ಆ್ಯಪ್ನಗರ

ಪಾಕ್‌ ಕುರಿತ ರಮ್ಯಾ ಹೇಳಿಕೆಯಲ್ಲಿ ತಪ್ಪೇನಿಲ್ಲ: ಪ್ರೊ.ಬಿಕೆಸಿ

'ಪಾಕಿಸ್ತಾನದ ಕುರಿತಂತೆ ರಮ್ಯಾ ಹೇಳಿದ್ದರಲ್ಲಿ ತಪ್ಪೇನಿಲ್ಲ. ಎಲ್ಲವನ್ನೂ ಟೀಕೆ ಮಾಡಬಾರದು,' ಎಂದು ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 3 Sep 2016, 2:27 pm
ಬೆಂಗಳೂರು: 'ಪಾಕಿಸ್ತಾನದ ಕುರಿತಂತೆ ರಮ್ಯಾ ಹೇಳಿದ್ದರಲ್ಲಿ ತಪ್ಪೇನಿಲ್ಲ. ಎಲ್ಲವನ್ನೂ ಟೀಕೆ ಮಾಡಬಾರದು. ರವಿಶಂಕರ್ ಗುರೂಜಿ ಅವರನ್ನು ಉಗ್ರನ ತಂದೆಯೊಬ್ಬರು ಭೇಟಿಯಾಗಿ ಮಾತನಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಅದನ್ನು ವಿರೋಧಿಸುವುದಾದರೆ ರವಿಶಂಕರ್ ಗುರೂಜಿ ಏನು ಅನ್ನೋ ಪ್ರಶ್ನೆ ಕೂಡಾ ಬರುತ್ತದೆ,' ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ.
Vijaya Karnataka Web no wrong ramyas statement about pak
ಪಾಕ್‌ ಕುರಿತ ರಮ್ಯಾ ಹೇಳಿಕೆಯಲ್ಲಿ ತಪ್ಪೇನಿಲ್ಲ: ಪ್ರೊ.ಬಿಕೆಸಿ


ಬಿಕೆಸಿ ಮತ್ತು ಸ್ವಾತಂತ್ರ್ಯ ಹೊರಾಟಗಾರ ದೊರೆಸ್ವಾಮಿ ಗಾಂಧಿಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರೊ.ಬಿಕೆಸಿ, ಅಂದಿನ ಕಾರ್ಯಕ್ರಮದ ವಾಸ್ತವತೆಯೇ ಬೇರೆ ನಮ್ಮ ಸೈನ್ಯದಲ್ಲಿ ಶಿಸ್ತಿದೆ ಅಂತ ಒಬ್ಬರು ಹೇಳಿದಾಗ ಕೆಲವರು ನೋ ಅಂದರಂತೆ ಅಷ್ಟೇ. ಅದಕ್ಕೆ ಅಷ್ಟೆಲ್ಲ ರಾದ್ಧಾಂತ ನಡೆಸುವ ಅಗತ್ಯವಿರಲಿಲ್ಲ ಎಂದರು.

'ಇದರಲ್ಲಿ ರಾಜದ್ರೋಹ ಅನ್ನೋದು ಎಲ್ಲೂ ಆಗಿಲ್ಲ. ಕೇಂದ್ರ ಸರಕಾರ ಆರ್ಟಿಕಲ್ 124 A ಕಾಯಿದೆಯನ್ನು ತೆಗೆದುಹಾಕಬೇಕು. ರಾಜದ್ರೋಹ ಎನ್ನುವ ಪದವನ್ನು ತೆಗೆದುಹಾಕಬೇಕು. ಅದು ಬ್ರಿಟಿಷರ ಕಾಲದ ಕಾನೂನು. ಎಲ್ಲ ರಾಜ್ಯ ಸರಕಾರಗಳು ,ಪಕ್ಷಗಳು ರಾಜಕೀಯ ಮರೆತು ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ರಮ್ಯಾ ಅವರು ಸ್ವಾತಂತ್ರ್ಯ ಹೋರಾಟದ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ, ಅದನ್ನು ಕೈಬಿಡಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಸಲಹೆ ನೀಡಿದರು. ಎಬಿವಿಪಿಯವರ ಹೋರಾಟದ ಪದ್ಧತಿ ಸರಿಯಲ್ಲ, ಸಮಸ್ಯೆ ಉಂಟು ಮಾಡುವ ಕೆಲಸ ಮಾಡಲಾಗುತ್ತಿದೆ. ನಾವು ಮಾಡಿದ್ದೆ ಸರಿ ಎಂಬ ಮನೋಭಾವ ಎಬಿವಿಪಿಯವರಲ್ಲಿದೆ. ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಅವರಿಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಎಲ್ಲರೂ ಮಾಡಿದ್ದಾರೆ. ಕೊನೆಗೆ ಸ್ವಾತಂತ್ರ್ಯ ಕೊಟ್ಟಿದ್ದು ಕಾಂಗ್ರೆಸ್ ಕೈಗೆ, ಸಾವರ್ಕರ್ ಮೊದಲು ಹೋರಾಟ ಮಾಡಿದ್ದರು. ಆದರೆ ಬಿಡುಗಡೆ ಕೋರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂದು ದೊರೆಸ್ವಾಮಿ ಹೇಳಿದರು.

'ಸಾವರ್ಕರ್ ಜೈಲಿಗೆ ಸೇರಿದಾಗ ಬ್ರಿಟಿಷರಿಗೆ ಪತ್ರ ಬರೆದು ತಾನು ನಿಮ್ಮ ಜೊತೆಗೆ ಇರುತ್ತೇನೆ ಅಂತ ಪತ್ರ ಬರೆದಿದ್ದರು. ಅವರಿಗೆ ಹುಚ್ಚು ಹಿಡಿದಿತ್ತು ಅನಿಸುತ್ತೆ. ಅದೇ ಕಾರಣಕ್ಕೆ ಬ್ರಿಟಿಷರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದರು, ಅವರ ಶಿಷ್ಯ ನಾಥುರಾಮ ಗೋಡ್ಸೆ ಅದೇ ಕಾರಣಕ್ಕೆ ಕೊಲೆಗಡುಕರಾದರು,' ಎಂದು ಆದ,'ಎಂದು ದೊರೆಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ