ಆ್ಯಪ್ನಗರ

ರೆಡ್‌ ಹ್ಯಾಂಡಾಗಿ ಕಳ್ಳರನ್ನು ಹಿಡಿದುಕೊಟ್ಟಿದ್ದೇ ಮುಳುವಾಯ್ತು: ಪೊಲೀಸ್ ಮಾಹಿತಿದಾರನ ಬರ್ಬರ ಹತ್ಯೆ

ಕಳ್ಳರನ್ನು ರೆಡ್‌ ಹ್ಯಾಂಡಾಗಿ ಹಿಡಿದುಕೊಡ್ತಿದ್ದ ಪ್ರಭು, ಅಪರಾಧ ಹಿನ್ನೆಲೆಯುಳ್ಳವರ ಕೆಂಗಣ್ಣಿಗೆ ತುತ್ತಾಗಿದ್ದ. ಹೀಗಾಗಿ, ಹಳೇ ದ್ವೇಷದ ಹಿನ್ನಲೆಯನ್ನು ಈತನನ್ನು ಕೊಲೆ ಮಾಡಿರೋ ಶಂಕೆ ಇದೆ.

Vijaya Karnataka Web 26 Jan 2020, 12:56 pm
ಬೆಂಗಳೂರು: ಬೆಂಗಳೂರಿನಲ್ಲಿ ಪೊಲೀಸ್ ಮಾಹಿತಿದಾರನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪೊಲೀಸ್ ಮಾಹಿತಿದಾರನನ್ನು ಕೊಂದು ಹಾಕಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರ ಬಳಿಯ ಕಮಲಾ ನಗರದಲ್ಲಿ ಈ ಘಟನೆ ನಡೆದಿದೆ.
Vijaya Karnataka Web murder
ರೆಡ್‌ ಹ್ಯಾಂಡಾಗಿ ಕಳ್ಳರನ್ನು ಹಿಡಿದುಕೊಟ್ಟಿದ್ಧೇ ಮುಳುವಾಯ್ತು: ಪೊಲೀಸ್ ಮಾಹಿತಿದಾರನ ಬರ್ಬರ ಹತ್ಯೆ


27 ವರ್ಷ ವಯಸ್ಸಿನ ಪ್ರಭು ಅಲಿಯಾಸ್ ಅಪ್ಪು ಕೊಲೆಯಾದ ದುರ್ದೈವಿ. ನಗರದ ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಪ್ರಭು ಕೆಲಸ ಮಾಡ್ತಿದ್ದ. ಬ್ಯಾಂಕ್‌ನಲ್ಲಿ ಚೆಕ್ ಕಲೆಕ್ಟ್ ಮಾಡುವ ಕೆಲಸವನ್ನು ಪ್ರಭು ಮಾಡಿಕೊಂಡಿದ್ದ. ಜೊತೆಯಲ್ಲೇ ಪೊಲೀಸರಿಗೆ ಕಳ್ಳರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮೃತ ಪ್ರಭು ಮಾಡುತ್ತಿದ್ದ. ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದ ಹೆಗ್ಗಳಿಕೆಯೂ ಪ್ರಭುಗೆ ಇದೆ.

ಹಳೇ ದ್ವೇಷವೇ ಕೊಲೆಗೆ ಕಾರಣ..?

ಕಳ್ಳರನ್ನು ರೆಡ್‌ ಹ್ಯಾಂಡಾಗಿ ಹಿಡಿದುಕೊಡ್ತಿದ್ದ ಪ್ರಭು, ಅಪರಾಧ ಹಿನ್ನೆಲೆಯುಳ್ಳವರ ಕೆಂಗಣ್ಣಿಗೆ ತುತ್ತಾಗಿದ್ದ. ಹೀಗಾಗಿ, ಹಳೇ ದ್ವೇಷದ ಹಿನ್ನಲೆಯನ್ನು ಈತನನ್ನು ಕೊಲೆ ಮಾಡಿರೋ ಶಂಕೆ ಇದೆ. ಕೆಲಸ ಮುಗಿಸಿ ಮನೆಗೆ ಬರುತ್ತಿ ವೇಳೆ ಪ್ರಭು ಮೇಲೆ ಅಟ್ಯಾಕ್ ಮಾಡಿರೋ ದುಷ್ಕರ್ಮಿಗಳು, ಚಾಕುವಿನಿಂದ ಇರಿದು ಕೊಂದಿದ್ಧಾರೆ.

ಹಣ ದುಪ್ಪಟ್ಟು ಮಾಡಿಕೊಡುವ ಆಮಿಷ..! ಕೋಟ್ಯಂತರ ರೂ ಸಂಗ್ರಹಿಸಿ ಮಜಾ ಉಡಾಯಿಸುತ್ತಿದ್ದವರು ಅಂದರ್..!

ಹಲವು ಬಾರಿ ಚಾಕುವಿನಿಂದ ಇರಿದಿರುವ ದುಷ್ಕರ್ಮಿಗಳು, ಪ್ರಭುವನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಚಾಕು ಇರಿತದಿಂದ ತೀವ್ರ ರಸ್ತಸ್ರಾವವಾಗಿ ಪ್ರಭು ಸ್ಥಳದಲೇ ಜೀವ ಬಿಟ್ಟಿದ್ದಾರೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

'ಬೌನ್ಸ್‌'ನಲ್ಲಿ ಬಂದ ಬಾಲಕರಿಗೆ ಬಾರಿಸಿದ್ರು ಜನ..! ಕಳ್ಳರೆಂದು ತಿಳಿದು ಹಿಗ್ಗಾಮುಗ್ಗಾ ಥಳಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ