ಆ್ಯಪ್ನಗರ

'ನಮ್ಮ-100': ಮೊದಲ ಕರೆ ಸ್ವೀಕರಿಸಿದ ಸಿಎಂ

ಬೆಂಗಳೂರು ನಗರ ಕಮಿಷನರೇಟ್‌ನ ಮಹತ್ವಾಕಾಂಕ್ಷೆಯ 'ನಮ್ಮ-100' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ವಿಕ ಸುದ್ದಿಲೋಕ 10 Jun 2017, 2:33 pm
ಬೆಂಗಳೂರು: ಬೆಂಗಳೂರು ನಗರ ಕಮಿಷನರೇಟ್‌ನ ಮಹತ್ವಾಕಾಂಕ್ಷೆಯ 'ನಮ್ಮ-100' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
Vijaya Karnataka Web namma 100 in bengaluru
'ನಮ್ಮ-100': ಮೊದಲ ಕರೆ ಸ್ವೀಕರಿಸಿದ ಸಿಎಂ


ಕಮಾಂಡ್ ಸೆಂಟರ್‌ನಲ್ಲಿ ಸ್ವತಹ ಕರೆ ಸ್ವೀಕರಿಸಿದ ಸಿಎಂ,ರಾಜ್ಯದ ಇತರ ಕಮೀಷನರೇಟ್ ವ್ಯಾಪ್ತಿಯಲ್ಲೂ ನಮ್ಮ 100 ಆರಂಭಿಸಲಾಗುವುದು ಎಂದರು. ಕಲಾಸಿಪಾಳ್ಯದಿಂದ ಮಹಿಳೆಯೊಬ್ಬರು ಕರೆ ಮಾಡಿ ಪಾಸ್‌ಪೋರ್ಟ್ ಕಳೆದು ಹೋಗಿದೆ ಎಂದು ದೂರಿದರು. ನಮ್ಮ ಪೋಲಿಸರು ಅದನ್ನು ಹುಡುಕಿ ಕೊಡುತ್ತಾರೆ ಎಂದು ಸಿಎಂ ಭರವಸೆ ನೀಡಿದರು.

ಸಾರ್ವಜನಿಕ ಸುರಕ್ಷತೆಯ ಎಲ್ಲಾ ಸಂಸ್ಥೆಗಳನ್ನೂ ಒಂದೇ ನಂಬರ್‌ನ ಅಡಿಯಲ್ಲಿ ತಂದು ಸೇವೆ ನೀಡುವ ಯೋಜನೆ ಇದಾಗಿದೆ. ಸಾರ್ವಜನಿಕರು ಮಾಡಬೇಕಾದ್ದಿಷ್ಟೆ. 100ಕ್ಕೆ ಡಯಲ್‌ ಮಾಡಿ ಪೊಲೀಸ್‌ ಸೇವೆಗೆ 1 ಅನ್ನು, ಸಂಚಾರ ಪೊಲೀಸ್‌ಗೆ 2ನ್ನು, ವಿಚಾರಣೆ ಮತ್ತು ಪೊಲೀಸ್‌ ಠಾಣೆಗೆ ಭೇಟಿ ನೀಡುವ ಸಮಯ ನಿಗದಿಗೆ 3ನ್ನು ಒತ್ತಿದರೆ ಸಾಕು. ಬೇಕಾದ ಮಾಹಿತಿ ಮತ್ತು ನೆರವು ಇಲ್ಲಿಂದಲೇ ಲಭ್ಯವಾಗುತ್ತದೆ.

ಮುಂದಿನ ಒಂದೆರಡು ವಾರಗಳಲ್ಲಿ ಅಗ್ನಿ ಶಾಮಕ ಮತ್ತು ಆಂಬ್ಯುಲೆನ್ಸ್‌ ಬುಲೆನ್ಸ್‌ ಸೌಲಭ್ಯವನ್ನೂ ಈ ವ್ಯವಸ್ಥೆಯಲ್ಲೇ ಸೇರ್ಪಡೆಗೊಳಿಸುವ ಉದ್ದೇಶವಿದೆ. ಇದಕ್ಕಾಗಿ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ,'' ಎಂದು ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ