ಆ್ಯಪ್ನಗರ

ಓಕಳೀಪುರಂ ಜಂಕ್ಷನ್‌ನಲ್ಲಿ ಕಾಮಗಾರಿ; ವಾಹನ ಸಂಚಾರ ನಿಷೇಧ

ಮಲ್ಲೇಶ್ವರಂ ಕಡೆಯಿಂದ ಕೃಷ್ಣ ಫ್ಲೋರ್‌ ಮಿಲ್‌ ಸಿಗ್ನಲ್‌, ಖೋಡೆಸ್‌ ವೃತ್ತದ ಮೂಲಕ ಸಂಚರಿಸುವ ಮತ್ತು ಸಿಟಿ ರೈಲು ನಿಲ್ದಾಣದತ್ತ ತೆರಳುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

Vijaya Karnataka 19 Jan 2019, 5:00 am
ಬೆಂಗಳೂರು: ಬಿಬಿಎಂಪಿಯು ಓಕಳೀಪುರಂ ಬಳಿ ಅಷ್ಟ ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ಮಲ್ಲೇಶ್ವರಂ ಕಡೆಯಿಂದ ಕೃಷ್ಣ ಫ್ಲೋರ್‌ ಮಿಲ್‌ ಸಿಗ್ನಲ್‌, ಖೋಡೆಸ್‌ ವೃತ್ತದ ಮೂಲಕ ಸಂಚರಿಸುವ ಮತ್ತು ಸಿಟಿ ರೈಲು ನಿಲ್ದಾಣದತ್ತ ತೆರಳುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಹೀಗಾಗಿ, ಮಲ್ಲೇಶ್ವರ ಕಡೆಯಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
Vijaya Karnataka Web baricade


ಮಲ್ಲೇಶ್ವರಂ ಕಡೆಯಿಂದ ಬರುವ ವಾಹನಗಳು ಕೃಷ್ಣ ಫ್ಲೋರ್‌ ಮಿಲ್‌ ಸಿಗ್ನಲ್‌ ಬಳಿ ಎಡ ತಿರುವು ಪಡೆದು ಧನ್ವಂತರಿ ರಸ್ತೆ ಮೂಲಕ ಶಾಂತಲಾ ಸಿಲ್ಕ್‌ ಹೌಸ್‌ ವೃತ್ತದ ಮುಖಾಂತರ ನಗರ ರೈಲು ನಿಲ್ದಾಣ ಮತ್ತು ಖೋಡೆಸ್‌ ವೃತ್ತದ ಕಡೆಗೆ ತೆರಳಬಹುದು. ಇಲ್ಲವೇ ಕೃಷ್ಣ ಫ್ಲೋರ್‌ ಮಿಲ್‌ ಸಿಗ್ನಲ್‌ ಕಡೆಯಿಂದ ವಾಟಾಳ್‌ ನಾಗರಾಜ್‌ ರಸ್ತೆಯಲ್ಲಿ ಸಂಚರಿಸಿ ಕೆ.ಬಿ.ಜಂಕ್ಷನ್‌ ಮೂಲಕ ರಾಜಾಜಿನಗರ ಪ್ರವೇಶ ದ್ವಾರ ತಲುಪಿ 'ಯು' ತಿರುವು ಪಡೆದು ಖೋಡೆ ವೃತ್ತ ಮತ್ತು ರೈಲು ನಿಲ್ದಾಣದ ಕಡೆ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ