ಆ್ಯಪ್ನಗರ

'ನಾಡಪ್ರಭು'ವಿಗಾಗಿ ಮತ್ತೆ ಮೆಟ್ರೊ ಗಲಾಟೆ ?

ಪೇಗೌಡ ಮೆಟ್ರೋ ನಿಲ್ದಾಣವನ್ನು ನಾಡ ಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು, ಇಲ್ಲದಿದ್ದರೆ ಮೆಟ್ರೊ ಸೇವೆಗೆ ತಡೆಯೊಡ್ಡುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.

Bangalore Mirror Bureau 26 Apr 2017, 1:33 pm
ಬೆಂಗಳೂರು: ಕೆಂಪೇಗೌಡ ಮೆಟ್ರೋ ನಿಲ್ದಾಣವನ್ನು ನಾಡ ಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು, ಇಲ್ಲದಿದ್ದರೆ ಮೆಟ್ರೊ ಸೇವೆಗೆ ತಡೆಯೊಡ್ಡುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.
Vijaya Karnataka Web namma metros bane now lies in a name
'ನಾಡಪ್ರಭು'ವಿಗಾಗಿ ಮತ್ತೆ ಮೆಟ್ರೊ ಗಲಾಟೆ ?


ಕಳೆದ ಒಂದು ವರ್ಷದಿಂದ ಮೆಜೆಸ್ಟಿಕ್‌ ಮೆಟ್ರೊ ಸ್ಟೇಷನ್‌ಗೆ ನಾಡ ಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಬೇಡಿಕೆಗೆ ಸ್ಪಂದಿಸದಿದ್ದರೆ ಉತ್ತರ-ದಕ್ಷಿಣವನ್ನು ಸಂಪರ್ಕ ಕಲ್ಪಿಸುವ ಮೆಟ್ರೊ ಸೇವೆಗೆ ತಡೆಯೊಡ್ಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿವೆ.

ಈ ಹಿಂದೆ ನಮ್ಮ ಮೆಟ್ರೊದಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಯಶಸ್ವಿಯಾಗಿತ್ತು. ಅಲ್ಲದೇ ಪ್ರತಿಯೊಂದು ಮೆಟ್ರೊ ನಿಲ್ದಾಣಗಳಿಗೂ ಶ್ರೀ, ಸ್ವಾಮೀಜಿ, ಕ್ರಾಂತಿ ವೀರ, ಡಾ. ಸರ್‌. ಎಂಬ ಬಿರುದಾಂಕಗಳನ್ನು ನೀಡಲಾಗಿದೆ. ಆದರೆ ಕೆಂಪೇಗೌಡ ನಿಲ್ದಾಣಕ್ಕೆ ಇಂತಹ ಯಾವುದೇ ಬಿರುದಿಲ್ಲ. ಹೀಗಾಗಿ ಈ ನಿಲ್ದಾಣಕ್ಕೆ ನಾಡಪ್ರಭು ಎಂಬ ಹೆಸರು ನೀಡಿ ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದೆ.

'ಎಲ್ಲಾ ಮೆಟ್ರೊ ನಿಲ್ದಾಣಗಳಿಗೂ ಬಿರುದುಗಳುಳ್ಳ ಹೆಸರನ್ನು ನಾಮಕರಣ ಮಾಡಲಾಗಿದೆ, ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಮಾತ್ರ ಇದು ಅನ್ವಯವಾಗಿಲ್ಲ. ಇಲ್ಲಿನ ಮೆಟ್ರೊದಲ್ಲಿ ಸಾವಿರಾರು ಜನರು ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಆದರೆ ಮೆಜೆಸ್ಟಿಕ್‌ ಬಿಟ್ಟು ಉಳಿದೆಲ್ಲಾ ನಿಲ್ದಾಣಗಳಲ್ಲಿ ಪ್ರತಿಯೊಬ್ಬ ಶೇಷ್ಠ ವ್ಯಕ್ತಿಗಳಿಗೆ ಗೌರವದಿಂದ ಅವರ ಹೆಸರನ್ನು ಕರೆಯಲಾಗುತ್ತದೆ. ಆದರೆ ಕೆಂಪೇಗೌಡ ನಿಲ್ದಾಣಕ್ಕೆ ಯಾವುದೇ ಗೌರವವನ್ನು ತೋರಲಾಗುವುದಿಲ್ಲ. ಹೀಗಾಗಿ ಈ ನಿಲ್ದಾಣಕ್ಕೆ ನಾಡಪ್ರಭು ಎಂದು ಮರುನಾಮಕರಣ ಮಾಡಿ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಒತ್ತಾಯಿಸಿರುವುದಾಗಿ ಹೋರಾಟಗಾರ ಟಿ ನರಸಿಂಹ ಮೂರ್ತಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ