ಆ್ಯಪ್ನಗರ

ಹಳಿ ಮೇಲೆ ಮರದ ರೆಂಬೆ ಬಿದ್ದು ನಮ್ಮ ಮೆಟ್ರೋ ಸಂಚಾರ ವ್ಯತ್ಯಯ

ಯಲಚೇನಹಳ್ಳಿ ಮತ್ತು ಆರ್‌ವಿ ರಸ್ತೆ ನಡುವೆ ಥರ್ಡ್‌ ರೇಲ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಬುಧವಾರ ನಮ್ಮ ಮೆಟ್ರೋ ಸಂಚಾರ 90 ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

Vijaya Karnataka Web 22 Aug 2018, 9:36 pm
[ಮೂಲ ಸುದ್ದಿ: ಟೈಮ್ಸ್ ಆಫ್ ಇಂಡಿಯಾ, 22 ಆಗಸ್ಟ್ 2018]
Vijaya Karnataka Web Namma Metro Green line


ಬೆಂಗಳೂರು:
ಯಲಚೇನಹಳ್ಳಿ ಮತ್ತು ಆರ್‌ವಿ ರಸ್ತೆ ನಡುವೆ ಥರ್ಡ್‌ ರೇಲ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಬುಧವಾರ ನಮ್ಮ ಮೆಟ್ರೋ ಸಂಚಾರ 90 ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಹಸಿರು ಮಾರ್ಗದಲ್ಲಿ ಸಾಮಾನ್ಯವಾಗಿ ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭವಾಗುತ್ತದೆ. ಆದರೆ ಇಂದು ತಾಂತ್ರಿಕ ದೋಷದಿಂದಾಗಿ ಬೆಳಗ್ಗೆ 6:30ಕ್ಕೆ ಸಂಚಾರ ಆರಂಭವಾಯಿತು. ರೈಲಿನ ಓಡಾಟಕ್ಕೆ ಅಗತ್ಯವಿರುವ ವಿದ್ಯುತ್‌ ಪೂರೈಸುವ ಥರ್ಡ್‌ ಲೈನ್‌ ವ್ಯವಸ್ಥೆಯಲ್ಲಿ 750 ವೋಲ್ಟ್‌ ಡಿಸಿ ವಿದ್ಯುತ್ ಪ್ರವಹಿಸುತ್ತದೆ. ಜಯನಗರ ಮತ್ತು ಲಾಲ್‌ಬಾಗ್‌ ನಿಲ್ದಾಣಗಳ ನಡುವೆ ಆ ಲೈನ್‌ ಮೇಲೆ ಮರದ ರೆಂಬೆ ಬಿದ್ದು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಹಳಿಯ ದುರಸ್ತಿ ನಂತರ ಸುರಕ್ಷತಾ ವಿಭಾಗ ಅನುಮತಿ ನೀಡಿದ ಬಳಿಕ ಮೆಟ್ರೋ ಸಂಚಾರ ಪುನರಾರಂಭಿಸಲಾಯಿತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಕ್ರೀದ್‌ ಹಿನ್ನೆಲೆಯಲ್ಲಿ ರಜಾ ದಿನವಾದ್ದರಿಂದ ಬೆಳಗಿನ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ಸಂಚಾರ ವ್ಯತ್ಯಯವಾದರೂ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಆರು ತಿಂಗಳ ಅವಧಿಯಲ್ಲಿ ಈ ರೀತಿ ಮೆಟ್ರೋ ಸಂಚಾರ ರದ್ದಾಗುತ್ತಿರುವುದು ಇದು ಎರಡನೇ ಸಲವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ