ಆ್ಯಪ್ನಗರ

ಕುದುರೆ ನೋಡಿಕೊಳ್ಳುವವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ವಸಂತ ನಗರದ ಮಿಲ್ಲರ್‌ ಟ್ಯಾಂಕ್‌ ಬಂಡ್‌ ರಸ್ತೆ ಬಳಿಯ ಶೆಡ್‌ವೊಂದರಲ್ಲಿ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

Vijaya Karnataka 9 Dec 2018, 5:00 am
ಬೆಂಗಳೂರು : ವಸಂತ ನಗರದ ಮಿಲ್ಲರ್‌ ಟ್ಯಾಂಕ್‌ ಬಂಡ್‌ ರಸ್ತೆ ಬಳಿಯ ಶೆಡ್‌ವೊಂದರಲ್ಲಿ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
Vijaya Karnataka Web murder two people arrest
ಕುದುರೆ ನೋಡಿಕೊಳ್ಳುವವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ


ಶಿವಾಜಿ ನಗರ ನಿವಾಸಿ ಸೈಯದ್‌ ಫೈರೋಜ್‌ (20) ಕೊಲೆಯಾದವ. ಈ ಸಂಬಂಧ ಆರೀಫ್‌ ಮತ್ತು ಸಾದಿಕ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಫ್ರೇಜರ್‌ ಟೌನ್‌ ನಿವಾಸಿ, ಉದ್ಯಮಿ ಸಾದಿಕ್‌ ಅಂಜುಂ, ಶಿವಾಜಿನಗರದ ಸ್ಲಾಟರ್‌ಹೌಸ್‌ ರಸ್ತೆಯಲ್ಲಿ ಕುದುರೆಗಳನ್ನು ಸಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿ ಜಾಗ ಸಾಲದ ಕಾರಣ ಮಿಲ್ಲರ್‌ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಮುನ್ನಾ ಭಾಯ್‌ ಎಂಬುವವರ ಗ್ಯಾರೇಜ್‌ ಹಿಂದೆ ಇರುವ ಸಣ್ಣ ಜಾಗದಲ್ಲಿ ಆರು ಕುದುರೆಗಳನ್ನು ಸಾಕಿಕೊಂಡಿದ್ದರು. ಅಲ್ಲದೇ, ಆ ಕುದುರೆಗಳನ್ನು ನೋಡಿಕೊಳ್ಳಲು ಸೈಯದ್‌ ಫೈರೋಜ್‌, ಆರೀಫ್‌, ಸಿದ್ದಿಕ್‌, ಕುಮಾರ್‌, ಇಮ್ರಾನ್‌ ಫೈಯಾಜ್‌ ಮತ್ತು ಅರ್ಬಾಜ್‌ ಎಂಬುವರನ್ನು ಕೆಲಸಕ್ಕೆ ನೇಮಿಸಿದ್ದರು.

ಸಾದಿಕ್‌ ಅಂಜುಂ ಅವರು ಶುಕ್ರವಾರ (ಡಿ.7) ಮಧ್ಯಾಹ್ನ ಸ್ಲಾಟರ್‌ಹೌಸ್‌ ರಸ್ತೆಯಲ್ಲಿರುವ ಕುದುರೆ ಕಟ್ಟುವ ಸ್ಥಳಕ್ಕೆ ಹೋಗಿದ್ದ ವೇಳೆ ಕೆಲಸಗಾರ ಫೈರೋಜ್‌ ಕಾಣಿಸಿಲ್ಲ. ಹೀಗಾಗಿ, ಆತ ಎಲ್ಲಿ ಹೋಗಿದ್ದಾನೆ ಎಂದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರ ಬಳಿ ಕೇಳಿದ್ದಾರೆ. ಆಗ, ಅರ್ಬಾಜ್‌ ''ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕುದುರೆಗೆ ನೀರು ಹಾಕಲು ವಸಂತನಗರಕ್ಕೆ ಹೋಗಿದ್ದೆ. ಅಲ್ಲಿ, ಆರೀಫ್‌ ಮತ್ತು ಸಾದಿಕ್‌ ಇದ್ದರು. ಆದರೆ, ಅವರ ಜೊತೆಗೆ ಹೋಗಿದ್ದ ಫೈರೋಜ್‌ ಕಾಣಿಸದ ಕಾರಣ ಎಲ್ಲಿ ಹೋಗಿದ್ದಾನೆ ಕೇಳಿದಾಗ ಅವರು ಗೊತ್ತಿಲ್ಲ ಎಂದು ಹೊರಟು ಹೋದರು. ನಂತರ ನೋಡಿದಾಗ ಅಲ್ಲೇ ಇರುವ ಗುಂಡಿಯಲ್ಲಿ ಫೈರೋಜ್‌ ಶವ ಕಾಣಿಸಿದೆ'' ಎಂದು ಹೇಳಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿದ ಮಾಲೀಕ ಸಾದಿಕ್‌ ಅಂಜುಂ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

''ತಾನೇ ಮೇಲ್ವಿಚಾರಕ ಎನ್ನುವಂತೆ ವರ್ತಿಸುತ್ತಿದ್ದ ಫೈರೋಜ್‌, ಸಹ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದ. ಇದರಿಂದ ಕುಪಿತಗೊಂಡ ಆರೀಫ್‌ ಮತ್ತು ಸಾದಿಕ್‌ ಆತನನ್ನು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ'' ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಹೈಗ್ರೌಂಡ್ಸ್‌ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ