ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಮಿಷನರೇಟ್ನ ಅಧಿಕಾರಿ ಮತ್ತು ಸಿಬ್ಬಂದಿ ಮಂಗಳವಾರ ಸಂಜೆ ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ಬೃಹತ್ ದಾಳಿ ನಡೆಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅತಿ ದೊಡ್ಡ ಮಟ್ಟದ ದಾಳಿ ಇದಾಗಿದ್ದು ಶ್ವಾನದಳ, ಮೆಟಲ್ ಡಿಟೆಕ್ಟರ್ ದಳಗಳ ಸಮೇತ ದಾಳಿ ನಡೆಸಲಾಗಿದೆ. ಇತ್ತೀಚಿಗೆ ಸಿಸಿಬಿ ಅಧಿಕಾರಿಗಳು ರಾಜಕೀಯವಾಗಿ ಬಹಳ ಪ್ರಭಾವಶಾಲಿಗಳಾಗಿರುವ ಕುಖ್ಯಾತ ರೌಡಿ ಶೀಟರ್ಗಳನ್ನು , ರಿಯಲ್ ಎಸ್ಟೇಟ್ ವ್ಯವಹಾರಸ್ಥರನ್ನು, ಭೂಗಳ್ಳರನ್ನು ನಾನಾ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರು ಜೈಲಿನ ಒಳಗೇ ಇದ್ದುಕೊಂಡು ಮೊಬೈಲ್ಗಳ ಮೂಲಕ ಹೊರ ಜಗತ್ತಿನ ಸಂಪರ್ಕದಲ್ಲಿರಬಹುದು, ಆ ಮೂಲಕ ಚುನಾವಣೆ ಮೇಲೆ ತಮ್ಮ ಪ್ರಭಾವ ಬೀರಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ರಾತ್ರಿ 8 ಗಂಟೆ ಸುಮಾರಿಗೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಜೈಲಿನ ಮೇಲೆ ದಾಳಿ ನಡೆಸಿದ್ದು ರಾತ್ರಿ 11 ಗಂಟೆ ಆದರೂ ದಾಳಿ ಮುಂದುವರಿದಿತ್ತು. ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತಪಾಸಣೆಯಲ್ಲಿ ತೊಡಗಿಸಿಕೊಳ್ಳದೆ ಬೆಂಗಳೂರು ಕಮಿಷನರೇಟ್ನ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ತಪಾಸಣೆ ನಡೆಸಿದ್ದಾರೆ. ಇವರು ನಡೆಸುವ ತಪಾಸಣೆಗೆ ಜೈಲು ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸೈಕಲ್ ರವಿ, ಲೋಕೇಶ್ ಅಲಿಯಾಸ್ ಮುಲಾಮ ಸೇರಿದಂತೆ ಇತ್ತೀಚಿಗೆ ಕುಖ್ಯಾತ ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸುಪಾರಿ ಕಿಲ್ಲರ್ಗಳಾದ ಕ್ಯಾಟ್ರಾಜ, ಹೇಮಂತ ಸೇರಿ ಹಲವು ಕುಖ್ಯಾತರು ಬೆಂಗಳೂರು ಕಾರಾಗೃಹದಲ್ಲಿದ್ದಾರೆ. ಪ್ರತೀ ಬ್ಯಾರಕ್ ಮತ್ತು ಸೆಲ್ಗಳಲ್ಲೂ ಇಂಚಿಂಚಾಗಿ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಮಧ್ಯರಾತ್ರಿ ಕಳೆದು ನಸುಕಿನವರೆಗೂ ನಡೆಯುವ ಸಾಧ್ಯತೆಗಳಿವೆ. ಇದುವರೆಗೂ 6 ಕ್ಕೂ ಹೆಚ್ಚು ಮೊಬೈಲ್ಗಳು, 4 ಚಾಕುಗಳು, ಹಲವು ಪ್ಯಾಕ್ ಗಾಂಜಾ, ಹತ್ತಾರು ಸಿಮ್ ಕಾರ್ಡ್ಗಳು ಹಾಗೂ ಹಣ ದಾಳಿ ವೇಳೆ ಪತ್ತೆಯಾಗಿವೆ. ಬಂಧಿಗಳು ತಮ್ಮ ಬಟ್ಟೆಗಳ ಒಳಗೆ ಬಚ್ಚಿಟ್ಟುಕೊಂಡಿದ್ದ ಸಿಮ್ಕಾರ್ಡ್ಗಳನ್ನೂ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ದಾಳಿಯ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಾರಯರು ?: ಅಲೋಕ್ಕುಮಾರ್ ನೇತೃತ್ವದಲ್ಲಿ ಕೇಂದ್ರ ವಲಯದ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗದ ಶಶಿಕುಮಾರ್, ವೈಟ್ಫೀಳ್ಡ್ ಡಿಸಿಪಿ ಅಬ್ದುಲ್ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್, ವಿಐಪಿ ಭದ್ರತಾ ವಿಭಾಗದ ಡಿಸಿಪಿ ಬಾಬಾ, ಅಪರಾಧ ವಿಭಾಗದ ಡಿಸಿಪಿ ಗಿರೀಶ್ ಸೇರಿದಂತೆ ಸಿಸಿಬಿಯ ಐದು ಮಂದಿ ಎಸಿಪಿಗಳು ಹಾಗೂ ಆರು ಡಿಸಿಪಿ ವ್ಯಾಪ್ತಿಯ 14 ಮಂದಿ ಎಸಿಪಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗಿ ಆಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅತಿ ದೊಡ್ಡ ಮಟ್ಟದ ದಾಳಿ ಇದಾಗಿದ್ದು ಶ್ವಾನದಳ, ಮೆಟಲ್ ಡಿಟೆಕ್ಟರ್ ದಳಗಳ ಸಮೇತ ದಾಳಿ ನಡೆಸಲಾಗಿದೆ. ಇತ್ತೀಚಿಗೆ ಸಿಸಿಬಿ ಅಧಿಕಾರಿಗಳು ರಾಜಕೀಯವಾಗಿ ಬಹಳ ಪ್ರಭಾವಶಾಲಿಗಳಾಗಿರುವ ಕುಖ್ಯಾತ ರೌಡಿ ಶೀಟರ್ಗಳನ್ನು , ರಿಯಲ್ ಎಸ್ಟೇಟ್ ವ್ಯವಹಾರಸ್ಥರನ್ನು, ಭೂಗಳ್ಳರನ್ನು ನಾನಾ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರು ಜೈಲಿನ ಒಳಗೇ ಇದ್ದುಕೊಂಡು ಮೊಬೈಲ್ಗಳ ಮೂಲಕ ಹೊರ ಜಗತ್ತಿನ ಸಂಪರ್ಕದಲ್ಲಿರಬಹುದು, ಆ ಮೂಲಕ ಚುನಾವಣೆ ಮೇಲೆ ತಮ್ಮ ಪ್ರಭಾವ ಬೀರಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ರಾತ್ರಿ 8 ಗಂಟೆ ಸುಮಾರಿಗೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಜೈಲಿನ ಮೇಲೆ ದಾಳಿ ನಡೆಸಿದ್ದು ರಾತ್ರಿ 11 ಗಂಟೆ ಆದರೂ ದಾಳಿ ಮುಂದುವರಿದಿತ್ತು. ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತಪಾಸಣೆಯಲ್ಲಿ ತೊಡಗಿಸಿಕೊಳ್ಳದೆ ಬೆಂಗಳೂರು ಕಮಿಷನರೇಟ್ನ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ತಪಾಸಣೆ ನಡೆಸಿದ್ದಾರೆ. ಇವರು ನಡೆಸುವ ತಪಾಸಣೆಗೆ ಜೈಲು ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸೈಕಲ್ ರವಿ, ಲೋಕೇಶ್ ಅಲಿಯಾಸ್ ಮುಲಾಮ ಸೇರಿದಂತೆ ಇತ್ತೀಚಿಗೆ ಕುಖ್ಯಾತ ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸುಪಾರಿ ಕಿಲ್ಲರ್ಗಳಾದ ಕ್ಯಾಟ್ರಾಜ, ಹೇಮಂತ ಸೇರಿ ಹಲವು ಕುಖ್ಯಾತರು ಬೆಂಗಳೂರು ಕಾರಾಗೃಹದಲ್ಲಿದ್ದಾರೆ. ಪ್ರತೀ ಬ್ಯಾರಕ್ ಮತ್ತು ಸೆಲ್ಗಳಲ್ಲೂ ಇಂಚಿಂಚಾಗಿ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಮಧ್ಯರಾತ್ರಿ ಕಳೆದು ನಸುಕಿನವರೆಗೂ ನಡೆಯುವ ಸಾಧ್ಯತೆಗಳಿವೆ. ಇದುವರೆಗೂ 6 ಕ್ಕೂ ಹೆಚ್ಚು ಮೊಬೈಲ್ಗಳು, 4 ಚಾಕುಗಳು, ಹಲವು ಪ್ಯಾಕ್ ಗಾಂಜಾ, ಹತ್ತಾರು ಸಿಮ್ ಕಾರ್ಡ್ಗಳು ಹಾಗೂ ಹಣ ದಾಳಿ ವೇಳೆ ಪತ್ತೆಯಾಗಿವೆ. ಬಂಧಿಗಳು ತಮ್ಮ ಬಟ್ಟೆಗಳ ಒಳಗೆ ಬಚ್ಚಿಟ್ಟುಕೊಂಡಿದ್ದ ಸಿಮ್ಕಾರ್ಡ್ಗಳನ್ನೂ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ದಾಳಿಯ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಾರಯರು ?: ಅಲೋಕ್ಕುಮಾರ್ ನೇತೃತ್ವದಲ್ಲಿ ಕೇಂದ್ರ ವಲಯದ ಡಿಸಿಪಿ ದೇವರಾಜ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಉತ್ತರ ವಿಭಾಗದ ಶಶಿಕುಮಾರ್, ವೈಟ್ಫೀಳ್ಡ್ ಡಿಸಿಪಿ ಅಬ್ದುಲ್ ಅಹದ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್, ವಿಐಪಿ ಭದ್ರತಾ ವಿಭಾಗದ ಡಿಸಿಪಿ ಬಾಬಾ, ಅಪರಾಧ ವಿಭಾಗದ ಡಿಸಿಪಿ ಗಿರೀಶ್ ಸೇರಿದಂತೆ ಸಿಸಿಬಿಯ ಐದು ಮಂದಿ ಎಸಿಪಿಗಳು ಹಾಗೂ ಆರು ಡಿಸಿಪಿ ವ್ಯಾಪ್ತಿಯ 14 ಮಂದಿ ಎಸಿಪಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗಿ ಆಗಿದ್ದರು.