ಆ್ಯಪ್ನಗರ

ಹೊಸ ಆಟೋರಿಕ್ಷಾ ಪರ್ಮಿಟ್‌ ವಿತರಣೆಗೆ ಹೈಕೋರ್ಟ್‌ ಬ್ರೇಕ್‌

ಬೆಂಗಳೂರು ಮಹಾನಗರದಲ್ಲಿ ಹೊಸದಾಗಿ ಆಟೋರಿಕ್ಷಾ ಪರ್ಮಿಟ್‌ ವಿತರಣೆಗೆ ಹೈಕೋರ್ಟ್‌ ತಾತ್ಕಾಲಿಕ ಬ್ರೇಕ್‌ ಹಾಕಿದೆ.

Vijaya Karnataka 25 Apr 2019, 5:00 am
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹೊಸದಾಗಿ ಆಟೋರಿಕ್ಷಾ ಪರ್ಮಿಟ್‌ ವಿತರಣೆಗೆ ಹೈಕೋರ್ಟ್‌ ತಾತ್ಕಾಲಿಕ ಬ್ರೇಕ್‌ ಹಾಕಿದೆ.
Vijaya Karnataka Web highcourt


ಸಾರಿಗೆ ಇಲಾಖೆ ಆಟೋ ಪರ್ಮಿಟ್‌ಗಳನ್ನು 1.25ಲಕ್ಷದಿಂದ 1.55ಲಕ್ಷಕ್ಕೆ ಹೆಚ್ಚಳ ಮಾಡುವ ಕುರಿತು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಧ್ಯಾಂತರ ಆದೇಶ ಮಾಡಲಾಗಿದೆ.

ನಗರದ ವಾಸಿ ನಿತಿನ್‌ ಆರ್‌.ಪುತ್ತಿಗೆ ಸಲ್ಲಿಸಿದ್ದ ಪಿಐಎಲ್‌ ಆಲಿಸಿದ ಹಂಗಾಮಿ ಸಿಜೆ ಎಲ್‌. ನಾರಾಯಣಸ್ವಾಮಿ ಮತ್ತು ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ''ಯಾವುದೇ ಹೊಸ ಪರ್ಮಿಟ್‌ ವಿತರಿಸಿದರೆ ಅವು ಅರ್ಜಿಯ ಅಂತಿಮ ಫಲಿತಾಂಶಕ್ಕೆ ಒಳಪಡುತ್ತದೆ ''ಎಂದು ಆದೇಶ ನೀಡಿದೆ. ಅಲ್ಲದೆ, ಸಾರಿಗೆ ಇಲಾಖೆ ಮತ್ತಿತರ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್‌ ನೀಡಿ ಬೇಸಿಗೆ ರಜೆ ನಂತರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪುತ್ತಿಗೆ ರಮೇಶ್‌ , ''ಬೆಂಗಳೂರು ನಗರದಲ್ಲಿ ಸಾಕಷ್ಟು ಆಟೋರಿಕ್ಷಾಗಳು ಅಧಿಕೃತ ಪರ್ಮಿಟ್‌ ಇಲ್ಲದೆ ಓಡುತ್ತಿವೆ. ಈಗಾಗಲೇ ನಗರ ವಾಹನದಟ್ಟಣೆಯಿಂದ ತತ್ತರಿಸುತ್ತಿದೆ. ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಮಿತಿ ಮೀರಿದೆ. ಆದರೂ ಸಹ ಹೊಸದಾಗಿ 30ಸಾವಿರ ಆಟೋಗಳಿಗೆ ಪರ್ಮಿಟ್‌ ನೀಡಲಾಗುತ್ತಿದೆ. ಇದರಿಂದ ನಗರದಲ್ಲಿ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ,'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ