ಆ್ಯಪ್ನಗರ

No Entry For Dogs In Cubbon Park: ಕಬ್ಬನ್‌ ಪಾರ್ಕ್‌ಗೆ ಸಾಕು ನಾಯಿಗಳ ಪ್ರವೇಶ ನಿಷೇಧಕ್ಕೆ ಚಿಂತನೆ

No Entry For Dogs In Cubbon Park: ಹುಲ್ಲು ಹಾಸು ಪ್ರದೇಶದಲ್ಲಿ ನಾಯಿಗಳು ಮಲ ವಿಸರ್ಜಿಸುತ್ತವೆ. ಅದರಲ್ಲಿ ಹುಳಗಳಿರುತ್ತವೆ. ಆ ಹುಳುಗಳಿಂದ ಸೋಂಕು ಹರಡುತ್ತದೆ. ಇದರಿಂದಾಗಿ ಹುಲ್ಲು ಹಾಸಿನ ಮೇಲೆ ನಡೆಯಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಶೇ. 70ಕ್ಕೂ ಹೆಚ್ಚು ವಾಯು ವಿಹಾರಿಗಳು ನಾಯಿಗಳ ನಿಷೇಧ ಬೆಂಬಲಿಸಿದ್ದಾರೆ ಮತ್ತು ಸಮಿತಿಗೆ ದೂರುಗಳನ್ನು ಸಲ್ಲಿಸಿದ್ದಾರೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಸಾಕು ನಾಯಿಗಳ ಮಾಲೀಕರಿಗೆ ದಂಡ ಹಾಕುವ ನಿಯಮ ಜಾರಿಯಲ್ಲಿ ಇಲ್ಲ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

Edited byದಿಲೀಪ್ ಡಿ. ಆರ್. | Vijaya Karnataka 27 Jun 2022, 1:18 pm

ಹೈಲೈಟ್ಸ್‌:

  • ಜುಲೈ 1 ರಿಂದ ಪ್ರವೇಶ ದ್ವಾರಗಳಲ್ಲಿ ಬ್ಯಾನರ್‌ ಅಳವಡಿಕೆ
  • ವಾಯು ವಿಹಾರಿಗಳಿಂದ ದೂರು ಕೇಳಿ ಬಂದ ಹಿನ್ನೆಲೆ ಕ್ರಮ
  • ತೋಟಗಾರಿಕೆ ಇಲಾಖೆಯಿಂದ ಚಿಂತನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Cubbon Park
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಸಾಕು ನಾಯಿಗಳ ಪ್ರವೇಶವನ್ನು ಜುಲೈ 1 ರಿಂದ ಸಂಪೂರ್ಣ ನಿಷೇಧಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.
ಉಗ್ರ ಸ್ವರೂಪದ ನಾಯಿಗಳನ್ನು ಕರೆ ತರುವಂತಿಲ್ಲ. ಇತರೆ ಸಾಕು ನಾಯಿಗಳನ್ನು ತಂದರೂ ಅದಕ್ಕೆ ಆರು ಮೀಟರ್‌ಗೂ ಹೆಚ್ಚು ಉದ್ದದ ಬೆಲ್ಟ್‌ (ಚೈನ್‌) ಹಾಕಿರಬೇಕು. ನಾಯಿಯ ಜತೆಗೆ ಸ್ಕೂಪ್‌ (ಶ್ವಾನದ ಮಲವನ್ನು ಸ್ಕೂಪ್‌ನಲ್ಲಿ ವಿಲೇವಾರಿ ಮಾಡಬೇಕು) ಕೂಡ ತರಬೇಕು ಎಂಬುದೂ ಸೇರಿದಂತೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಈ ಹಿಂದೆ ಆದೇಶ ಹೊರಡಿಸಿ ಸಾಕು ನಾಯಿಗಳನ್ನು ಉದ್ಯಾನಕ್ಕೆ ಬಿಡಲಾಗುತ್ತಿತ್ತು.

ಹೈಕೋರ್ಟ್ ಆದೇಶ ಪಾಲಿಸದ ಶ್ವಾನ ಮಾಲೀಕರು: ಕಬ್ಬನ್‌ ಪಾರ್ಕ್‌ನಲ್ಲಿ 'ಉಗ್ರ' ನಾಯಿಗಳ ದರ್ಬಾರ್..!
ಆದರೆ, ಶ್ವಾನ ಮಾಲೀಕರು ಉದ್ಯಾನದೊಳಗೆ ಪ್ರವೇಶಿಸಿದ ಕೂಡಲೇ ಶ್ವಾನದ ಬೆಲ್ಟ್‌ ತೆಗೆಯುವುದು, ಮಲ ವಿಸರ್ಜಿಸಿದರೂ ತೆರವುಗೊಳಿಸದಿರುವುದೂ ಸೇರಿದಂತೆ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ನಿತ್ಯ ಈ ಬಗ್ಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಶ್ವಾನಗಳ ಪ್ರವೇಶ ನಿಷೇಧಿಸಲು ಚರ್ಚಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌. ಟಿ. ಬಾಲಕೃಷ್ಣ ತಿಳಿಸಿದರು.


ಜುಲೈ 1 ರಿಂದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ, ಸರಕಾರದ ಗಮನಕ್ಕೆ ತಂದು ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ ಸಾಕು ನಾಯಿಗಳನ್ನು ಸಾಕುವವರು ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡದಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡುವ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಬಗ್ಗೆ 'ನೋ ಪೆಟ್‌ ಬ್ಯಾನ್‌ ಇನ್‌ ಕಬ್ಬನ್‌ ಪಾರ್ಕ್ ಫಾರ್‌ ಡಾಗ್ಸ್‌ ಸೇಕ್‌' ಎಂಬ ಮನವಿಗೆ ಈಗಾಗಲೇ 1,500 ಕ್ಕೂ ಹೆಚ್ಚು ಸಾಕು ಪ್ರಾಣಿ ಪ್ರಿಯರ ಬೆಂಬಲ ಸಿಕ್ಕಿದೆ.

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶ ನಿರ್ಬಂಧ
ವಾಯು ವಿಹಾರಿಗಳಿಂದ ನಿಷೇಧಕ್ಕೆ ಬೆಂಬಲ

'ಹುಲ್ಲು ಹಾಸು ಪ್ರದೇಶದಲ್ಲಿ ನಾಯಿಗಳು ಮಲ ವಿಸರ್ಜಿಸುತ್ತವೆ. ಅದರಲ್ಲಿ ಹುಳಗಳಿರುತ್ತವೆ. ಆ ಹುಳುಗಳಿಂದ ಸೋಂಕು ಹರಡುತ್ತದೆ. ಇದರಿಂದಾಗಿ ಹುಲ್ಲು ಹಾಸಿನ ಮೇಲೆ ನಡೆಯಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಪ್ರವಾಸಿಗರು ದೂರುಗಳಲ್ಲಿ ತಿಳಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಹೇಳಿದರು.

'ಶೇ. 70ಕ್ಕೂ ಹೆಚ್ಚು ವಾಯು ವಿಹಾರಿಗಳು ನಾಯಿಗಳ ನಿಷೇಧ ಬೆಂಬಲಿಸಿದ್ದಾರೆ ಮತ್ತು ಸಮಿತಿಗೆ ದೂರುಗಳನ್ನು ಸಲ್ಲಿಸಿದ್ದಾರೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಸಾಕು ನಾಯಿಗಳ ಮಾಲೀಕರಿಗೆ ದಂಡ ಹಾಕುವ ನಿಯಮ ನಮ್ಮಲ್ಲಿ ಜಾರಿ ಇಲ್ಲ. ಅವರನ್ನು ಶಿಕ್ಷಿಸುವ ಅಧಿಕಾರ ಇಲ್ಲ' ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ ವಿವರಿಸಿದ್ದಾರೆ.

ಸುವರ್ಣ ಕರ್ನಾಟಕ ಸಮಿತಿ, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್‌ ಕಮಿಷನರ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ