ಆ್ಯಪ್ನಗರ

ಖಾಸಗಿ ಶಾಲೆಯಲ್ಲಿ ಆರ್‌ಟಿಇ ಗೊಂದಲ: ಮಕ್ಕಳ ಪೋಷಕರಿಗೆ ಆತಂಕ

ಆರ್‌ಟಿಇ ಅಡಿಯಲ್ಲಿ 41 ಮಕ್ಕಳನ್ನು ದಾಖಲಿಸಿಕೊಳ್ಳಲು ನಗರದ ಶಾಲೆಯೊಂದಕ್ಕೆ ಅನುಮತಿ ಇದ್ರೂ ಕೇವಲ 21 ಮಕ್ಕಳನ್ನು ದಾಖಲಿಸಿಕೊಂಡಿದೆ. ಈ ಸಂಬಂಧ ರಾಜಾಜಿನಗರದ ಖಾಸಗಿ ಶಾಲೆ ವಿರುದ್ಧ ಆಕ್ರೋಶಗೊಂಡ ಪೋಷಕರು, ಶಾಲೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹಾಗೂ, ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.

TIMESOFINDIA.COM 18 May 2018, 12:03 pm
ಬೆಂಗಳೂರು: ಆರ್‌ಟಿಇ ಅಡಿಯಲ್ಲಿ 41 ಮಕ್ಕಳನ್ನು ದಾಖಲಿಸಿಕೊಳ್ಳಲು ನಗರದ ಶಾಲೆಯೊಂದಕ್ಕೆ ಅನುಮತಿ ಇದ್ರೂ ಕೇವಲ 21 ಮಕ್ಕಳನ್ನು ದಾಖಲಿಸಿಕೊಂಡಿದೆ. ಈ ಸಂಬಂಧ ರಾಜಾಜಿನಗರದ ಖಾಸಗಿ ಶಾಲೆ ವಿರುದ್ಧ ಆಕ್ರೋಶಗೊಂಡ ಪೋಷಕರು, ಶಾಲೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹಾಗೂ, ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.
Vijaya Karnataka Web RTE School


ಆರ್‌ಟಿಇ ಅಡಿ 1 ನೇ ತರಗತಿಯ 41 ಮಕ್ಕಳ ದಾಖಲಾತಿಗೆ ಅನುಮತಿ ಇದೆ ಎಂದು ಏಪ್ರಿಲ್ 26 ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೆಎಲ್‌ಇ ಶಾಲೆ ಪೋಷಕರಿಗೆ ಸಂದೇಶ ಕಳಿಸಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಶಿಕ್ಷಣ ಇಲಾಖೆಗೆ ಪೋಷಕರು ದೂರು ನೀಡಿದ್ದಾರೆ. ಆದರೆ, ಪೋಷಕರ ಆರೋಪವನ್ನು ತಳ್ಳಿ ಹಾಕಿದ ಕೆಎಲ್‌ಇ ಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾಫ್ಟ್‌ವೇರ್ ತೊಂದರೆಯಿಂದಾಗಿ ಈ ರೀತಿಯಾಗಿದೆ. ನಮ್ಮ ಶಾಲೆಗೆ ಆರ್‌ಟಿಇ ಅಡಿ ಕೇವಲ 21 ಮಕ್ಕಳನ್ನು ದಾಖಲಿಸಿಕೊಳ್ಳಲು ಮಾತ್ರ ಅನುಮತಿ ಇದೆ ಎಂದು ಹೇಳಿಕೊಂಡಿದೆ. ಇದರಿಂದ 20 ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ.

ಕೆಎಲ್ಇ ಶಾಲೆಯ ಆರೋಪವನ್ನು ತಳ್ಳಿ ಹಾಕಿದ ಪೋಷಕರು, ಅವರಿಗೆ ಕೇವಲ 21 ಸೀಟುಗಳಿದ್ದರೆ, 41 ಪೋಷಕರಿಗೆ ಯಾಕೆ ಸಂದೇಶ ಕಳಿಸಿದ್ದರು. ನಮಗೆ ಮಕ್ಕಳ ದಾಖಲಾತಿ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, 10 ದಿನಗಳ ಹಿಂದೆ ಶಾಲೆ ದಾಖಲಾತಿ ಸಂದೇಶಗಳನ್ನು ಕಳಿಸಿದ್ದಾರೆ. ಬಳಿಕವೇ ನಾವು ಎಲ್ಲ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದೇವೆ ಎಂದು ಆರ್‌ಟಿಇ ಅಡಿ ಸೀಟು ಸಿಗದ ಬಾಲಕರೊಬ್ಬರ ಪೋಷಕರು ಅವಲತ್ತುಕೊಂಡಿದ್ದಾರೆ. ಅಲ್ಲದೆ, ಶಿವಲಿಂಗ ಅನ್ನುವ ಮತ್ತೊಬ್ಬ ಪೋಷಕರು ಸಹ ನಮಗೆ ಸೀಟು ಸಿಕ್ಕಿದೆ ಎಂದು ಶಾಲೆ ಮಾಹಿತಿ ನೀಡಿತ್ತು. ಬಳಿಕ ಶಾಲೆ 2 ಪಟ್ಟಿ ಬಿಡುಗಡೆ ಮಾಡಿದೆ. ನಮ್ಮ ಮಗುವಿನ ಹೆಸರು ಎರಡನೇ ಪಟ್ಟಿಯಲ್ಲಿದ್ದರಿಂದ ಅವರಿಗೆ ಸೀಟು ಸಿಕ್ಕಿಲ್ಲ. ಬೇರೆ ಶಾಲೆಗೆ ಹೋಗಬೇಕೆಂದು ಮಾಹಿತಿ ನೀಡಿದೆ. ಶಿಕ್ಷಣ ಇಲಾಖೆ ಸಹ ಸೀಟು ಕೊಡಿಸುವ ಭರವಸೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾದ ಆರ್‌ಟಿಇ ಟಾಸ್ಕ್ ಫೋರ್ಸ್ ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಬಳಿ ಈ ವಿಚಾರವನ್ನು ಕೈಗೆತ್ತಿಕೊಂಡಿದೆ. ಈ ವಿಚಾರವಾಗಿ ಡಿಡಿಪಿಐ ಮಾತನಾಡಿದ್ದು, ಸರಕಾರ ಕೆಎಲ್‌ಇ ಶಾಲೆಗೆ ಪೂರ್ವ-ಪ್ರಾಥಮಿಕ ವಿಭಾಗ ಹಾಗೂ 1 ನೇ ತರಗತಿ - ಹೀಗೆ ಎರಡು ವಿಭಾಗಗಳಲ್ಲಿ ಆರ್‌ಟಿಇ ಯಡಿ ಅವಕಾಶ ನೀಡಿದೆ. ಆದರೆ, ಅವರು 21 ಮಕ್ಕಳನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ನಾವು ಈ ಬಗ್ಗೆ ಶಾಲೆಗೆ ಬಿಇಒರನ್ನು ಕಳಿಸಿದ್ದೇವೆ ಎಂದು ಡಿಡಿಪಿಐ ಅಬ್ದುಲ್ ವಜೀದ್ ಖಾಜಿ ಹೇಳಿದ್ದಾರೆ. ಆದರೆ, ಬಿಇಒರನ್ನು ಕೇಳಿದರೆ, ಈ ಬಗ್ಗೆ ಕಮಿಷನರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಎಂದು ಹೇಳಿದ್ದಾರೆ. ಈ ಗೊಂದಲಗಳಿಂದ ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ