ಆ್ಯಪ್ನಗರ

ಪಾದರಾಯನಪುರ ಗಲಭೆ: ನಿರಪರಾಧಿಗಳ ಬಂಧನ ಆರೋಪ, ಠಾಣೆಯ ಮುಂದೆ ಜಮಾಯಿಸಿದ ಮಹಿಳೆಯರು

ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ನಿರಪರಾಧಿಗಳನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಹಿಳೆಯರು ಜೆಜೆ ನಗರ ಪೊಲೀಸ್ ಠಾಣೆಯ ಮುಂದೆ ಕೆಲಹೊತ್ತು ಜಮಾಯಿಸಿದರು. ಬಳ್ಳಾರಿ, ಹೊಸಪೇಟೆ ಭಾಗದಿಂದ ಕೂಲಿಗಾಗಿ ಬಂದವರನ್ನು ಬಂಧಿಸಲಾಗಿದೆ ಎಂಬುವುದು ಮಹಿಳೆಯರ ಆರೋಪವಾಗಿದೆ.

Vijaya Karnataka Web 22 Apr 2020, 11:30 am
ಬೆಂಗಳೂರು: ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಪತಿಯನ್ನು ಬಿಟ್ಟುಬಿಡಿ ಎಂದು ಕೆಲವು ಮಹಿಳೆಯರು ಜೆಜೆ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಘಟನೆ ನಡೆದಿದೆ.
Vijaya Karnataka Web padaramanapura


ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತರನ್ನು ಕ್ವಾರಂಟೈನ್‌ ಮಾಡಲು ತೆರಳಿದ್ದ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.

ಪ್ರಶ್ನಾತೀತ ಮುಸ್ಲಿಂ ನಾಯಕನಾಗಿ ಗುರುತಿಸಿಕೊಳ್ಳುವ ಉಮೇದು, ಜಮೀರ್ ಎಡವಟ್ಟು ಕೈಗೆ ಆಪತ್ತು!

ಪ್ರಕರಣಕ್ಕೆ ಸಂಬಂಧಿಸಿದಂತೆ 117 ಕ್ಕೂ ಅಧಿಕ ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಆದರೆ ಈ ಪೈಕಿ ಕೆಲವು ನಿರಪರಾಧಿಗಳು ಸೇರಿದ್ದಾರೆ ಎಂಬುವುದು ಮಹಿಳೆಯರ ಆರೋಪ.

ಗಲಭೆ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ತೊಡಗಿಕೊಂಡಿರದ ಜನರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಮಹಿಳೆಯರು ಆರೋಪಿದ್ದಾರೆ. ಬಳ್ಳಾರಿ, ಹೊಸಪೇಟೆಯಿಂದ ಕೂಲಿಗಾಗಿ ಬಂದವರನ್ನು ಬಂಧಿಸಲಾಗಿದೆ. ಈ ಗಲಭೆಯಲ್ಲಿ ನಮ್ಮ ಪತಿಯ ಪಾತ್ರ ಇಲ್ಲ ಎಂದು ಮಹಿಳೆಯರು ಠಾಣೆಯ ಮುಂದೆ ಅಳವತ್ತುಕೊಂಡರು.

ಲಾಕ್‌ಡೌನ್‌ ಎಫೆಕ್ಟ್‌: ರಾಜ್ಯದಲ್ಲಿ ಕೊರೊನಾ ಸ್ಲೋಡಾನ್‌‌, ಬೆಂಗ್ಳೂರಲ್ಲಿ ಸತತ 3 ದಿನದಿಂದ ನೆಗೆಟಿವ್‌

ಪಾದರಾಯನಪುರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಠಾಣೆಯ ಮುಮದೆ ಜಮಾಯಿಸದೆ ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದರು. ಬಳಿಕ ಮಹಿಳೆಯರು ಅಲ್ಲಿಂದ ತೆರಳಿದರು. ಗಲಭೆಯ ಹಿನ್ನೆಲೆಯಲ್ಲಿ ಪಾದರಾಯನಪುರ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುಮಾರು 800 ರಷ್ಟು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ