ಆ್ಯಪ್ನಗರ

ಜರ್ಮನ್‌ ಭಾಷೆ ಕಲಿಕೆಗೆ ನರ್ಸಿಂಗ್‌ ವಿದ್ಯಾರ್ಥಿಗಳು ಬರುವವರಿದ್ದರು : ಅರ್ಮೇನಿಯಾ ವಿವಿ ಪತ್ರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ 32 ನರ್ಸಿಂಗ್‌ ವಿದ್ಯಾರ್ಥಿಗಳು ಜರ್ಮನ್‌ ಭಾಷೆ ಕಲಿಕೆಗಾಗಿಯೇ ಅರ್ಮೇನಿಯಾಕ್ಕೆ ತೆರಳುತ್ತಿದ್ದರೇ ಹೊರತು ದು ಯಾವುದೇ ಮಾನವ ಕಳ್ಳ ಸಾಗಣೆ ಪ್ರಕರಣ ಅಲ್ಲ ಎನ್ನುವುದು ತನಿಖೆಯಿಂದ ಮತ್ತು ಅರ್ಮೇನಿಯಾ ವಿವಿ ಬರೆದಿರುವ ಪತ್ರದಿಂದ ದೃಢಪಟ್ಟಿದೆ.

Vijaya Karnataka 30 Nov 2018, 5:00 am
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ 32 ನರ್ಸಿಂಗ್‌ ವಿದ್ಯಾರ್ಥಿಗಳು ಜರ್ಮನ್‌ ಭಾಷೆ ಕಲಿಕೆಗಾಗಿಯೇ ಅರ್ಮೇನಿಯಾಕ್ಕೆ ತೆರಳುತ್ತಿದ್ದರೇ ಹೊರತು ದು ಯಾವುದೇ ಮಾನವ ಕಳ್ಳ ಸಾಗಣೆ ಪ್ರಕರಣ ಅಲ್ಲ ಎನ್ನುವುದು ತನಿಖೆಯಿಂದ ಮತ್ತು ಅರ್ಮೇನಿಯಾ ವಿವಿ ಬರೆದಿರುವ ಪತ್ರದಿಂದ ದೃಢಪಟ್ಟಿದೆ.
Vijaya Karnataka Web nursing students would have come for armenia university clarifies
ಜರ್ಮನ್‌ ಭಾಷೆ ಕಲಿಕೆಗೆ ನರ್ಸಿಂಗ್‌ ವಿದ್ಯಾರ್ಥಿಗಳು ಬರುವವರಿದ್ದರು : ಅರ್ಮೇನಿಯಾ ವಿವಿ ಪತ್ರ


ಅರ್ಮೇನಿಯಾಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ 32 ನರ್ಸಿಂಗ್‌ ವಿದ್ಯಾರ್ಥಿಗಳು ಮತ್ತು ಏಜೆಂಟ್‌ ಟೋನಿ ಟಾಮ್‌ನನ್ನು ಮಂಗಳವಾರ ವಶಕ್ಕೆ ಪಡೆದಿದ್ದ ವಲಸೆ ಅಧಿಕಾರಿಗಳು ಮಾನವ ಕಳ್ಳ ಸಾಗಣೆ ಆರೋಪ ಹೊರಿಸಿ ಹೆಚ್ಚಿನ ತನಿಖೆಗಾಗಿ ಏರ್‌ಪೋರ್ಟ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ವಿದ್ಯಾರ್ಥಿಗಳ ಪಾಸ್‌ಪೋರ್ಟ್‌ ಮತ್ತು ವೀಸಾ ಪರಿಶೀಲಿಸಿದ್ದ ಅಧಿಕಾರಿಗಳು ಎಲ್ಲವೂ ಸಮರ್ಪಕವಾಗಿ ಇದ್ದುದರಿಂದ 32 ಮಂದಿಯನ್ನು ಅದೇ ದಿನ ಬಿಟ್ಟು ಕಳುಹಿಸಿದ್ದ ಅಧಿಕಾರಿಗಳು ಏಜೆಂಟ್‌ ಒಬ್ಬನನ್ನು ಮಾತ್ರ ವಶದಲ್ಲಿಟ್ಟುಕೊಂಡಿದ್ದರು.

ಜರ್ಮನ್‌ ಭಾಷೆ ಕಲಿಕೆಗೆ ನಾನು 32 ಮಂದಿಯನ್ನು ಅರ್ಮೇನಿಯಾಕ್ಕೆ ಕಳುಹಿಸುತ್ತಿದ್ದೆ ಎಂದು ಏಜೆಂಟ್‌ ಉತ್ತರಿಸಿದ್ದ. ಇದು ನಿಜವೇ ಎಂದು ಪೊಲೀಸ್‌ ಇಲಾಖೆ ಅರ್ಮೇನಿಯಾ ವಿವಿಗೆ ಪತ್ರ ಬರೆದು ವಿಚಾರಿಸಿತ್ತು. ವಿವಿಯಿಂದ ಉತ್ತರ ಬಂದಿದ್ದು, 32 ಮಂದಿ ಇಲ್ಲಿಗೆ ಜರ್ಮನ್‌ ಭಾಷೆ ಕಲಿಕೆಗೆ ಬರಬೇಕಿತ್ತು. ನಮ್ಮಲ್ಲಿ ಭಾಷಾ ಕಲಿಕೆ ಕೋರ್ಸ್‌ ಇರುವುದು ನಿಜ ಎಂದು ಪತ್ರ ಬರೆದಿದ್ದಾರೆ.

ವಲಸೆ ಅಧಿಕಾರಿಗಳ ದುಡುಕಿನ ಕ್ರಮಕ್ಕೆ ಏಜೆಂಟ್‌ ಅನಗತ್ಯವಾಗಿ ಜೈಲು ಸೇರಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ