ಆ್ಯಪ್ನಗರ

ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನಗಳ ಮಾರಾಟ, 1000ಕ್ಕೂ ಅಧಿಕ ಮಂದಿಗೆ ವಂಚಿಸಿದಾತ ಸೆರೆ!

ಬಿಡಿಎಯ ನಕಲಿ ರಬ್ಬರ್‌ ಸ್ಟ್ಯಾಂಪ್‌, ಪ್ರಾಧಿಕಾರ ಆಯುಕ್ತರ ಸಹಿಯನ್ನೇ ನಕಲಿ ಮಾಡಿ ವಂಚಿಸುತ್ತಿದ್ದ ಖದೀಮನನ್ನ ಜಾಗೃತ ದಳ ಬಂಧಿಸಿದೆ. ಸುಮಾರು 1000ಕ್ಕೂ ಹೆಚ್ಚು ಮಂದಿಗೆ ಬಿಡಿಎ ನಿವೇಶನದ ಹೆಸರಿನಲ್ಲಿ ಈತ ವಂಚಿಸಿದ್ದಾನೆ.

Vijaya Karnataka Web 12 Jun 2020, 12:58 pm
ಬೆಂಗಳೂರು: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಹೆಸರಿನಲ್ಲಿ ನಗರದ ಕೆಂಪೇಗೌಡ ಬಡಾವಣೆಯಲ್ಲಿರುವ ಬಿಡಿಎ ನಿವೇಶನಗಳ ನಕಲಿ ಹಕ್ಕು ಪತ್ರವನ್ನ ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದ್ದ ಜಾಲವೊಂದನ್ನ ಪ್ರಾಧಿಕಾರದ ಜಾಗೃತ ದಳ ಪತ್ತೆ ಹಚ್ಚಿದೆ.
Vijaya Karnataka Web 54nqxFwW


ಕಡಿಮೆ ಬೆಲೆಗೆ ಸೈಟ್ ಕೊಡಿಸಿವುದಾಗಿ ನಕಲಿ ದಾಖಲಾತಿಗಳನ್ನು ನೀಡಿರುವ ಈ ತಂಡ‌ 1000ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ ಹಾಗೂ ವಂಚನೆಗೆ ಬಳಸಿದ್ದ ರಬ್ವರ್ ಸ್ಟಾಂಪ್, ಛಾಪಾ ಕಾಗದ ಇತ್ಯಾದಿ ದಾಖಲೆಗಳನ್ನ ಬಿಡಿಎ ಕಾರ್ಯಪಡೆ ವಶಕ್ಕೆ ಪಡೆದಿದೆ. ಅಲ್ಲದೇ ವಿಜಯಾನಂದಸ್ವಾಮಿ ವಿರುದ್ಧ ಶೇಷಾದ್ರಿಪುರಂ‌ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ಘಟನೆಯ ವಿವರ!
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ, ಬೆಂಗಳೂರಿನ ರಮೇಶ್‌ ಎಂಬವನ ಜೊತೆ ಸೇರಿಕೊಂಡು ಕೆಂಪೇಗೌಡ ಬಡಾವಣೆಯಲ್ಲಿರುವ ಬಿಡಿಎ ನಿವೇಶಗಳನ್ನ ಕಡಿಮೆ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆ ಎಂದು ಹಲವರಿಗೆ ನಂಬಿಸಿದ್ದಾನೆ. ಇದಕ್ಕಾಗಿ ತನ್ನ ಸಂಘಕ್ಕೆ ನೋಂದಾಯಿಸಿಕೊಳ್ಳಬೇಕು ಎಂದು ಸುಮಾರು 1000 ಮಂದಿಯಿಂದ 15,000 ರೂ. ನಂತೆ ಪಡೆದುಕೊಂಡು ನೋಂದಾಯಿಸಿಕೊಂಡಿದ್ದಾನೆ.

ನಟಿ ಮಯೂರಿ ಸಿಂಪಲ್‌ ಮದುವೆಗೆ ಫೋಟೋಗಳ ಸಾಕ್ಷಿ! ಹೇಗಿತ್ತು ಗೊತ್ತಾ ವಿವಾಹ ಸಂಭ್ರಮ?


ಅಲ್ಲದೇ ಈ ಪೈಕಿ 50ಕ್ಕೂ ಹೆಚ್ಚು ಜನರಿಂದ 50,000 ದಿಂದ 3 ಲಕ್ಷದವರೆಗೆ ಹಣ ಪಡೆದು ಬಿಡಿಎ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನ ತಯಾರಿಸಿ ನೀಡಿದ್ದಾನೆ. ಇದಕ್ಕೆ ತಾನೇ ಬಿಡಿಎ ನಕಲಿ ರಬ್ಬರ್‌ ಸ್ಟ್ಯಾಂಪ್‌ ಹಾಗೂ ಬಿಡಿಎ ಆಯುಕ್ತರ ನಕಲಿ ಸಹಿಯನ್ನ ಹಾಕಿದ್ದಾನೆ. ಯಾರಿಗೂ ಗೊತ್ತಿಲ್ಲದಂತೆ ಈ ರೀತಿ ಮಾಡಿದ್ದ ಖದೀಮ ಕೊನೆಗು ಸಿಕ್ಕಿಬಿದ್ದಿದ್ದಾನೆ.

ಖದೀಮ ಸಿಕ್ಕಿ ಬಿದ್ದಿದ್ದು ಹೇಗೆ?
ಒಟ್ಟು ಮೂರು ಲಕ್ಷ ಪಾವತಿಸಿ 6 ನಿವೇಶನದ ನಕಲಿ ಹಕ್ಕು ಪತ್ರಗಳನ್ನ ಪಡೆದಿದ್ದ ವ್ಯಕ್ತಿಯೊಬ್ಬರು ಅನುಮಾನ ಬಂದು ಇದರ ಸತ್ಯಾಸತ್ಯತೆ ತಿಳಿಯಲು ಬಿಡಿಎ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳೊಂದಿಗೆ ಈ ಬಗ್ಗೆ ವಿಚಾರಿಸಿದ್ದಾರೆ. ಈ ಸಂಬಂಧ ತಾನು ಮೋಸ ಹೋದೆ ಎಂದು ತಿಳಿದಾಗ. ಈ ಬಗ್ಗೆ ಬಿಡಿಎ ಆಯುಕ್ತರಿಗೆ ದೂರು ನೀಡಿದ್ದಾರೆ.

ಕೂಡಲೇ ಆಯುಕ್ತರು ಪ್ರಾಧಿಕಾರದ ಜಾಗೃತ ದಳಕ್ಕೆ ಮಾಹಿತಿ ನೀಡಿದ್ದಾರೆ. ಕಾರ್ಯಪಡೆಯ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ವಿಜಯಾನಂದಸ್ವಾಮಿಯವರ ಕಚೇರಿ ಮೇಲೆ ದಾಳಿ ನಡೆಸಿದ್ದು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಆತನ ಬಾಯಿ ಬಿಡಿಸಿದಾಗ ತನ್ನ ಮೋಸದ ಜಾಲವನ್ನ ಹೊರಕ್ಕೆ ಹಾಕಿದ್ದಾನೆ.

ಕೃಷಿ ಭೂಮಿ ಖರೀದಿ ಕಾಯ್ದೆ ತಿದ್ದುಪಡಿ ಉತ್ತಮ ನಿರ್ಧಾರ; ಎಸ್ ಟಿ ಸೋಮಶೇಖರ್

ಸುಮಾರು 3000 ಮಂದಿ ಈತನ ಬಲೆಗೆ ಬಿದ್ದಿದ್ದು ಎಲ್ಲರನ್ನೂ ತನ್ನ ಸಂಘದ ಸದಸ್ಯರಾಗಿಸಿದ್ದಾನಂತೆ. ಅಲ್ಲದೇ ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ನಕಲಿ ಹಕ್ಕು ಪತ್ರ ನೀಡುವ ಯೋಜನೆ ಹಾಕಿಕೊಂಡಿದ್ದನಂತೆ. ಸದ್ಯ ಜಾಗ್ರತ ದಳ, ಮಹತ್ವದ ದಾಖಲೆಗಳನ್ನ ಕಲೆ ಹಾಕಿದೆ. ಇನ್ನು ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಡಿಎ ಮೋಸಹೋದವರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುಂತೆ ಮನವಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ