ಆ್ಯಪ್ನಗರ

ಡಿಸಿಎಂ ಪರಮೇಶ್ವರ್ ಭೇಟಿಯಾದ ಇನ್ಫಿ ನಾರಾಯಣ ಮೂರ್ತಿ

ಮೈಸೂರಿನಲ್ಲಿರುವ ನ್ಯಾಷನಲ್‌‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ನನ್ನು ಅಭಿವೃದ್ಧಿ ಮಾಡುವ ಸಂಬಂಧ ನಾರಾಯಣಮೂರ್ತಿ ಅವರು ಇಂದು ಭೇಟಿ ಮಾಡಿ ನನ್ನೊಂದಿಗೆ ಚರ್ಚಿಸಿದರು ಎಂದು ಹೇಳಿದರು.

Vijaya Karnataka Web 24 Jan 2019, 12:17 pm
ಬೆಂಗಳೂರು: ಇನ್‌ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು‌ ಇಂದು ಸದಾಶಿವನಗರದ ಬಿಡಿಎ ಕಚೇರಿಯಲ್ಲಿ ಭೇಟಿ ಮಾಡಿದರು.
Vijaya Karnataka Web infi


ಬಳಿಕ‌ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಮೈಸೂರಿನಲ್ಲಿರುವ ನ್ಯಾಷನಲ್‌‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ನನ್ನು ಅಭಿವೃದ್ಧಿ ಮಾಡುವ ಸಂಬಂಧ ನಾರಾಯಣಮೂರ್ತಿ ಅವರು ಇಂದು ಭೇಟಿ ಮಾಡಿ ನನ್ನೊಂದಿಗೆ ಚರ್ಚಿಸಿದರು ಎಂದು ಹೇಳಿದರು.

ಇದೇ ಸಂಸ್ಥೆಯಲ್ಲಿ ನಾರಾಯಣ ಮೂರ್ತಿ ಅವರು ಸಹ ಶಿಕ್ಷಣ ಪಡೆದಿದ್ದರು. ಹೀಗಾಗಿ ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿದ್ದು, ಈ ಕುರಿತು ಚರ್ಚಿಸಿದರು. ಜೊತೆಗೆ ಬೆಂಗಳೂರಿನ‌ ಅಭಿವೃದ್ಧಿ ಬಗ್ಗೆಯೂ ಕೆಲ ಸಲಹೆ ಸೂಚನೆ ನೀಡಿದರು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ