ಆ್ಯಪ್ನಗರ

ಬೆಂಗಳೂರು: ಟೂರ್‌ ಪ್ಯಾಕೇಜ್‌ ಹೋಯ್ತು, ಕೊರೊನಾ ಪ್ಯಾಕೇಜ್‌ ಬಂತು!

ಅತಿಥಿಗಳ ಕೊಠಡಿಗಳು ಸೋಂಕಿತರ ಚಿಕಿತ್ಸಾ ಕೇಂದ್ರಗಳಾಗಿ ಮಾರ್ಪಾಡು * 5 ದಿನದ ಪ್ಯಾಕೇಜ್‌ಗೆ ಕೆಲವೆಡೆ 45,500 ರೂ ನಿಗದಿ * ಹೆಚ್ಚುವರಿ ಸೇವೆಗೆ ಹೆಚ್ಚುವರಿ ಹಣ ನಿಗದಿ * ಆರ್ಥಿಕ ನಷ್ಟ ಭರಿಸಲು ಹೋಟೆಲ್‌ಗಳ ಹೊಸ ಪ್ರಯತ್ನ

Vijaya Karnataka Web 15 Jul 2020, 11:50 pm
ಬೆಂಗಳೂರು: ಪ್ರವಾಸದ ಪ್ಯಾಕೇಜ್‌ ರೀತಿಯಲ್ಲಿನಗರದ ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳ ಸಹಯೋಗದಲ್ಲಿ'ಕೊರೊನಾ ಆರೈಕೆ ಪ್ಯಾಕೇಜ್‌'ಗಳನ್ನು ಆರಂಭಿಸಿವೆ.
Vijaya Karnataka Web ಕೊರೊನಾ
ಕೊರೊನಾ


ಕೇವಲ ಐದು ತಿಂಗಳ ಹಿಂದೆ ಪ್ರವಾಸಿ ಪ್ಯಾಕೇಜ್‌ ನೀಡುತ್ತಿದ್ದ ಹೋಟೆಲ್‌ಗಳಲ್ಲಿಈಗ ಕೊರೊನಾ ಪ್ಯಾಕೇಜ್‌ ಅಡಿಯಲ್ಲಿಸೋಂಕಿತರಿಗೆ ಆರೈಕೆ ಆರಂಭಿಸಲಾಗಿದೆ. ಅತಿಥಿಗಳಿಗೆ ಪ್ರೀತಿಯಿಂದ ಸೇವೆ ಒದಗಿಸುತ್ತಿದ್ದ ಹೋಟೆಲ್‌ಗಳಲ್ಲಿ, ಪ್ರೀತಿ ಜೊತೆಗೆ ಭಯದಿಂದ ಸೇವೆ ಒದಗಿಸಲಾಗುತ್ತಿದೆ. ಅತಿಥಿಗಳ ಕೊಠಡಿಗಳು ಸೋಂಕಿತರ ಚಿಕಿತ್ಸಾ ಕೇಂದ್ರಗಳಾಗಿ ಬದಲಾಗಿವೆ.

ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಯು ಹೋಟೆಲ್‌ ಸಹಯೋಗದಲ್ಲಿಕೋವಿಡ್‌ ಕೇರ್‌ ಕೇಂದ್ರ ಆರಂಭಿಸಿದೆ. 45,500 ರೂ.ಗೆ 5 ದಿನದ ಪ್ಯಾಕೇಜ್‌ ನಿಗದಿಯಾಗಿದ್ದು, ರೂಮ್‌ ಬಾಡಿಗೆ, 3 ಹೊತ್ತು ಊಟ, ದಿನಕ್ಕೊಮ್ಮೆ ವೈದ್ಯರು ಮತ್ತು ನರ್ಸ್‌ ಭೇಟಿ ಒಳಗೊಂಡಿದೆ. 7 ದಿನದ ಪ್ಯಾಕೇಜ್‌ಗೆ 63,700 ರೂ. ಹಾಗೂ 10 ದಿನಗಳ ಪ್ಯಾಕೇಜ್‌ಗೆ 91 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ.

ಇನ್ನು ಪೀಪಲ್ಸ್‌ ಟ್ರೀ ಆಸ್ಪತ್ರೆಯು 10 ದಿನಗಳ ಪ್ಯಾಕೇಜ್‌ ಆರಂಭಿಸಿದ್ದು, 80 ಸಾವಿರ ರೂ. ಶುಲ್ಕ ನಿಗದಿಪಡಿಸಿದೆ. ಪ್ಯಾಕೇಜ್‌ನಲ್ಲಿಫಾರ್ಮಸಿ, ಹೆಚ್ಚುವರಿ ಆಹಾರ, ಲ್ಯಾಬ್‌ ಚೆಕ್‌, ವಿಶೇಷ ಕನ್ಸಲ್ಟೇಷನ್‌, ಎಸಿ ರೂಮ್‌, ಪ್ರತಿದಿನ ಹೌಸ್‌ ಕೀಪಿಂಗ್‌ ಸೇರಿದಂತೆ ಇನ್ನಿತರ ಶುಲ್ಕಗಳು ಪ್ರತ್ಯೇಕ. ಅಟೆಂಡೆಂಟ್‌ಗಳಿಗೆ ಅವಕಾಶ ಇಲ್ಲ. ದಾಖಲಾಗುವ ವೇಳೆಯೇ ಶುಲ್ಕ ಪಾವತಿಸಬೇಕು. ಹಣ ಮರುಪಾವತಿಸುವುದಿಲ್ಲ. ಸೋಂಕಿತರ ಸ್ಥಿತಿಯ ಆಧಾರದ ಮೇಲೆ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಆ್ಯಂಬುಲೆನ್ಸ್‌ ವ್ಯವಸ್ಥೆ ಯನ್ನೂ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಲಕ್ಷಣಗಳು ಇಲ್ಲದವರ ಸಂಖ್ಯೆ ಹೆಚ್ಚುವುದರೊಂದಿಗೆ ಸೋಂಕಿತರ ಸಂಖ್ಯೆ ಹೆಚ್ಚಳ ದಿಗಿಲು ಮೂಡಿಸುತ್ತಿದೆ. ಸಾಮೂಹಿಕ ಕೋವಿಡ್‌ ಆರೈಕೆ ಕೇಂದ್ರದಲ್ಲಿರಲು ಸಾಧ್ಯವಿಲ್ಲ. ಮನೆಯಲ್ಲಿಹಿರಿಯ ನಾಗರಿಕರು, ಅನಾರೋಗ್ಯದಿಂದ ಇರುವವರು, ಮಕ್ಕಳು, ಗರ್ಭಿಣಿಯರು ಅಥವಾ ಹೆಚ್ಚು ಜನರಿದ್ದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗದು. ಹೀಗಾಗಿ, ಐಸೋಲೇಷನ್‌ ವಾರ್ಡ್‌ ಬೇಕೆನ್ನುವವರನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗಳು ಈ ವ್ಯವಸ್ಥೆ ಕಲ್ಪಿಸಿವೆ.

ಸಾಕಷ್ಟು ಹೋಟೆಲ್‌ಗಳು ಗ್ರಾಹಕರಿಲ್ಲದೇ ಬಂದ್‌ ಆಗುವ ಹಂತಕ್ಕೆ ತಲುಪಿವೆ. ಹೀಗಾಗಿ, ಆಸ್ಪತ್ರೆಗಳ ಜತೆ ಕೈಜೋಡಿಸಿ ಆಸ್ಪತ್ರೆ ಕೊಠಡಿ ಬದಲು ಕೋವಿಡ್‌ ಆರೈಕೆ ಕೇಂದ್ರಗಳಾಗಿ ಬದಲಾಗಿವೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ