ಆ್ಯಪ್ನಗರ

ಕೊರೊನಾ ಸೋಂಕಿಗೆ ಬೆಂಗಳೂರಿನ ಪಿಎಸ್‌ಐ ಸಾವು: ಇದುವರೆಗೆ 6 ಪೊಲೀಸರು ಬಲಿ!

ನಗರದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಮತ್ತೊಬ್ಬರು ಪೊಲೀಸ್‌ ಸಾವನ್ನಪ್ಪಿದ್ದಾರೆ. ಕಂಟ್ರೋಲ್‌ ರೂಂನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನಾಗರಾಜ್‌ ಎಂಬುವವರು ಮಂಗಳವಾರ ಸೋಂಕಿನಿಂದ ಮೃತರಾಗಿದ್ದಾರೆ.

Vijaya Karnataka Web 14 Jul 2020, 10:34 am
Vijaya Karnataka Web coronavirus police
ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಮತ್ತೊಬ್ಬರು ಪೊಲೀಸ್‌ ಸಾವನ್ನಪ್ಪಿದ್ದಾರೆ. ಕಂಟ್ರೋಲ್‌ ರೂಂನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನಾಗರಾಜ್‌ ಎಂಬುವವರು ಮಂಗಳವಾರ ಸೋಂಕಿನಿಂದ ಮೃತರಾಗಿದ್ದಾರೆ.

ಕೆಲ ದಿನಗಳ ಹಿಂದೆ ಪಿಎಸ್‌ಐ ನಾಗರಾಜ್‌ ಅವರಿಗೆ ಕೊರೊನಾ ವೈರಸ್‌ ದೃಢವಾಗಿತ್ತು. ಇವರದಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮಂಗಳವಾರ ಮೃತರಾಗಿದ್ದಾರೆ.

ಸೋಮವಾರ ಕೂಡ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿರುವ ಪೊಲೀಸ್‌ ಠಾಣೆಯ 7 ಸಿಬ್ಬಂದಿ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆಯ 5 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೆಲ ದಿನಗಳ ಹಿಂದಷ್ಟೇ ರೈಲ್ವೆ ಪೊಲೀಸ್‌ ಎಸ್ಪಿ ಕಚೇರಿಯ 7 ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಇದುವರೆಗೆ ಸುಮಾರು 50 ಪೊಲೀಸ್‌ ಠಾಣೆಗಳು ಸೀಲ್‌ಡೌನ್‌ ಆಗಿವೆ.

ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ ಹಾಗೂ ಮಗಳಿಗೂ ಕೊರೊನಾ ಸೋಂಕು ದೃಢ!

ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 6 ಮಂದಿ ಪೊಲೀಸರು ಮೃತಪಟ್ಟಂತೆ ಆಗಿದೆ. 600ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ಖಾತರಿಯಾಗಿದೆ. 1000ಕ್ಕೂ ಹೆಚ್ಚು ಪೊಲೀಸರು ಕ್ವರಂಟೈನ್‌ನಲ್ಲಿ ಇದ್ದಾರೆ. ಇದರಿಂದಾಗಿ ರಾಜ್ಯದ್ಯಂತ ಪೊಲೀಸ್ ಇಲಾಖೆಯಲ್ಲಿ ಭಯದ ವಾತಾವರಣ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ