ಆ್ಯಪ್ನಗರ

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸಂಚು ಪ್ರಕರಣ: ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ವಿಚಾರಣೆ!

ಶಾಸಕ ವಿಶ್ವನಾಥ್‌ ನೀಡಿರುವ ವಿಡಿಯೊ ಮತ್ತು ಆಡಿಯೊದಲ್ಲಿರುವ ತುಣುಕುಗಳನ್ನು ಗೋಪಾಲಕೃಷ್ಣರಿಗೆ ತೋರಿಸಿ, ಇದರಲ್ಲಿರುವುದು ನೀವೇನಾ? ಅದರಲ್ಲಿ ಮಾತನಾಡಿರುವ ಧ್ವನಿ ನಿಮ್ಮದೇನಾ? ನಿಮಗೆ ಕುಳ್ಳ ದೇವರಾಜು ಎಷ್ಟು ದಿನಗಳಿಂದ ಪರಿಚಯ? ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ

Vijaya Karnataka 5 Dec 2021, 11:24 am
ಯಲಹಂಕ: ಬಿಡಿಎ ಅಧ್ಯಕ್ಷ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಅವರನ್ನು ರಾಜಾನುಕುಂಟೆ ಪೊಲೀಸರು ವಿಚಾರಣೆ ನಡೆಸಿದರು.
Vijaya Karnataka Web ಎಸ್ ಆರ್ ವಿಶ್ವನಾಥ
ಶಾಸಕ ಎಸ್‌.ಆರ್‌.ವಿಶ್ವನಾಥ್‌

ಹತ್ಯೆಗೆ ಸಂಚು ಆರೋಪ; ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಸ್. ಆರ್ ವಿಶ್ವನಾಥ್ ದೂರು
ಶಾಸಕ ವಿಶ್ವನಾಥ್‌ ನೀಡಿರುವ ವಿಡಿಯೋ ಮತ್ತು ಆಡಿಯೋದಲ್ಲಿರುವ ತುಣುಕುಗಳನ್ನು ಗೋಪಾಲಕೃಷ್ಣರಿಗೆ ತೋರಿಸಿ, ಇದರಲ್ಲಿರುವುದು ನೀವೇನಾ? ಅದರಲ್ಲಿ ಮಾತನಾಡಿರುವ ಧ್ವನಿ ನಿಮ್ಮದೇನಾ? ನಿಮಗೆ ಕುಳ್ಳ ದೇವರಾಜು ಎಷ್ಟು ದಿನಗಳಿಂದ ಪರಿಚಯ? ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಜತೆಗೆ ಮೊದಲೇ ಸಿದ್ಧಪಡಿಸಿಕೊಂಡಿದ್ದ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಮುಂದಿನ ವಿಚಾರಣೆಗೆ ಕರೆದಾಗ ಬರುವಂತೆ ತಿಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್ ಹತ್ಯೆಗೆ ಸ್ಕೆಚ್? ವಿಡಿಯೋ ಬಹಿರಂಗ
ಪೊಲೀಸರು ಕುಳ್ಳ ದೇವರಾಜ್‌ ಅವರನ್ನು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯದ ವಶಕ್ಕೆ ನೀಡಿದ್ದರು. ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಅದೇ ರೀತಿ ಗೋಪಾಲಕೃಷ್ಣ ನ್ಯಾಯಾಲಯಕ್ಕೆ ಹಾಜರಾಗಿ, ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ: ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹತ್ಯೆಗೆ ಸಂಚು; ವಿಡಿಯೋದಲ್ಲೇನಿದೆ?
ಮುಖಂಡರ ಮಾಹಿತಿ ನೀಡಲಿ
ಈ ನಡುವೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸಭೆಯೊಂದರಲ್ಲಿ ಮಾತನಾಡಿ, ''ವಿಡಿಯೊದಲ್ಲಿ ಮಾತಾಡಿರುವುದು ಗೋಪಾಲಕೃಷ್ಣ ಎಂಬುದು ಖಚಿತ. ತನಿಖೆ ನಂತರ ಸತ್ಯ ಹೊರಬಂದಾಗ, ಕ್ಷೇತ್ರದ ಜನತೆಗೆ ಉತ್ತರ ಹೇಳಬೇಕಾಗುತ್ತದೆ. ಬಿಜೆಪಿ ಮುಖಂಡರು ಪೋನ್‌ ಮಾಡಿ ಬೆಂಬಲಿಸಿದ್ದಾರೆ ಎಂದು ವಿಡಿಯೊದಲ್ಲಿ ಹೇಳಿದ್ದಾನೆ. ಧೈರ್ಯವಿದ್ದರೆ ಪೋನ್‌ ಮಾಡಿರುವ ಮುಖಂಡರ ಮಾಹಿತಿ ನೀಡಲಿ,'' ಎಂದು ಸವಾಲು ಹಾಕಿದ್ದಾರೆ.
ಹತ್ಯೆಗೆ ಸಂಚು ವಿಡಿಯೋ ಸ್ಫೋಟ: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಎಸ್‌ಆರ್ ವಿಶ್ವನಾಥ್
2 ಗಂಟೆ ಕಾಲ ವಿಚಾರಣೆ
ಶನಿವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ರಾಜಾನುಕುಂಟೆ ಪೊಲೀಸರು ನೋಟೀಸ್‌ ನೀಡಿದ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ಒಂದು ಗಂಟೆ ಮುಂಚಿತವಾಗಿ ಠಾಣೆಗೆ ಹಾಜರಾಗಿದ್ದರು. ಅವರನ್ನು ವಿಚಾರಣಾಧಿಕಾರಿ ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ನಾಗರಾಜ್‌ ಅವರ ನೇತೃತ್ವದಲ್ಲಿ ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ