ಆ್ಯಪ್ನಗರ

ಭೈರತಿ ಬರ್ತ್‌ ಡೇ ಪಾರ್ಟಿಯಲ್ಲಿ ನೂತನ ಸಚಿವರಿಗೆ ಜೈಕಾರ..! ನಿಯಮ ಮೀರಿ ಕೇಕ್‌ ಕತ್ತರಿಸಿದ 'ಖಾಕಿ'ಗೆ ನೊಟೀಸ್..!

ಹುಟ್ಟುಹಬ್ಬ ಆಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಕರ್ನಾಟಕ ಪೊಲೀಸ್‌ ಘನತೆಗೆ ಧಕ್ಕೆ ಆಗಿದೆ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿ ಬಂದ ಬೆನ್ನಲ್ಲೇ, ಇಬ್ಬರಿಗೂ ವಿವರಣೆ ಕೇಳಿ ನೋಟಿಸ್‌ ನೀಡಲಾಗಿದೆ.

Vijaya Karnataka 6 Feb 2020, 1:58 pm
ಬೆಂಗಳೂರು: ಕೆ.ಆರ್‌.ಪುರಂ ಶಾಸಕ, ನೂತನ ಸಚಿವ ಭೈರತಿ ಬಸವರಾಜ್‌ ಅವರ ಹುಟ್ಟುಹಬ್ಬ ಆಚರಣೆ ವೇಳೆ ಪೊಲೀಸ್ ಇಲಾಖೆ ನಿಯಮ ಮೀರಿ ಕೇಕ್‌ ಕತ್ತರಿಸಿ, ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಿದ್ದಲ್ಲದೆ ಸಾರ್ವಜನಿಕವಾಗಿ ಜೈಕಾರ ಹಾಕಿದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ನೋಟಿಸ್‌ ನೀಡಲಾಗಿದೆ. ಭೈರತಿ ಬಸವರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲ ದಿನಗಳ ಹಿಂದಷ್ಟೇ ಈ ಘಟನೆ ನಡೆದಿದೆ. ಭಾವೀ ಸಚಿವರಿಗೆ ಜೈ ಎಂದ ಇನ್ಸ್‌ಪೆಕ್ಟರ್‌ಗಳಿಗೆ ನೊಟೀಸ್ ಬಿಸಿ ತಟ್ಟಿದೆ.
Vijaya Karnataka Web mla birthday
ಭೈರತಿ ಬರ್ತ್‌ ಡೇ ಪಾರ್ಟಿಯಲ್ಲಿ ನೂತನ ಸಚಿವರಿಗೆ ಜೈಕಾರ..! ನಿಯಮ ಮೀರಿ ಕೇಕ್‌ ಕತ್ತರಿಸಿದ 'ಖಾಕಿ'ಗೆ ನೊಟೀಸ್..!


ಇನ್ಸ್‌ಪೆಕ್ಟರ್‌ಗಳಾದ ಸಂಜೀವ್‌ ರಾಯಪ್ಪ ಹಾಗೂ ಅಂಬರೀಶ್‌ ಅಸಹ್ಯ ವರ್ತನೆ ಕಾರಣಕ್ಕೆ ಇಲಾಖೆಯ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಹುಟ್ಟುಹಬ್ಬ ಆಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಕರ್ನಾಟಕ ಪೊಲೀಸ್‌ ಘನತೆಗೆ ಧಕ್ಕೆ ಆಗಿದೆ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿ ಬಂದ ಬೆನ್ನಲ್ಲೇ, ಇಬ್ಬರಿಗೂ ವಿವರಣೆ ಕೇಳಿ ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ಉತ್ತರಿಸಿದ ಬಳಿಕ ಇಲಾಖಾ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ತಾಯಿಯನ್ನು ಕೊಂದು ಬಾಯ್‌ ಫ್ರೆಂಡ್ ಜೊತೆ ಪರಾರಿಯಾಗಿದ್ದವಳು ಅಂಡಮಾನ್‌ನಲ್ಲಿ ಅರೆಸ್ಟ್..!

ನಡೆದದ್ದೇನು?

ಶಾಸಕ, ನೂತನ ಸಚಿವ ಭೈರತಿ ಬಸವರಾಜ್‌ ಅವರ ಹುಟ್ಟುಹಬ್ಬ ಆಚರಣೆ ದಿನ, ಇಬ್ಬರೂ ಇನ್ಸ್‌ಪೆಕ್ಟರ್‌ಗಳು ಶಾಸಕರ ಎಡ ಬಲಕ್ಕೆ ನಿಂತಿದ್ದರು. ಭೈರತಿ ಬಸವರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲ ದಿನಗಳ ಹಿಂದಷ್ಟೇ ಈ ಕಾರ್ಯಕ್ರಮ ನಡೆದಿತ್ತು. ಇಬ್ಬರೂ ಇನ್ಸ್‌ಪೆಕ್ಟರ್‌ಗಳು ಶಾಸಕರ ಕೈಗೆ ಬೆಳ್ಳಿ ಗದೆ ನೀಡಿದ್ದರು. ಬಳಿಕ ತಾವೇ ಶಾಸಕರಿಗೆ ಜೈಕಾರ ಹಾಕಿದ್ದಲ್ಲದೆ, ಶಾಸಕರ ಕೈಯಿಂದ ಕೇಕ್‌ ಕತ್ತರಿಸಿ ಅದನ್ನು ಶಾಸಕರ ಬಾಯಿಗೆ ಇಟ್ಟು ಫೋಟೋಗೆ ಫೋಸ್‌ ನೀಡಿದ್ದರು. ಈ ವಿಡಿಯೋ ಬುಧವಾರ ವೈರಲ್‌ ಆಗಿತ್ತು. ಇನ್ನೂ ಕರ್ತವ್ಯದಲ್ಲಿರುವ ಇಬ್ಬರು ಅಧಿಕಾರಿಗಳು ನಿಯಮಬಾಹಿರವಾಗಿ ಈ ರೀತಿ ವರ್ತಿಸಿದ್ದು ಇಲಾಖೆಯ ಘನತೆಗೆ ಧಕ್ಕೆ ಅಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಡಿಸಿಪಿ ಅನುಚೇತ್‌ ಇಬ್ಬರೂ ಇನ್ಸ್‌ಪೆಕ್ಟರ್‌ಗಳಿಗೆ ನೋಟಿಸ್‌ ನೀಡಿದ್ದಾರೆ.

ಶಾಕಿಂಗ್..! 3 ವರ್ಷದ ಮಗುವಿಗೆ ಮದ್ಯ ಕುಡಿಸಿದ ತಂದೆ..! ವಿರೋಧಿಸಿದ ಹೆಂಡ್ತಿ ಮೂಗಿಗೆ ಸ್ಕ್ರೂ ಡೈವರ್‌ನಿಂದ ಚುಚ್ಚಿದ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ