ಆ್ಯಪ್ನಗರ

ಪಾಲಿಕೆ ಜಮೀನು ಅಡವಿಟ್ಟು 52 ಕೋಟಿ ರೂ. ಸಾಲ ಪಡೆದ ಖಾಸಗಿ ಸಂಸ್ಥೆ!

ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಂಸ್ಥೆಯೊಂದು ಬಿಬಿಎಂಪಿ ಜಮೀನನ್ನು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಅಡ ಇಟ್ಟು 52.75 ಕೋಟಿ ರೂ. ಸಾಲ ಪಡೆದು ವಂಚಿಸಿದೆ. ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳದ ಅಧೀಕಾರಿಗಳು ತನಿಖೆ ಆರಂಭಿಸಿದ್ದಾರೆ.

Vijaya Karnataka Web 9 Sep 2020, 9:51 pm
ಬೆಂಗಳೂರು: ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪನೆಗೆ ನೀಡಿದ್ದ ಜಮೀನನ್ನು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಅಡ ಇಟ್ಟು 52.75 ಕೋಟಿ ರೂ. ಸಾಲ ಪಡೆದು ವಂಚಿಸಿದ ಸಂಬಂಧ ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಸಂಸ್ಥೆ ಮತ್ತು ನಿವೃತ್ತ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
Vijaya Karnataka Web BBMP


ಬನಶಂಕರಿ 3ನೇ ಹಂತದಲ್ಲಿರುವ ಸಂಸ್ಥೆಯ ಕಚೇರಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ ಅವರ ಬನಶಂಕರಿಯಲ್ಲಿನ ಮನೆ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಲಿಂಗೇಗೌಡ ಅವರ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿನ ಮನೆ, ನಿವೃತ್ತ ಸಹಾಯಕ ಎಂಜಿನಿಯರ್‌ ಎಚ್‌.ಆರ್‌.ಚನ್ನಕೇಶವ ಅವರ ಮೈಸೂರಿನ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

2002ರಲ್ಲಿ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮದಲ್ಲಿ ಬಿಬಿಎಂಪಿ ವತಿಯಿಂದ ಘನತ್ಯಾಜ್ಯ ಇಂಧನ ಉತ್ಪಾದಿಸುವ ಘಟಕ ಸ್ಥಾಪಿಸಲು ಟೆಂಡರ್‌ ಮೂಲಕ ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಸಂಸ್ಥೆ ಆಯ್ಕೆಯಾಗಿತ್ತು. 2005ರ ಜೂನ್‌ನಲ್ಲಿ ಒಪ್ಪಂದವಾಗಿತ್ತು. ಅದಕ್ಕಾಗಿ 35 ಎಕರೆ ಜಮೀನನ್ನು ನೀಡಲಾಗಿತ್ತು.

ಬೆಂಗಳೂರಲ್ಲಿ ಮತ್ತೆ ಮಳೆಯ ಆರ್ಭಟ ಶುರು: ಬಗ್ಗಡದ ಗುಂಡಿಗಳಂತಾದ ರಸ್ತೆಗಳು

ಸಂಸ್ಥೆಯು 2006 ನವೆಂಬರ್‌ ಒಳಗಾಗಿ ಘಟಕ ಸ್ಥಾಪಿಸಬೇಕಿತ್ತು. ಆದರೆ, ಸಂಸ್ಥೆಯು ಘಟಕವನ್ನು ಸ್ಥಾಪನೆ ಮಾಡಲೇ ಇಲ್ಲ.ಮಂಜೂರಾಗಿದ್ದ ಜಮೀನನ್ನು ಬಿಬಿಎಂಪಿ ಅಕಾರಿಗಳ ಜತೆ ಸೇರಿ ಸಂಸ್ಥೆಯು ಅಕ್ರಮವಾಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಅಡ ಇಟ್ಟು 52.75 ಕೋಟಿ ರೂ. ಸಾಲ ಪಡೆದಿತ್ತು.

ಬೆಂಗಳೂರಿಗೆ ಈ ವರ್ಷ ಬರಲಿದೆ ಪ್ರತ್ಯೇಕ ಕಾನೂನು

ಅಲ್ಲದೆ, ಬಿಬಿಎಂಪಿಯಿಂದ ನೀಡಲಾಗುತ್ತಿದ್ದ ಘನತ್ಯಾಜ್ಯವನ್ನು ಸಂಸ್ಕರಣೆ ಮಾಡದಿದ್ದರೂ, 4.61 ಕೋಟಿ ರೂ. ಟಿಪ್ಪಿಂಗ್‌ ಶುಲ್ಕವನ್ನು ಪಡೆದು ಭಾರಿ ಅಕ್ರಮ ಎಸಗಲಾಗಿದೆ. ಯೋಜನೆ ವಿಫಲವಾದ ಕಾರಣ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು 2014ರಲ್ಲಿರದ್ದು ಮಾಡಲಾಗಿದೆ. ಅಲ್ಲದೆ, ಬಿಬಿಎಂಪಿಯಿಂದ ಸ್ವೀಕರಿಸುತ್ತಿದ್ದ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೆ ನೇರವಾಗಿ ಲ್ಯಾಂಡ್‌ಫಿಲ್‌ಗೆ ತುಂಬಿಸುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ