ಆ್ಯಪ್ನಗರ

ನಮ್ಮ ಹೆಮ್ಮೆಯ ಮೆಟ್ರೊಗೆ 8ರ ಸಂಭ್ರಮ: 41 ಕೋಟಿ ಪ್ರಯಾಣಿಕರ ಪಯಣ

ಮೆಟ್ರೊದ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮೆಟ್ರೊ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Vijaya Karnataka 21 Oct 2019, 12:26 pm
ಬೆಂಗಳೂರು: 41 ಕೋಟಿ ಪ್ರಯಾಣಿಕರಿಗೆ ಸುಲಭವಾದ ಸಾರಿಗೆ ಸೌಲಭ್ಯ ನೀಡುವುದರೊಂದಿಗೆ ‘ನಮ್ಮ ಮೆಟ್ರೊ’ ಸೇವೆಯು 8 ವರ್ಷ ತುಂಬಿ 9ನೇ ವರ್ಷಕ್ಕೆ ಕಾಲಿಟ್ಟಿದೆ. 2011ರ ಅಕ್ಟೋಬರ್‌ 20ರಂದು ಬೈಯ್ಯಪ್ಪನಹಳ್ಳಿ- ಎಂ.ಜಿ.ರಸ್ತೆ ನಡುವೆ ಮೆಟ್ರೊ ಸೇವೆ ಆರಂಭವಾಗಿತ್ತು. ಆಗ 6.7 ಕಿ.ಮೀ. ಸೇವೆ ನೀಡುತ್ತಿದ್ದ ಮೆಟ್ರೊ, ಈಗ 42.3 ಕಿ.ಮೀ. ಉದ್ದದ ಮಾರ್ಗದಲ್ಲಿ ಸೇವೆ ನೀಡುತ್ತಿದೆ.
Vijaya Karnataka Web Metro


ಈ ಮಾರ್ಗದಲ್ಲಿ ಇದುವರೆಗೆ ಒಟ್ಟು 41.51 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ ಮೆಟ್ರೊದ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮೆಟ್ರೊ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2017ರ ಜೂನ್‌ನಲ್ಲಿ ಒಂದನೇ ಹಂತದ ಪೂರ್ಣ ಸಂಚಾರ ಆರಂಭವಾಧಿದಾಗ ಪ್ರತಿದಿನ 3.60 ಲಕ್ಷದಷ್ಟು ಜನ ಸಂಚರಿಸುತ್ತಿದ್ದರು.

ಈಗ ನಿತ್ಯ ಪ್ರಯಾಣಿಕರ ಸಂಖ್ಯೆ 3.90 ಲಕ್ಷದಿಂದ 4 ಲಕ್ಷಕ್ಕೆ ಮುಟ್ಟಿದೆ. ಹಬ್ಬದ ಸಮಯದಲ್ಲಂತೂ 4.50 ಲಕ್ಷದಷ್ಟು ಮಂದಿ ಮೆಟ್ರೊ ಬಳಸಿಕೊಳ್ಳುತ್ತಿದ್ದಾರೆ. ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ ನೇರಳೆ ಮಾರ್ಗದಲ್ಲಿ ದಟ್ಟಣೆ ಹೆಚ್ಚಾಗುತ್ತಿದ್ದುದರಿಂದ ಆರು ಬೋಗಿಗಳ ರೈಲು ಬೇಕೆಂಬ ಬೇಡಿಕೆ ಕೇಳಿ ಬಂದಿತ್ತು. ಇತ್ತೀಚೆಗೆ ಈ ಮಾರ್ಗದಲ್ಲಿ ಎಲ್ಲ ರೈಲುಗಳನ್ನೂ ಆರು ಬೋಗಿಯ ರೈಲಾಗಿ ಪರಿವರ್ತಿಸಿರುವುದು ಸಾಧನೆಯಾಗಿದೆ.

ಈಗ ನಾಗಸಂದ್ರ- ಯಲಚೇನಹಳ್ಳಿ ಹಸಿರು ಮಾರ್ಗದಲ್ಲೂ ದಟ್ಟಣೆ ಕಂಡು ಬರುತ್ತಿದೆ. ಉದ್ಯೋಗಿಗಳು ಸ್ವಂತ ವಾಹನಗಳನ್ನು ಬದಿಗಿಟ್ಟು ಮೆಟ್ರೊ ಹತ್ತುತ್ತಿರುವುದರಿಂದ ಈ ಮಾರ್ಗದಲ್ಲೂ ಆರು ಬೋಗಿಯ ರೈಲುಗಳ ಅಗತ್ಯತೆ ಹೆಚ್ಚಿದೆ. ಸದ್ಯಕ್ಕೆ ಎರಡು ರೈಲುಗಳನ್ನು ಮಾತ್ರ ಆರು ಬೋಗಿ ರೈಲಾಗಿ ಪರಿವರ್ತಿಸಲಾಗಿದೆ.

1ನೇ ಹಂತದ ಪೂರ್ಣ ಕಾರ್ಯಾಚರಣೆ ಆರಂಭವಾಗಿ ಎರಡೂವರೆ ವರ್ಷ ಕಳೆದಿದೆ. ಆದರೂ 2ನೇ ಹಂತದ ಒಂದೂ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿಲ್ಲ. ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಜನರು ನಿರಾಶರಾಗಿದ್ದಾರೆ. ಮುಂದಿನ ವರ್ಷದಲ್ಲಿ ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆಯಲ್ಲಿ ಮೆಟ್ರೊ ಓಡಾಡುವ ನಿರೀಕ್ಷೆ ಇದೆ. ಇದಕ್ಕಾಗಿ ಲಕ್ಷಾಂತರ ಜನರು ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ