ಆ್ಯಪ್ನಗರ

ತಣ್ಣಗಾಗಿದೆ ಬೆಂಗಳೂರು: ಸಹಜ ಸ್ಥಿತಿಯತ್ತ ಜನಜೀವನ

ಮುಂಜಾಗೃತ ಕ್ರಮವಾಗಿ ರಾಜ್ಯ ಸರಕಾರ ಹಾಗೂ ಪೊಲೀಸರು ತೆಗೆದುಕೊಂಡು ಬಿಗು ಕ್ರಮಗಳಿಂದ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಶಾಂತವಾಗಿದೆ.

ವಿಕ ಸುದ್ದಿಲೋಕ 13 Sep 2016, 11:08 am
ಬೆಂಗಳೂರು: ಮುಂಜಾಗೃತ ಕ್ರಮವಾಗಿ ರಾಜ್ಯ ಸರಕಾರ ಹಾಗೂ ಪೊಲೀಸರು ತೆಗೆದುಕೊಂಡು ಬಿಗು ಕ್ರಮಗಳಿಂದ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಶಾಂತವಾಗಿದೆ.
Vijaya Karnataka Web normal life crippled security forces keep strict vigil in bengaluru
ತಣ್ಣಗಾಗಿದೆ ಬೆಂಗಳೂರು: ಸಹಜ ಸ್ಥಿತಿಯತ್ತ ಜನಜೀವನ


ಅಲ್ಲಲ್ಲಿ ಟೈರ್ ಸುಟ್ಟ ಕರಕಲು ಕಾಣಿಸುತ್ತಿರುವುದು ಬಿಟ್ಟರೆ, ಮತ್ತೆಲ್ಲಿಯೂ ಹಿಂಸಾಚಾರ ನಡೆದ ವರದಿಗಳಾಗಿಲ್ಲ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಕೇಂದ್ರದಿಂದ ಹೆಚ್ಚುವರಿ ಸಹಾಯಕ್ಕಾಗಿ ಆಗಮಿಸಿರುವ ರಕ್ಷಣಾ ತುಕಡಿಗಳು ಹದ್ದಿನ ಕಣ್ಣಿಟ್ಟು, ಕಾರ್ಯನಿರ್ವಹಿಸುತ್ತಿವೆ. ಕೆಲವೆಡೆ ಬಿಎಂಟಿಸಿ ಬಸ್‌ಗಳು ಸಂಚಾರ ಆರಂಭಿಸಿದ್ದು, ಜನ ಸಂಚಾರ ಕಡಿಮೆ ಇದ್ದರೂ, ಓಡಾಡುತ್ತಿದ್ದಾರೆ.

ಮೈಸೂರು ರಸ್ತೆ ಸುತ್ತಮುತ್ತ ಮಾತ್ರ ತುಸು ಬಿಗುವಿನ ವಾತಾವರಣವಿದ್ದು, ಅಲ್ಲಿ ಜನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.

ಮುಖ್ಯಮಂತ್ರಿ ಅದ್ಯಕ್ಷತೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರ ಸಭೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ