿದ್ದಳು.

ಕ್ವಾರಿಯಲ್ಲಿ ಶವ ಬಿಸಾಡಿದ್ದರು: 2015ರ ಅ.12ರ ಸಂಜೆ ಮಾರೇನಹಳ್ಳಿಯಿಂದ ಗುಜರಿ ವಸ್ತುಗಳನ್ನು ತರಲು ಇದೆ ಎಂದು ಹೇಳಿ ಅಮೀದು ಖುರೇಷಿಯ ಆಟೋವನ್ನು ಬಾಡಿಗೆಗೆ ಬುಕ್‌ ಮಾಡಿದ್ದ ಫಾಹಿದ್‌ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮೊದಲೇ ಕಾಯುತ್ತಿದ್ದ ಇಮ್ರಾನ್‌ ಪಾಷಾ ಜತೆ ಸೇರಿಕೊಂಡು, ಖುರೇಷಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿ ಶವವನ್ನು ಕ್ವಾರಿಯಲ್ಲಿ ಬಿಸಾಡಿದ್ದರು. ನಂತರ ದಾರಿಯಲ್ಲಿ ಕಾಯುತ್ತಿದ್ದ ಅಸ್ಮಾಳನ್ನು ಮನೆಗೆ ಬಿಟ್ಟು, ಆಟೋವನ್ನು ಹೊಸಕೋಟೆ ಬಳಿಯ ದರ್ಗಾವೊಂದರ ಬಳಿ ಬಿಟ್ಟು ಹೋಗಿದ್ದರು.

ನಾಪತ್ತೆ ದೂರು ದಾಖಲು: ಅ.12ರಂದು ಖುರೇಷಿ ನಾಪತ್ತೆಯಾಗಿರುವ ಕುರಿತು ಸಹೋದರ ದೂರು ದಾಖಲಿಸಿದ್ದರು. ಆದಾದ ಎರಡು ದಿನಗಳ ಬಳಿಕ ಕಲ್ಲಿನ ಕ್ವಾರಿಯಲ್ಲಿ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೊಬೈಲ್‌ ನೆಟ್‌ವರ್ಕ್‌ ಆಧಾರದಲ್ಲಿ ಮೊದಲಿಗೆ ಅಸ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಳು. ಬಾಗಲೂರು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ