ಆ್ಯಪ್ನಗರ

ಚಿನ್ನಾಭರಣವಿದ್ದ ಪರ್ಸ್‌ ವಾಪಸ್‌ ನೀಡಿದ ಪೊಲೀಸರು

ಮಹಿಳೆಯೊಬ್ಬರು ಆಟೋದಲ್ಲೇ ಮರೆತು ಹೋಗಿದ್ದ ಚಿನ್ನಾಭರಣ ಇದ್ದ ಪರ್ಸನ್ನು ಸಂಚಾರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ವಾಪಸ್‌ ಕೊಡಿಸಿದ ಘಟನೆ ನಡೆದಿದೆ.

Vijaya Karnataka Web 25 Aug 2017, 11:26 am
ಬೆಂಗಳೂರು: ಮಹಿಳೆಯೊಬ್ಬರು ಆಟೋದಲ್ಲೇ ಮರೆತು ಹೋಗಿದ್ದ ಚಿನ್ನಾಭರಣ ಇದ್ದ ಪರ್ಸನ್ನು ಸಂಚಾರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ವಾಪಸ್‌ ಕೊಡಿಸಿದ ಘಟನೆ ನಡೆದಿದೆ.
Vijaya Karnataka Web police return wallet to woman
ಚಿನ್ನಾಭರಣವಿದ್ದ ಪರ್ಸ್‌ ವಾಪಸ್‌ ನೀಡಿದ ಪೊಲೀಸರು


ಸೈಯದ್‌ ಸಫಿಯಾ ಎನ್ನುವವರು ಆ.23 ರಂದು ವಿಲ್ಸನ್‌ ಗಾರ್ಡನ್‌ನಲ್ಲಿ ಆಟೋ ಹತ್ತಿ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಇಳಿದಿದ್ದರು. ಇಳಿಯುವಾಗ ಪರ್ಸನ್ನು ಆಟೋದಲ್ಲೇ ಮರೆತು ಇಳಿದಿದ್ದರು. ತಾವು ಪರ್ಸ್‌ ಮರೆತದ್ದು ಅವರಿಗೆ ಅರ್ಧ ಗಂಟೆ ನಂತರ ಗೊತ್ತಾಗಿತ್ತು. ಆಟೋದಲ್ಲಿ ಕುಳಿತಿದ್ದಾಗ ಆಕಸ್ಮಿವಾಗಿ ಡಿಸ್‌ಪ್ಲೇ ಬೋರ್ಡ್‌ ನೋಡಿದ್ದರು. ಅದರಲ್ಲಿ ಆಟೋ ಚಾಲಕನ ಹೆಸರು ಮಾತ್ರ ನೆನಪಿತ್ತು.

ಆಟೊ ಚಾಲಕನ ಹೆಸರಿನ ಸುಳಿವಿನಲ್ಲಿ ಹೈಗ್ರೌಂಡ್‌ ಸಂಚಾರ ಠಾಣೆ ಪೊಲೀಸರಾದ ವಿಠಲ್‌ ಮತ್ತು ನರಸಿಂಹರಾಜು ಅವರು ಕೆಲವೇ ಗಂಟೆಗಳಲ್ಲಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಮಹಿಳೆಯ ಪರ್ಸ್‌ ವಾಪಸ್‌ ಕೊಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಹೆಸರೊಂದರಿಂದಲೇ ಆಟೋ ಚಾಲಕನನ್ನು ಪತ್ತೆಹಚ್ಚಿದ ಇಬ್ಬರು ಸಿಬ್ಬಂದಿಯ ಕರ್ತವ್ಯಪ್ರಜ್ಞೆಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ