ಆ್ಯಪ್ನಗರ

ಭಾರತದ ಮಾಹಿತಿಗಳನ್ನು ಪಾಕ್‌ಗೆ ರವಾನಿಸುತ್ತಿದ್ದ ಜಿತೇಂದ್ರ ಸಿಂಗ್‌ನ ಮೊಬೈಲ್‌ನಲ್ಲಿ ಹಲವು ಸಂಗತಿ ಪತ್ತೆ!

ರಾಜಸ್ಥಾನದ ಬಾರ್ಮರ್‌ ಮಿಲಿಟರಿ ಗಡಿ ಪ್ರದೇಶದ ಛಾಯಾಚಿತ್ರ ಹಾಗೂ ಮಿಲಿಟರಿ ವಾಹನಗಳ ಛಾಯಾಚಿತ್ರಗಳನ್ನು ಪಾಕಿಸ್ತಾನದ ಏಜೆನ್ಸಿಗೆ ಕಳುಹಿಸಿದ ಆರೋಪದಡಿ ಆರೋಪಿ ಜಿತೇಂದ್ರ ಸಿಂಗ್‌ನನ್ನು ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆ. 20 ರಂದು ಕಾಟನ್‌ ಪೇಟೆಯಲ್ಲಿ ಬಂಧಿಸಿದ್ದರು.

Vijaya Karnataka 28 Nov 2021, 6:45 am
ಬೆಂಗಳೂರು: ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಪಾಕಿಸ್ತಾನದ ಐಎಸ್‌ಐ ಏಜೆನ್ಸಿಗೆ ಭಾರತದ ಮಿಲಿಟರಿ ಪ್ರದೇಶದ ಪೋಟೋಗಳನ್ನು ರವಾನಿಸಿದ ಆರೋಪದಡಿ ಕಳೆದ ಎರಡು ತಿಂಗಳ ಹಿಂದೆ ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಜಿತೇಂದ್ರ ಸಿಂಗ್‌ನ ಮೊಬೈಲನ್ನು ಎಫ್‌ಎಸ್‌ಎಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಹಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Vijaya Karnataka Web Police enquiry


ಆರೋಪಿ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್‌ನನ್ನು ನಗರದ ಕಾಟನ್‌ ಪೇಟೆಯಲ್ಲಿ ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ರಾಜಸ್ಥಾನದ ಬಾರ್ಮರ್‌ ಮಿಲಿಟರಿ ಗಡಿ ಪ್ರದೇಶದ ಛಾಯಾಚಿತ್ರ ಹಾಗೂ ಮಿಲಿಟರಿ ವಾಹನಗಳ ಛಾಯಾಚಿತ್ರಗಳನ್ನು ಪಾಕಿಸ್ತಾನದ ಏಜೆನ್ಸಿಗೆ ಕಳುಹಿಸಿದ ಆರೋಪದಡಿ ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೋ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆ. 20 ರಂದು ಕಾಟನ್‌ ಪೇಟೆಯಲ್ಲಿ ಬಂಧಿಸಿದ್ದರು.
ಟೆಸ್ಟ್‌ ಡ್ರೈವ್‌ ಮಾಡುವುದಾಗಿ ನಂಬಿಸಿ ಕಾರುಗಳನ್ನು ಪಡೆದು ಪರಾರಿಯಾಗುತ್ತಿದ್ದ ವಂಚಕನ ಬಂಧನ
ಈ ವೇಳೆ ಆರೋಪಿಯಿಂದ ಮಿಲಿಟರಿ ಡ್ರೆಸ್‌ಗಳು ಹಾಗೂ ಒಂದು ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿತ್ತು. ಮೊಬೈಲನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಮೊಬೈಲ್‌ ರಿಟ್ರೈವ್‌ ಮಾಡಿದ ವೇಳೆ ಅದರಲ್ಲಿ 20 ಕ್ಕೂ ಅಧಿಕ ಯುವತಿಯರ ಫೋಟೋಗಳು ಪತ್ತೆಯಾಗಿವೆ. ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ನಂತರ ಅವರ ಪೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹ ಮಾಡಿಕೊಳ್ಳುತ್ತಿದ್ದ. ಬಳಿಕ ಅವರ ನಂಬರ್‌ನ್ನು ಪಡೆದು ಚಾಟಿಂಗ್‌ ಮಾಡುತ್ತಿದ್ದ. ಹೀಗೆ ಹಲವು ಯುವತಿಯರ ಜತೆಗೆ ಚಾಟ್‌ ಮತ್ತು ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ.

ಹಣ ಸಂದಾಯದ ಬಗ್ಗೆ ತನಿಖೆ: ಆರೋಪಿ ಜಿತೇಂದರ್‌ ಸಿಂಗ್‌ ಬ್ಯಾಂಕ್‌ ಖಾತೆಗೆ ಹಣ ಎಲ್ಲಿಂದ ಸಂದಾಯವಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಜಸ್ಥಾನಕ್ಕೆ ಹೋಗಿ ಬಂದಿರುವ ಪೊಲೀಸರ ತಂಡ ಮಾಹಿತಿ ಕಲೆ ಹಾಕುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ