ಕೃಷ್ಣರಾಜಪುರ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ವೈಟ್ಫೀಲ್ಡ್ ವಿಭಾಗದ ವರ್ತೂರು ಪೊಲೀಸರು ಬಂಧಿಸಿ 19 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಮೂಲದ ಕಿರಣ್(21) ಶ್ರೀಧರ್(22) ಬಂಧಿತ ಆರೋಪಿಗಳು.
ನಗರದ ಟಿ.ಸಿ.ಪಾಳ್ಯ, ಕತ್ರಿಗುಪ್ಪೆ, ಇಟ್ಟಮಡಗು ಹಾಗೂ ಮಂಡ್ಯದ ವಿವಿಧ ಪ್ರದೇಶಗಳಲ್ಲಿ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು. ಒಂದು ಪ್ರದೇಶದಿಂದ ಕದ್ದೊಯ್ಯುತ್ತಿದ್ದ ಆರೋಪಿಗಳ ಬೇರೆ ಕಡೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣಗಳಿಸುವ ಕೃತ್ಯ ನಡೆಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ನಗರದ ಬನಶಂಕರಿಯ ಇಟ್ಟುಮಡಗುವಿನಲ್ಲಿ ನೆಲೆಯೂರಿದ್ದ ಆರೋಪಿಗಳನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹಮದ್ ಮಾರ್ಗದರ್ಶನ ಹಾಗೂ ಮಾರತ್ತಹಳ್ಳಿಯ ಉಪ ವಿಭಾಗದ ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿ ವಿಚಾರಣೆ ಒಳಪಡಿಸಿದಾಗ ಹಲವಾರು ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.
ನಾನಾ ಪ್ರತಿಷ್ಠಿತ ಕಂಪನಿಗಳ 19 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.