ಆ್ಯಪ್ನಗರ

ಕಾರಾಗೃಹ ಇಲಾಖೆ ಎಐಜಿ ವೀರಭದ್ರ ಸ್ವಾಮಿ ನಿಧನ

ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅಸ್ವಸ್ಥರಾದ ಕಾರಾಗೃಹ ಇಲಾಖೆಯ ಸಹಾಯಕ ವೃತ್ತ ಮಹಾನಿರೀಕ್ಷಕ (ಎಐಜಿ) ವೀರಭದ್ರಸ್ವಾಮಿ (59) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Vijaya Karnataka 30 Jun 2018, 5:00 am
ಬೆಂಗಳೂರು: ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅಸ್ವಸ್ಥರಾದ ಕಾರಾಗೃಹ ಇಲಾಖೆಯ ಸಹಾಯಕ ವೃತ್ತ ಮಹಾನಿರೀಕ್ಷಕ (ಎಐಜಿ) ವೀರಭದ್ರಸ್ವಾಮಿ (59) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
Vijaya Karnataka Web prison department aig veerabhadra swamy died
ಕಾರಾಗೃಹ ಇಲಾಖೆ ಎಐಜಿ ವೀರಭದ್ರ ಸ್ವಾಮಿ ನಿಧನ


ಕೇಂದ್ರ ಕಚೇರಿಯಲ್ಲಿ ಎಡಿಜಿಪಿ ಎನ್‌.ಎಸ್‌. ಮೇಘರಿಕ್‌ ಅವರು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ವೀರಭದ್ರಸ್ವಾಮಿ, ಸಂಜೆ 6.30ರ ಸುಮಾರಿಗೆ ಕುಸಿದು ಬಿದ್ದಿದ್ದರು. ತಕ್ಷಣವೇ ಇತರ ಅಧಿಕಾರಿಗಳು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.

ವೀರಭದ್ರಸ್ವಾಮಿ ಅವರು ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ