ಆ್ಯಪ್ನಗರ

ನಮ್ಮ ಮೆಟ್ರೊ 2ನೇ ಹಂತ: ಸುರಂಗ ಕೊರೆಯಲು ಆರಂಭಿಸಿದ ‘ವಿಂಧ್ಯಾ’ ಟಿಬಿಎಂ!

ನಮ್ಮ ಮೆಟ್ರೊದ 74 ಕಿ.ಮೀ. ಮಾರ್ಗದ 2ನೇ ಹಂತದ ರೀಚ್‌- 6ರಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಸುರಂಗ ಕೊರೆಯುವ ಕಾರ್ಯವನ್ನು ಟನೆಲ್‌ ಬೋರಿಂಗ್‌ ಯಂತ್ರ (ಟಿಬಿಎಂ) 'ವಿಂಧ್ಯಾ' ಆರಂಭಿಸಿದೆ. ಈಗಾಗಲೇ 'ಊರ್ಜಾ' ಮತ್ತು 'ಅವನಿ' ಸುರಂಗ ಕೊರೆಯುವ ಕೆಲಸ ಆರಂಭಿಸಿವೆ.

Vijaya Karnataka Web 15 Oct 2020, 11:07 pm
ಬೆಂಗಳೂರು: ನಮ್ಮ ಮೆಟ್ರೊದ 74 ಕಿ.ಮೀ. ಮಾರ್ಗದ 2ನೇ ಹಂತದ ರೀಚ್‌- 6ರಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಸುರಂಗ ಕೊರೆಯುವ ಕಾರ್ಯವನ್ನು ಟನೆಲ್‌ ಬೋರಿಂಗ್‌ ಯಂತ್ರ (ಟಿಬಿಎಂ) 'ವಿಂಧ್ಯಾ' ಆರಂಭಿಸಿದೆ.
Vijaya Karnataka Web Bengaluru: View of tunnelling operations for Metro Phase-II near the upcoming C...
View of tunnelling operations for Metro Phase-II near the upcoming Cantonment Metro Station, inaugurated by Karnataka Chief minister BS Yediyurappa, in Bengaluru.Photo)(


ರೀಚ್‌ 6ರ 21 ಕಿ.ಮೀ. ಉದ್ದದ ಮಾರ್ಗದಲ್ಲಿ 13.8 ಕಿ.ಮೀ. ಸುರಂಗ ಮಾರ್ಗವಿದೆ. ಈಗಾಗಲೇ 'ಊರ್ಜಾ' ಮತ್ತು 'ಅವನಿ' ಸುರಂಗ ಕೊರೆಯುವ ಕೆಲಸ ಆರಂಭಿಸಿದ್ದು, 'ವಿಂಧ್ಯಾ' ಸುರಂಗ ಕೊರೆಯುವ ಮೂರನೇ ಟಿಬಿಎಂ ಆಗಿದೆ.

ಆ.30ರಂದು ಕಂಟೋನ್ಮೆಂಟ್‌ ಮತ್ತು ಶಿವಾಜಿನಗರ ನಡುವಿನ ಸುರಂಗ ಮಾರ್ಗ ಕೊರೆಯುವುದಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. ಟಿಬಿಎಂ 'ಊರ್ಜಾ' ಸುರಂಗ ಕೊರೆಯಲು ಆರಂಭಿಸಿತ್ತು. ಅದರ ಪಕ್ಕದಲ್ಲೇ ಮತ್ತೊಂದು ಸುರಂಗ ಕೊರೆಯುವ ಕಾರ್ಯವನ್ನು ಕಳೆದ ವಾರದಿಂದ 'ವಿಂಧ್ಯಾ' ಆರಂಭಿಸಿದೆ.

ನಮ್ಮ ಮೆಟ್ರೋ: ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿಗೆ ಬಿಎಸ್‌ವೈ ಚಾಲನೆ

ಕಂಟೋನ್ಮೆಂಟ್‌ ನಿಲ್ದಾಣದಿಂದ ಶಿವಾಜಿನಗರದ ಕಡೆ ಸುಮಾರು 860 ಮೀಟರ್‌ ಸುರಂಗ ಕೊರೆಯುವ ಟಿಬಿಎಂ 'ವಿಂಧ್ಯಾ'ವನ್ನು ವಾಪಸ್‌ ಕಂಟೋನ್ಮೆಂಟ್‌ ನಿಲ್ದಾಣದ ಕಡೆಗೆ ತರಲಾಗುತ್ತದೆ. ನಂತರ ಟ್ಯಾನರಿ ರಸ್ತೆ ಕಡೆಗಿನ ಸುರಂಗಕ್ಕೆ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಸ್ತರಿಸಿದ ಮಾರ್ಗದಲ್ಲಿ ಅತಿ ಶೀಘ್ರದಲ್ಲೇ ಮೆಟ್ರೋ ಸಂಚಾರ

ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ
ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿಯಿಂದ ಅಂಜನಾಪುರದವರೆಗಿನ ವಿಸ್ತರಿಸಿದ ಮಾರ್ಗದಲ್ಲಿ ತಪಾಸಣೆಗಾಗಿ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಬಿಎಂಆರ್‌ಸಿಎಲ್‌ನಿಂದ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ತಪಾಸಣೆ ಬಳಿಕ ವಾಣಿಜ್ಯ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದರೆ ನವೆಂಬರ್‌ ತಿಂಗಳಲ್ಲಿ ನಾಗಸಂದ್ರದಿಂದ ಅಂಜನಾಪುರದವರೆಗೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಈಗ ಪರೀಕ್ಷಾರ್ಥ ಸಂಚಾರ ಪ್ರಗತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ