ಆ್ಯಪ್ನಗರ

ರಸ್ತೆ ಗುಂಡಿ ಪಕ್ಕ ಸಿಎಂ, ಸಚಿವರ ಚಿತ್ರ ಬಿಡಿಸಿ ವ್ಯಂಗ್ಯ

ರಸ್ತೆ ಗುಂಡಿ ಕುರಿತು ವಿನೂತನ ಪ್ರತಿಭಟನೆ

Vijaya Karnataka 17 Oct 2017, 11:30 pm

ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕ್ರಮವನ್ನು ಖಂಡಿಸಿ ನವಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರು ಗುಂಡಿಗಳ ಪಕ್ಕದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್‌ ಅವರ ಚಿತ್ರ ಬಿಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka Web potholes in bangalore
ರಸ್ತೆ ಗುಂಡಿ ಪಕ್ಕ ಸಿಎಂ, ಸಚಿವರ ಚಿತ್ರ ಬಿಡಿಸಿ ವ್ಯಂಗ್ಯ


ಇಂದಿರಾನಗರದ 100 ಅಡಿ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮಗ್ಗುಲಲ್ಲಿ ಸಿಎಂ ಮತ್ತು ಸಚಿವರ ಭಿತ್ತಿ ಚಿತ್ರವನ್ನು ಬಿಡಿಸಿ ಸೋಮವಾರ ತಡರಾತ್ರಿ ಪ್ರತಿಭಟಿಸಿದರು. 'ನಾನು ಬೆಂಗಳೂರಿನ ಸಚಿವ, ಈ ರಸ್ತೆ ಗುಂಡಿಗಳಿಗೆ ಕಾರಣ ನಾನಾ?', 'ನಾನು ನಿಮ್ಮ ಸಿಎಂ, ಈ ರಸ್ತೆ ಗುಂಡಿಗೆ ಕಾರಣಾ ನಾನಾ?' ಎಂಬ ವಿಡಂಬನಾತ್ಮಕ ಸಾಲುಗಳನ್ನು ಚಿತ್ರದ ಅಡಿಯಲ್ಲಿ ಬರೆದು ಅಣಕವಾಡಲಾಗಿದೆ.

'ನಗರದ ಎಲ್ಲ ಶಾಸಕರು, ಬಿಬಿಎಂಪಿ ಸದಸ್ಯರಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಒಂದು ವಾರ ಗಡುವು ನೀಡಿದ್ದೇವೆ. ಈ ಅವಧಿಯೊಳಗೆ ರಸ್ತೆ ಗುಂಡಿ ದುರಸ್ತಿಪಡಿಸದಿದ್ದಲ್ಲಿ ಎಲ್ಲ ಗುಂಡಿಗಳ ಮುಂದೆ ಆಯಾ ಕ್ಷೇತ್ರದ ಭಿತ್ತಿಚಿತ್ರಗಳನ್ನು ಬಿಡಿಸಲಾಗುವುದು' ಎಂದು ನವಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

potholes in bangalore

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ