ಆ್ಯಪ್ನಗರ

ಬಿಷಪ್‌ ಕಾಟನ್‌ ಕಾಲೇಜಿನಿಂದ ಕೋಟ್ಯಂತರ ರೂ. ತೆರಿಗೆ ವಂಚನೆ: ಎನ್‌.ಆರ್‌.ರಮೇಶ್‌ ದೂರು

2008-09 ರಿಂದ 2016-17ರವರೆಗೆ 12 ವರ್ಷಗಳಿಂದ ಪ್ರತಿಷ್ಠಿತ ಬಿಷಪ್‌ ಕಾಟನ್‌ ಪದವಿ ಮತ್ತು ಕಾನೂನು ಕಾಲೇಜು ಆಸ್ತಿ ತೆರಿಗೆ ಪಾವತಿಸದೆ ಬಿಬಿಎಂಪಿಗೆ ವಂಚಿಸಿದೆ. 12 ವರ್ಷಗಳಿಂದ ತೆರಿಗೆ ವಸೂಲು ಮಾಡದೆ ಮತ್ತು ಡಿಮ್ಯಾಂಡ್‌ ನೋಟಿಸ್‌ ಕೂಡ ನೀಡದೆ ಕರ್ತವ್ಯ ಲೋಪವೆಸಗಿ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Vijaya Karnataka Web 30 Oct 2020, 6:21 am
ಬೆಂಗಳೂರು: ನಗರದ ಪ್ರತಿಷ್ಠಿತ ಬಿಷಪ್‌ ಕಾಟನ್‌ ಪದವಿ ಮತ್ತು ಕಾನೂನು ಕಾಲೇಜು 2008-09 ರಿಂದ 2016-17ರವರೆಗೆ 12 ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಬಿಬಿಎಂಪಿಗೆ ವಂಚಿಸಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ದೂರು ನೀಡಿದ್ದಾರೆ.
Vijaya Karnataka Web NR Ramesh


12 ವರ್ಷಗಳಿಂದ ತೆರಿಗೆ ವಸೂಲು ಮಾಡದೆ ಮತ್ತು ಡಿಮ್ಯಾಂಡ್‌ ನೋಟಿಸ್‌ ಕೂಡ ನೀಡದೆ ಕರ್ತವ್ಯ ಲೋಪವೆಸಗಿ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಕೆಂಪೇಗೌಡ ನಗರ ಉಪ ವಿಭಾಗ, ಚಿಕ್ಕಪೇಟೆ ವಿಭಾಗದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತನ ಕೊಲೆ ಕೇಸ್; ಮಾಜಿ ಕಾರ್ಪೋರೇಟರ್ ಸೇರಿ 12 ಮಂದಿಗೆ ಶಿಕ್ಷೆ

ಬಿಬಿಎಂಪಿ ಕೇಂದ್ರ ಕಚೇರಿಗೆ ಹೊಂದಿಕೊಂಡಂತಿರುವ ಸಿಎಸ್‌ಐನ 4 ಎಕರೆ ವಿಸ್ತೀರ್ಣದಲ್ಲಿರುವ ಬಿಷಪ್‌ ಕಾಟನ್‌ ಪದವಿ ಮತ್ತು ಕಾನೂನು ಕಾಲೇಜು 2008-09 ರಿಂದ 2016-17ರವರೆಗೆ ಶೇ 25ರಷ್ಟು ಸೇವಾ ತೆರಿಗೆಯನ್ನಷ್ಟೇ ಪಾವತಿಸಿದೆ. 2017-18ರಿಂದೀಚೆಗೆ ಸೇವಾ ತೆರಿಗೆಯನ್ನೂ ಕಟ್ಟಿಲ್ಲ. ಈಗಾಗಲೇ ಖಾಸಗಿ ಶಾಲಾ-ಕಾಲೇಜು ಕಟ್ಟಡಗಳನ್ನು ವಾಣಿಜ್ಯ ಕಟ್ಟಡಗಳೆಂದು ಪರಿಗಣಿಸಲಾಗಿದೆ. ಈ ಕಾಲೇಜು 'ಎ' ವಲಯದಲ್ಲಿದ್ದು, 96,070 ಚ.ಅಡಿ ವಿಸ್ತೀರ್ಣದ ನಿರ್ಮಿತ ಕಟ್ಟಡದಿಂದ ವಾರ್ಷಿಕ 31,29,060 ರೂ. ತೆರಿಗೆ ಪಾವತಿಯಾಗಬೇಕಿದೆ. 2017-18 ರಿಂದ 2020-21ರವರೆಗೆ 1,25,16,240 ರೂ. ಆಸ್ತಿ ತೆರಿಗೆಯು ಪಾಲಿಕೆಗೆ ಬರಬೇಕಿದೆ ಎಂದು ಎನ್‌.ಆರ್‌.ರಮೇಶ್‌ ತಿಳಿಸಿದರು.

ನಾನು ಮತ ಕೇಳಲು ಕಣ್ಣೀರು ಹಾಕಿಲ್ಲ; ಕಾಂಗ್ರೆಸ್‌ ನಾಯಕರಿಗೆ ಮುನಿರತ್ನ ತಿರುಗೇಟು

ಬಿಷಪ್‌ ಕಾಟನ್‌ ಕಾಲೇಜು ಮಂಡಳಿಯು ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ವಾರ್ಷಿಕ ಶುಲ್ಕ ಪಡೆಯುತ್ತಿದ್ದರೂ ಪಾಲಿಕೆಯಿಂದ ಆಸ್ತಿ ತೆರಿಗೆ ರಿಯಾಯಿತಿ ಕೇಳಿದ್ದಾರೆ. ಸರಕಾರಿ ಅನುದಾನಿತ ಶಾಲಾ-ಕಾಲೇಜುಗಳಿಗೆ ತೆರಿಗೆ ವಿನಾಯಿತಿ ನೀಡದ ಪಾಲಿಕೆಯು ವಾಣಿಜ್ಯ ಉದ್ದೇಶದ ಕಾಲೇಜುಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವುದು ಸರಿಯಲ್ಲ. ಈ ಕಾಲೇಜಿಗೆ ವಿನಾಯಿತಿ ನೀಡಿದರೆ, ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳೂ ಮನವಿ ಸಲ್ಲಿಸಲಿವೆ. ಆದ ಕಾರಣ, ಬಿಷಪ್‌ ಕಾಟನ್‌ ಕಾಲೇಜಿನಿಂದ ಬರಬೇಕಿರುವ ತೆರಿಗೆಯನ್ನು ಕೂಡಲೇ ವಸೂಲು ಮಾಡಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ