ಆ್ಯಪ್ನಗರ

ಬೆಂಗಳೂರಲ್ಲಿ ಕೋವಿಡ್‌-19 ಹಾಟ್‌ಸ್ಪಾಟ್‌ಗಳ ಸಂಖ್ಯೆ 42ಕ್ಕೆ ಏರಿಕೆ, ಇಲ್ಲಿದೆ ಪಟ್ಟಿ

ಬೆಂಗಳೂರಲ್ಲಿ ಕೋವಿಡ್‌-19 ಹಾಟ್‌ಸ್ಪಾಟ್‌ಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಪಾಲಿಕೆಯ ಕೋವಿಡ್‌-19 ವಾರ್‌ ರೂಂ ಪ್ರಕಟಿಸುವ ಬುಲೆಟಿನ್‌ ಪ್ರಕಾರ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ ಪದೇ ಪದೇ ಬದಲಾಗುತ್ತಲೇ ಇರುತ್ತದೆ. ಏ. 14ರಂದು ಈ ವಾರ್ಡ್‌ಗಳ ಸಂಖ್ಯೆ 38 ಇತ್ತು.

Vijaya Karnataka Web 29 Apr 2020, 8:51 am
ಬೆಂಗಳೂರು: ಕೊರೊನಾ ವೈರಾಣು ಸೋಂಕಿತ ಪ್ರಕರಣಗಳನ್ನು ಆಧರಿಸಿ, ಬಿಬಿಎಂಪಿಯು ಗುರುತಿಸಿರುವ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಹಾಗೆಯೇ ಕಂಟೈನ್ಮೆಂಟ್‌ ವಲಯಗಳ (ನಿಯಂತ್ರಿತ ಪ್ರದೇಶ) ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
Vijaya Karnataka Web covid hotspot


ಪಾಲಿಕೆಯ ಕೋವಿಡ್‌-19 ವಾರ್‌ ರೂಂ ಪ್ರಕಟಿಸುವ ಬುಲೆಟಿನ್‌ ಪ್ರಕಾರ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ ಪದೇ ಪದೇ ಬದಲಾಗುತ್ತಲೇ ಇರುತ್ತದೆ. ಏ. 14ರಂದು ಈ ವಾರ್ಡ್‌ಗಳ ಸಂಖ್ಯೆ 38 ಇತ್ತು. ಆನಂತರ ಕ್ರಮೇಣ ಇಳಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ 42ಕ್ಕೆ ಏರಿರುವುದು ಆತಂಕ ಮೂಡಿಸಿದೆ.

ಹಂಪಿನಗರ, ಬ್ಯಾಟರಾಯನಪುರ, ಜಗಜೀವನ್‌ರಾಂನಗರ, ಛಲವಾದಿಪಾಳ್ಯ, ಶಿವನಗರ, ಪುಲಿಕೇಶಿನಗರ, ನಾಗಪುರ, ಭೈರಸಂದ್ರ ವಾರ್ಡ್‌ಗಳು ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಾಲಿಗೆ ಹೊಸದಾಗಿ ಸೇರಿವೆ. ಹಾಟ್‌ಸ್ಪಾಟ್‌ ವಾರ್ಡ್‌ಗಳನ್ನು ಸೀಲ್‌ಡೌನ್‌ ಮಾಡುವುದಿಲ್ಲ. ಬದಲಿಗೆ ಆ ವಾರ್ಡ್‌ನಲ್ಲಿಸೋಂಕಿತರು ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವೆಂದು ಗುರುತಿಸಿ, ಸೀಲ್‌ಡೌನ್‌ ಮಾಡಲಾಗುತ್ತಿದೆ.

ಕಂಟೇನ್ಮೆಂಟ್‌ ವಲಯ 26ಕ್ಕೆ ಏರಿಕೆ
ಕೊರೊನಾ ಸೋಂಕಿತರುವ ವಾಸವಿದ್ದ ಪ್ರದೇಶಗಳನ್ನು ಕಂಟೇನ್ಮೆಂಟ್‌ ವಲಯಗಳೆಂದು (ನಿಯಂತ್ರಿತ ಪ್ರದೇಶ) ಗುರುತಿಸುತ್ತಿದ್ದು, ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಈವರೆಗೆ 135 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 58 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ಮತ್ತು ಪಶ್ಚಿಮ ವಲಯದಲ್ಲಿಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ತಲಾ 37 ಪ್ರಕರಣಗಳು ವರದಿಯಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 450 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 4369 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸ್ವಯಂ ಸೇವಕನ ಮೇಲೆ ಉಗುಳಿದ ಬಿಹಾರಿ ಕಾರ್ಮಿಕರು
ಹೊಂಗಸಂದ್ರ ಬಳಿಯ ವಿದ್ಯಾಜ್ಯೋತಿನಗರದಲ್ಲಿ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ ಬಿಹಾರ ಮೂಲದ ಕಾರ್ಮಿಕರು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅದೇ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಹಿಂದಿ ಭಾಷೆ ಬಲ್ಲ ಯುವಕನನ್ನು ಪಾಲಿಕೆ ಅಧಿಕಾರಿಗಳು ಸ್ವಯಂ ಸೇವಕನನ್ನಾಗಿ ನಿಯೋಜಿಸಿದ್ದಾರೆ.

ಬಿಹಾರಿ ಮೂಲದ ಕಾರ್ಮಿಕರು ಸ್ವಯಂಸೇವಕ ಯುವಕನ ಮಾತು ಕೇಳುತ್ತಿಲ್ಲ. ಅಲ್ಲದೇ ಸಿಗರೇಟು, ಮಾಂಸಾಹಾರಿ ಊಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅದೆಲ್ಲವನ್ನು ಕೊಡಲು ಸಾಧ್ಯವಿಲ್ಲವೆಂದ ಯುವಕನ ಮೇಲೆ ಬಿಹಾರಿ ಕಾರ್ಮಿಕರು ಉಗುಳಿರುವ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ