ಆ್ಯಪ್ನಗರ

ಪೌರ ಕಾರ್ಮಿಕರ ಗುತ್ತಿಗೆದಾರರಿಗೆ 7 ತಿಂಗಳಿಂದ ಬಾಕಿ ಹಣವನ್ನೇ ಪಾವತಿಸಿಲ್ಲ ಬಿಬಿಎಂಪಿ..!

ಬಿಬಿಎಂಪಿಯ ಆರ್ಥಿಕ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳೋದಾಗಿ ಬಿಬಿಎಂಪಿ ಭರವಸೆ ನೀಡಿದೆ. ಮೇ ತಿಂಗಳವರೆಗಿನ ಬಾಕಿ ಈಗಾಗಲೇ ಪಾವತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಬಾಕಿ ಪಾವತಿಸುವ ಸಾಧ್ಯತೆ ಇದೆ.

Bangalore Mirror Bureau 3 Nov 2020, 2:01 pm
ಬೆಂಗಳೂರು: ರಸ್ತೆಗಳಲ್ಲಿ ಗಂಟೆ ಬಾರಿಸುತ್ತಾ ಬೆಳ್ಳಂಬೆಳಗ್ಗೆಯೇ ಬರುವ ಪೌರಕಾರ್ಮಿಕರು, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಕೆಲಸ ನಿಲ್ಲಿಸಿದರೆ ಅಚ್ಚರಿ ಪಡಬೇಡಿ..! ಏಕೆಂದರೆ, ಕಳೆದ 7 ತಿಂಗಳಿಂದ ಈ ಪೌರಕಾರ್ಮಿಕರ ಗುತ್ತಿಗೆದಾರರಿಗೆ ಹಣವೇ ಸಿಕ್ಕಿಲ್ಲ..! ಹೀಗಾಗಿ,ನವೆಂಬರ್ 5 ರಿಂದ ಪೌರ ಕಾರ್ಮಿಕರು ಕಸ ಸಂಗ್ರಹ ಕಾರ್ಯ ನಡೆಸೋದಾಗಿ ಬೆದರಿಕೆ ಒಡ್ಡಿದ್ದಾರೆ.
Vijaya Karnataka Web garbage
ಸಾಂದರ್ಭಿಕ ಚಿತ್ರ


ಕಳೆದ 7 ತಿಂಗಳಿಂದ ಘನ ತ್ಯಾಜ್ಯ ನಿರ್ವಹಿಸುವ ಗುತ್ತಿಗೆದಾರರಿಗೆ ವೇತನ ಪಾವತಿ ಆಗಿಲ್ಲ. ಬಿಲ್ ಬಾಕಿ 360 ಕೋಟಿ ರೂ. ಹಾಗೆಯೇ ಉಳಿದು ಹೋಗಿದೆ ಎನ್ನುತ್ತಾರೆ, ಬಿಬಿಎಂಪಿ ಕಸ ನಿರ್ವಹಣೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯಂ.

ಬೆಂಗಳೂರು ನಗರದಲ್ಲಿ ಕಸ ನಿರ್ವಹಿಸುವ ಗುತ್ತಿಗೆದಾರರ ಜೊತೆಗೆ 1,200 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ಈ ಕಾರ್ಮಿಕರಿಗೆ ಗುತ್ತಿಗೆದಾರರೇ ತಮ್ಮ ಜೇಬಿನಿಂದ ಹಣ ಕೊಡುತ್ತಿದ್ದಾರೆ. ಇದೀಗ ಗುತ್ತಿಗೆದಾರರು ಉಳಿಸಿಟ್ಟಿದ್ದ ಹಣವೂ ಖಾಲಿಯಾಗಿದೆ. ಈ 7 ತಿಂಗಳಲ್ಲಿ ಗುತ್ತಿಗೆದಾರರು ಬಿಬಿಎಂಪಿಗೆ ಪ್ರತಿದಿನವೂ ರೌಂಡ್ಸ್ ಹಾಕಿದ್ದಾರೆ. ದಸರಾ ಸಂದರ್ಭದಲ್ಲೇ ಕಸ ಎತ್ತದಿರಲು ಗುತ್ತಿಗೆದಾರರು ನಿರ್ಧರಿಸಿದ್ದರು. ಆದ್ರೆ, ಹಬ್ಬದ ವೇಳೆ ಹಾಗೆ ಮಾಡುವುದು ಬೇಡ ಎಂದು ಮಾನವೀಯತೆ ಆಧಾರದ ಮೇಲೆ ತಮ್ಮ ಕಾರ್ಯ ಮುಂದುವರೆಸಿದ್ದರೆ. ಬಿಬಿಎಂಪಿ ಕೂಡಾ ಹಬ್ಬದ ವೇಳೆಗೆ ಹಣ ನೀಡುವ ಭರವಸೆ ನೀಡಿತ್ತು. ಆದ್ರೆ, ಇದೀಗ ನಿರೀಕ್ಷೆ ಹುಸಿಯಾಗಿದೆ.

ಹಸಿ ಕಸ ಸಂಗ್ರಹ ಯೋಜನೆ ಸಕ್ಸೆಸ್: ಕಸ ಸಂಗ್ರಹ ಪ್ರಮಾಣ ಸಾವಿರ ಟನ್‌ಗೆ ಏರಿಕೆ!

ಎಷ್ಟು ದಿನ ನಾವು ನಮ್ಮ ಕೈನಿಂದ ಪೌರ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಗುತ್ತಿಗೆದಾರರು. ಹೀಗಾಗಿ, ನವೆಂಬರ್ 5 ರಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಆ ನಿರ್ಧಾರ ಕೈಗೊಂಡರೆ, ನಗರಾದ್ಯಂತ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಏರಿಕೆ ಆಗಲಿದೆ.

ನದಿಗೆ ಕಸ ಎಸೆಯದಂತೆ ಇಡೀ ದಿನ ನಿಂತು ತಡೆದ ಹೃದಯವಂತ : ಅಪೂರ್ವ ಹೆಜ್ಜೆಗೆ ನೆಟ್ಟಿಗರ ಶ್ಲಾಘನೆ

ಪೌರ ಕಾರ್ಮಿಕರೂ ಕೂಡಾ ಸಂಬಳವಿಲ್ಲದೆ ದುಡಿಯಲು ಹೇಗೆ ಸಾಧ್ಯ. ಅವರಿಗೂ ತಮ್ಮ ಕುಟುಂಬ ನಿರ್ವಹಣೆ ಮಾಡಲು ಉದ್ಯೋಗ ಬೇಕೇ ಬೇಕು. ಜೊತೆಗೆ ಹೊಟ್ಟೆಪಾಡಿಗೆ ಸಂಬಳವೂ ಬೇಕು. ಮನೆಯ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲು ಅವರೂ ಕೂಡಾ ಪರಿತಪಿಸುತ್ತಿದ್ದಾರೆ. ಈ ವಿಚಾರವಾಗಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ. ರಣದೀಪ್ ಅವರನ್ನು ಸಂಪರ್ಕಿಸಿದರೆ ಅವರು ಆದಷ್ಟು ಬೇಗ ಬಾಕಿ ಪಾವತಿಗೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಬಿಬಿಎಂಪಿಯ ಆರ್ಥಿಕ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ. ಮೇ ತಿಂಗಳವರೆಗಿನ ಬಾಕಿ ಈಗಾಗಲೇ ಪಾವತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಬಾಕಿಯನ್ನೂ ಪಾವತಿಸೋದಾಗಿ ಮಾಹಿತಿ ನೀಡಿದ್ದಾರೆ.

ಮಲೆಮಹದೇಶ್ವರಕ್ಕೆ ಹೋಗುವ ಭಕ್ತರೇ ಹುಷಾರ್..! ಎಲ್ಲೆಂದರಲ್ಲಿ ಕಸ ಬಿಸಾಕಿದ್ರೆ ಕಾದಿದೆ ದಂಡ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ